??????
ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಶ್ರೀಯೋಗಿನಾರೇಯಣ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆತ್ಮಬೋಧಾಮೃತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಜನ್ಮದ ಮಹತ್ವವನ್ನು ಕೈವಾರ ತಾತಯ್ಯನವರು ತಮ್ಮ ತತ್ವಗಳಲ್ಲಿ ತಿಳಿಸಿದ್ದಾರೆ ಸದಾಕಾಲ ಆತ್ಮದಲ್ಲಿ ಗುರುವಿನ ಚಿಂತನೆಯನ್ನು ಮಾಡಬೇಕು ಆತ್ಮದಲ್ಲಿ ಪರಮಾತ್ಮನ ಪುಣ್ಯವಾದ ನಾಮಸ್ಮರಣೆಯನ್ನು ಮಾಡಬೇಕು ಇದರಿಂದ ಎಷ್ಟೋ ಸಾವಿರಾರು ವರ್ಷಗಳಿಂದ ಇರುವ ಹುಟ್ಟುಸಾವಿನ ಚಕ್ರವನ್ನೇ ನಾಶ ಮಾಡಿ, ಭವಹರ ಮಾಡುವ ಶಕ್ತಿ ನಾಮಸ್ಮರಣೆಗೆ ಇದೆ. ಅಂತರಂಗದಲ್ಲಿ ನಾಮಸ್ಮರಣೆಯ ನಿರಂತರವಾಗಿ ಮಾಡಬೇಕು. ಕಣ್ಣಿನ ಗುಡ್ಡೆಯನ್ನು ಕಣ್ಣಿನ ರೆಪ್ಪೆಗಳು ಹೇಗೆ ರಕ್ಷಿಸುತ್ತದೆಯೋ ಹಾಗೆ ಪರಮಾತ್ಮನ ನಾಮಸ್ಮರಣೆಯು ನಮ್ಮನ್ನು ರಕ್ಷಿಸುತ್ತದೆ ಎಂದರು.
ಮನುಷ್ಯನಿಗೆ ಬಂಧಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ ಪ್ರಾಪಂಚಿಕ ಭೋಗಚಿಂತನೆಯಲ್ಲಿ ಆಸಕ್ತವಾದರೆ ಮನಸ್ಸು ಬಂಧನವಾಗುತ್ತದೆ ಭೋಗಚಿಂತನೆಯಿಂದ ಮುಕ್ತವಾದರೆ ಮನಸ್ಸು ಮುಕ್ತಿಗೆ ಕಾರಣವಾಗುತ್ತದೆ. ಆಸೆಯಿಂದ ಮಾನವನಿಗೆ ದು:ಖವು ಉಂಟಾಗುತ್ತದೆ ದುರಾಸೆಯ ಕಾರಣ ಭಯವೂ ಒದಗಬಹುದು ಯಾರು ಆಸೆಯಿಂದ ದೂರವಿರುವರೋ ಅವರಿಗೆ ಭಯವಾಗಲಿ, ದು:ಖವಾಗಲಿ ಇರುವುದಿಲ್ಲ ಎಂದರು.
ರಸ್ತೆಗಳನ್ನು ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು ಮಾತೆಯರು ಸುಂದರವಾದ ರಂಗೋಲಿಗಳನ್ನು ಹಾಕಿದ್ದರು ದಿಬ್ಬೂರು ಗ್ರಾಮದ ಈಶ್ವರ, ಲಕ್ಷ್ಮೀವೆಂಕಟೇಶ್ವರ, ಚನ್ನಕೇಶವಸ್ವಾಮಿ, ಗಂಗಮ್ಮ ಹಾಗೂ ಯೋಗಿನಾರೇಯಣ ತಾತಯ್ಯನವರ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು ನಂತರ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಧರ್ಮಾಧಿಕಾರಿಗಳಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಿದರು.
ರಾಮಕೋಟಿ ಸಮಿತಿಯ ಅಧ್ಯಕ್ಷ ಪುರದಗಡ್ಡೆ ಕೃಷ್ಣಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎನ್.ಎಸ್.ಸುಬ್ಬರಾಯಪ್ಪ, ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಶ ರಂಗಪ್ಪ, ಬಳೇಸ್ವಾಮಿ, ಪೆÇೀಸ್ಟ್ ಬೈರಪ್ಪ, ಮಂಚನಬಲೆ ಲಕ್ಷ್ಮಣ್, ರಮೇಶ್, ಗುಡಿಬಂಡೆ ಗಂಗಾಧರ್, ಗಂಗರೇಕಾಲುವ ಲಕ್ಷ್ಮಣಾಚಾರ್, ತಾಳಹಳ್ಳಿ ಮುನಿಯಪ್ಪ, ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್, ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಟ್ರಸ್ಟ್ ಸದಸ್ಯರಾದ ಬಾಗೇಪಲ್ಲಿ ಕೆ.ನರಸಿಂಹಪ್ಪ, ನಿವೃತ್ತ ಪುರಸಭಾ ಮುಖ್ಯ ಆಡಳಿತಾಧಿಕಾರಿ ಭದ್ರಾಚಲಂ ಹಾಗೂ ಮುಂತಾದವರು ಉಪಸ್ಥಿತರಿದ್ದರು. ದಿಬ್ಬೂರು, ಮಂಚನಬಲೆ, ಅಂಗರೇಖನನಹಳ್ಳಿ ಪಂಚಾಯಿತಿಯ ಗ್ರಾಮಸ್ಥರು, ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.