ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಉತ್ತರ ಕರ್ನಾಟಕದ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಗಾಗಿ ಕಾರ್ಯಾಚರಿಸುತ್ತಿರುವ ಮುಈನುಸುನ್ನಾ ಹಾವೇರಿ ವಿದ್ಯಾಸಂಸ್ಥೆಯ ಒಮಾನಿನ ಹಿತೈಷಿ ಗಳ ವತಿಯಿಂದ ಇಂದು ರಾತ್ರಿ 9ಗಂಟೆಗೆ ಅಲ್ ಖುವೈರ್ ಝವಾಬಿ ಮಸೀದಿ ಯ ಹತ್ತಿರ ಇರುವ CM ಸೆಂಟರ್ ನಲ್ಲಿ UPLIFT ವೈಚಾರಿಕ ಸಮಾವೇಶ ನಡೆಯಲಿದೆ.
ಸಾಮಾಜಿಕ ಅಭಿವೃದ್ಧಿ ಯ ವಿವಿಧ ಮಜಲುಗಳ ಕುರಿತು ನಡೆಯುವ ವೈಚಾರಿಕ ಸಮಾವೇಶದ ಅಧ್ಯಕ್ಷತೆಯನ್ನು ಒಮಾನಿನ ಹಿರಿಯ ಅನಿವಾಸಿ ನಾಯಕರೂ,DKSC ಇದರ ಅಧ್ಯಕ್ಷ ರೂ ಆದ ಮೋನಬ್ಬಾ ಹಾಜಿ ವಹಿಸಲಿದ್ದಾರೆ. KCFಅಂತರಾಷ್ಟ್ರೀಯ ಕೌನ್ಸಿಲ್ ನಾಯಕರಾದ ಸಯ್ಯಿದ್ ಆಬಿದ್ ಅಲ್ ಹೈದರೂಸ್ ತಂಙಳ್ ರವರ ಪ್ರಾರ್ಥನೆ ಯೊಂದಿಗೆ ಚಾಲನೆ ನೀಡಲಿರುವ ಕಾರ್ಯಕ್ರಮ ವನ್ನು KCF ಒಮಾನ್ ರಾಷ್ಟ್ರೀಯ ಅಧ್ಯಕ್ಷ ರಾದ ಅಲ್ ಹಾಜ್ ಅಯ್ಯೂಬ್ ಕೋಡಿ ಉದ್ಘಾಟಿಸಲಿದ್ದಾರೆ.
SSF ರಾಜ್ಯ ಕಾರ್ಯದರ್ಶಿ, ವಿವೇಕ್ ಫೌಂಡೇಶನ್ ಮ್ಯಾನೇಜಿಂಗ್ ಡೈರೆಕ್ಟರ್,ಮುಈನುಸುನ್ನಾ ವಿದ್ಯಾಸಂಸ್ಥೆಯ ನಿರ್ವಾಹಕ ರಾದ ಕೆ.ಎಂ ಮುಸ್ತಫಾ ನಈಮಿ ಹಾವೇರಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
KCF INCನಾಯಕರುಗಳಾದ ಜನಾಬ್ ಇಕ್ಬಾಲ್ ಬರಕ, ಹಂಝ ಕನ್ನಂಗಾರ್, ಇಬ್ರಾಹಿಂ ಹಾಜಿ ಆತ್ರಾಡಿ, ಉಬೈದುಲ್ಲಾ ಸಖಾಫಿ ಮಿತ್ತೂರು ಹಾಗು KCF ರಾಷ್ಟ್ರೀಯ ಕಾರ್ಯದರ್ಶಿ ಗಳಾದ ಸ್ವಾದಿಖ್ ಹಾಜಿ ಸುಳ್ಯಾ, ಕೋಶಾಧಿಕಾರಿ ಗಳಾದ ಆರಿಫ್ ಕೋಡಿ ಭಾಗವಹಿಸಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.