ತಿರುಪತಿ (ವಿಶ್ವ ಕನ್ನಡಿಗ ನ್ಯೂಸ್) : ಸಿನಿಮಾ ಕಥೆಗೆ ಹಿನ್ನಡೆಯಾಗುವ ಘಟನೆ ತಿರುಪತಿಯ ಅಂಬೇಡ್ಕರ್ ನಗರದಲ್ಲಿ ಕಳೆದ ದಿನ ನಡೆದಿದೆ. ಇಲ್ಲೊಬ್ಬ ಮಹಿಳೆ ತನ್ನ ಪತಿಯ ಹಳೆಯ ಗೆಳತಿ ಆತನನ್ನು ಹುಡುಕಿಕೊಂಡು ಬಂದಾಗ, ಗೆಳತಿಯೊಂದಿಗೆ ಪತಿಗೆ ಮದುವೆಯನ್ನು ಏರ್ಪಡಿಸಿದ್ದಲ್ಲದೆ, ಅದೇ ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ತಿರುಪತಿ ಜಿಲ್ಲೆಯ ಹಳೇ ನೆಲ್ಲೂರು ಜಿಲ್ಲೆಯ ಡಾಕಿಲಿಯ ಅಂಬೇಡ್ಕರ್ ನಗರದಲ್ಲಿ ನಡೆದಿರುವ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಮದುಮಗ ಕಲ್ಯಾಣ್ ಟಿಕ್ಟಾಕ್ನಲ್ಲಿ ವೀಡಿಯೊ ಮಾಡುತ್ತಿರುತ್ತಾನೆ. ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಕಡಪ ನಿವಾಸಿ ವಿಮಲಾ ಅವರನ್ನು ವಿವಾಹವಾಗಿದ್ದರು.
ಮದುವೆಗೂ ಮುನ್ನ ಕಲ್ಯಾಣ್ ವಿಶಾಖಪಟ್ಟಣಂ ಮೂಲದ ನಿತ್ಯಶ್ರೀ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ. ಬಳಿಕ ಈ ಹುಡುಗಿ ಇವರಿಂದ ದೂರವಾಗಿದ್ದರು. ಕೆಲ ದಿನಗಳ ಹಿಂದೆ ಕಲ್ಯಾಣ್ ಮತ್ತು ವಿಮಲಾ ನೆಮ್ಮದಿಯ ಜೀವನ ನಡೆಸುತ್ತಿರುವಾಗಲೇ ನಿತ್ಯಶ್ರೀ ಮತ್ತೆ ರಂಗ ಪ್ರವೇಶಿಸಿದ್ದರು. ಕಲ್ಯಾಣ್ ಮದುವೆಯಾಗಿರುವುದು ಗೊತ್ತಿದ್ದರೂ ನಿತ್ಯಶ್ರೀ ಅವನಲ್ಲಿ ತನ್ನನ್ನು ಮದುವೆ ಆಗುವಂತೆ ಕೇಳಿದ್ದಾಳೆ. ಇದನ್ನು ತಿಳಿದ ಮೊದಲ ಪತ್ನಿ ವಿಮಲಾ ಮುಂದಾಳತ್ವ ವಹಿಸಿ ತನ್ನ ಪತಿಯನ್ನು ಮದುವೆಮಾಡಿಸಿದ್ದಾಳೆ.
ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಲಾಗಿಲ್ಲ ಎಂದು ವರದಿಯಾಗಿದೆ. ಕಲ್ಯಾಣ್ ಬುಧವಾರ ಗ್ರಾಮದ ದೇವಸ್ಥಾನವೊಂದರಲ್ಲಿ ನಿತ್ಯಶ್ರೀ ಅವರನ್ನು ಮೊದಲ ಪತ್ನಿಯ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.