ಚಿಕ್ಕಬಳ್ಳಾಪುರ,(ವಿಶ್ವ ಕನ್ನಡಿಗ ನ್ಯೂಸ್): ರಾಜ್ಯಾದ್ಯಂತ ನಡೆದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ತವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅದರ ಬಿಸಿ ತಟ್ಟಿದೆ.
ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ತುರ್ತು ವಾಹನಗಳ ( ಆಂಬ್ಯೂಲೆನ್ಸ್) ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು ಆಂಬುಲೆನ್ಸ್ ಸೇವೆ ಬೇಕಾದಲ್ಲಿ 108 ಗೆ ಕರೆ ಮಾಡಿದಾಗ ತಕ್ಷಣ ಆಂಬ್ಯೂಲೆನ್ಸ್ ಸೇವೆ ಲಭ್ಯವಾಗುತ್ತಿತ್ತು ಆದರೇ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ನಾಗರಿಕರು ಕರೆ ಮಾಡಿದ ತಕ್ಷಣ ಅಂಬ್ಯೂಲೆನ್ಸ್ ಸೇವೆ ಇಲ್ಲದಂತಾಗಿದೆ ಯಾರಾದರೂ 108 ಸಿಬ್ಬಂದಿ ಪರಿಚಿತರಾಗಿದ್ದರೇ ಅಥವಾ ಆರೋಗ್ಯ ಕೇಂದ್ರದ ವೈದ್ಯರು ಅಥವಾ ಸಿಬ್ಬಂದಿ ಬಳಿ 108 ಸಿಬ್ಬಂದಿಗೆ ಕರೆ ಮಾಡಿದಾಗ ಮಾತ್ರ ತುರ್ತು ವಾಹನದ ಸೇವೆ ಲಭ್ಯವಾಗುತ್ತಿದೆ.
ಅಪಘಾತ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳನ್ನು ಅಥವಾ ರೋಗಿಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು 108ಗೆ ಕರೆ ಮಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ ಆದರೇ ತಾಂತ್ರಿಕ ದೋಷದಿಂದ ತುರ್ತು ವಾಹನದ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಬೇರೆ ಆಸ್ಪತ್ರೆಗೆ ತೆರಳಲು ರೋಗಿಗಳ ಸಂಬಂಧಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
2008ರಲ್ಲಿ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದರಿಂದ ಮದರ್ ರ್ಬೋರ್ಡ್ ನಲ್ಲಿ ತೊಂದರೆ ಕಾಣಿಸಿಕೊಂಡಿದೆ ಅದನ್ನು ದುರಸ್ಥಿಗೊಳಿಸುವ ಜೊತೆಗೆ ಹೊಸ ತಂತ್ರಾಂಶವನ್ನು ಅಳವಡಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆಯೆಂದು ಸ್ವತಃ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಮಧ್ಯಾಹ್ನ ಸ್ಪಷ್ಟಪಡಿಸಿದ್ದರು ನಂತರ ಸಂಜೆ ಹೊತ್ತಿಗೆ ಮತ್ತೊಮ್ಮೆ ಟ್ವೀಟ್ ಮಾಡಿದ ಆರೋಗ್ಯ ಸಚಿವರು 108 ಆಂಬ್ಯೂಲೆನ್ಸ್ ಸೇವೆಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ಮತ್ತು ಅಂಬ್ಯೂಲೆನ್ಸ್ ಸೇವೆಯಲ್ಲಿ ಯಾವುದೇ ಅಡಚಣೆಯಾಗದಂತೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಸ್ಥಾಪಿಸುವ ಕುರಿತಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವಿಡಿಯೋ ಸಂವಾದ ನಡೆಸಲಾಗಿದೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರೀಕೃತ ಕಾಲ್ ಸೆಂಟರ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರ ಕರೆಗೆ ಸ್ಪಂದಿಸಿ ಸೇವೆ ಒದಗಿಸಲಾಗುತ್ತಿದೆ ತಾತ್ಕಾಲಿಕವಾಗಿ ಬ್ಯಾಕ್ಆಪ್ ಸರ್ವರ್ ಅಳವಡಿಸಲಾಗಿದ್ದು ದೋಷಪೂರಿತ ಮುಖ್ಯ ಸರ್ವರ್ನನ್ನು ದುರಸ್ಥಿ ಮಾಡುವ ಕಾರ್ಯ ಚಾಲತಿಯಲ್ಲಿದೆ ಎಂದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 108 ತುರ್ತು ಆಂಬ್ಯೂಲೆನ್ಸ್ ಸೇವೆ ನಡೆಯುತ್ತಿದೆ ತಾಂತ್ರಿಕ ದೋಷ ಸರಿಹೋಗಿದೆ ನಾಗರಿಕರಿಂದ ಕರೆಗಳನ್ನು ಸ್ವೀಕರಿಸಿ ತುರ್ತು ಸೇವೆ ಒದಗಿಸುವ ಕೆಲಸವನ್ನು ಮಾಡುತ್ತಿದ್ದೇವೆ ಸರ್ವರ್ ಸಮಸ್ಯೆಯಿಂದ ಕೆಲವೊಂದು ಸಂದರ್ಭದಲ್ಲಿ ಕರೆ ಸಂಪರ್ಕ ಆಗಿದಿರ ಇರಬಹುದು ಆದರೇ ಸಮಸ್ಯೆ ಬಹುತೇಕ ಸರಿಹೋಗಿದೆ ಎಂದು 108 ಆಂಬ್ಯೂಲೆನ್ಸ್ ಸೇವೆಯ ಜಿಲ್ಲಾ ವ್ಯವಸ್ಥಾಪಕ ಗೋವಿಂದ್ ತಿಳಿಸಿದ್ದಾರೆ.
ವರದಿ: ತೇ.ಮೀಂ.ಅನ್ಸಾರಿ ಚಿಕ್ಕಬಳ್ಳಾಪುರ.
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.