(www.vknews.in) ಬಂಟ್ವಾಳ :ಮಕ್ಕಳು ಸರಿದಾರಿಗೆ ಬರಲು ಕೇವಲ ಮದರಸ ಶಿಕ್ಷಣ ಸಾಲದು, ಬದಲಿಗೆ ಹಿರಿಯರ, ಮನೆಯವರ, ನೆರೆ ಹೊರೆಯಲ್ಲಿ ವಾಸಿಸುವ ನಮ್ಮೆಲ್ಲರ ಇಸ್ಲಾಮಿಕ ಚೌಕಟ್ಟಿನನಲ್ಲಿ ಉತ್ತಮ ಸಂಸ್ಕಾರದಿಂದ ಕೂಡಿದ ನಮ್ಮ ಬದುಕನ್ನು ನೋಡಿ ಕಲಿಯಲು ಸಾಧ್ಯವಾದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಸಾಮಾಜಕ್ಕೆ ಮಾದರಿಯಾಗಲು ಸಾಧ್ಯ ಎಂದು ಮುಹಿದ್ದೀನ್ ಜುಮ್ಮಾ ಮಸೀದಿ ಮಿತ್ತಬೈಲ್ ಇದರ ಖತೀಬರಾದ ಬಹು! ಆಶ್ರಫ್ ಫೈಝಿ ಹೇಳಿದರು. ಉಮರಾ ನಾಯಕರು ಯುವಕರಿಗೆ ರೂಲ್ ಮೋಡಲ್ ಆಗಬೇಕು.ಇಂದಿನ ಯುವಕರೇ ಭವಿಷ್ಯದಲ್ಲಿ ಸಮುದಾಯದ ನೇತೃತ್ವ ವಹಿಸಲಿರುವ ನಾಯಕರು. ಈ ಯುವಕರು ಸುಸಂಸ್ಕೃತರಾಗಿ ಮಾರ್ಪಟ್ಟರೆ ಮಾತ್ರ ಸಮುದಾಯದ ಮುಂದಿನ ಭವಿಷ್ಯ ಒಳಿತಾಗಲು ಸಾಧ್ಯ. ಭವಿಷ್ಯ ದಲ್ಲಿ ನಮ್ಮ ಮಕ್ಕಳು ಹೆತ್ತವರಿಗೆ, ಸಮುದಾಯದಕ್ಕೆ ದೇಶಕ್ಕೆ ಕೀರ್ತಿ ತರುವoತೆ ಆಗಬೇಕು. ಇದಕ್ಕೆ ಮನೆಯಿಂದ ಸಂಸ್ಕೃತಿ, ಹಾಗೂ ಒಳಿತಿನ ಪಾಠವನ್ನು ಕಲಿಸಬೇಕು. ಓರ್ವ ಮುಸ್ಲಿಂ ವ್ಯಕ್ತಿಯ ಜೀವನ ಸರ್ವರಿಗೂ ಮಾದರಿಯಾಗಬೇಕು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.