ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಉದ್ಯೋಗಿಗಳ ಸ್ವಯಂಸೇವಾ ಕಾರ್ಯಕ್ರಮವಾದ ಐಕೇರ್ (ಐ–ಕಮ್ಯುನಿಟಿ ಆಕ್ಷನ್ ಟು ರೀಚ್ ಎವ್ರಿವನ್) ಮೂಲಕ ಸಂತಸವನ್ನು ಮೂಡಿಸುತ್ತಿದೆ.
ಬೆಂಗಳೂರು, (www.vknews.in): ಸಾಮಾಜಿಕ ಕಳಕಳಿಯ ಭಾಗವಾಗಲು ಉದ್ಯೋಗಿಗಳನ್ನು ಪ್ರೇರೇಪಿಸುವ ನಿರಂತರ ಪ್ರಯತ್ನಗಳೊಂದಿಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ತನ್ನ 24ನೇ ಐಕೇರ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಸ್ಪರ್ಶದ ಪ್ರಜ್ಞೆಯನ್ನು ಮತ್ತಷ್ಟು ಹೆಚ್ಚಿಸುವ ಸ್ಪರ್ಶ ಫಲಕಗಳನ್ನು ರಚಿಸಲು ಉದ್ಯೋಗಿಗಳು ಐಕೇರ್ ಕಾರ್ಯಕ್ರಮದ ಮೂಲಕ ಒಗ್ಗೂಡಿದ್ದರು.
ಐಕೇರ್ ಎಂಬುದು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉದ್ಯೋಗಿಗಳು ಭಾವನಾತ್ಮಕವಾಗಿ ಒಂದುಗೂಡುವ ವೇದಿಕೆಯಾಗಿದೆ. ಈ ಮಹತ್ವಾಕಾಂಕ್ಷೆ ಉದ್ದೇಶ ಈಡೇರಿಕೆಯಲ್ಲಿ ಪಾಲ್ಗೊಳ್ಳಲು ಉದ್ಯೋಗಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಒಂದಾಗಿ ವಿಶೇಷ ಕ್ಯೂರೇಟೆಡ್ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಮುದಾಯಕ್ಕೆ ಕೊಡುಗೆ ನೀಡಿದ ಭಾವನೆಯನ್ನು ಪಡೆಯಲಿದ್ದಾರೆ.
ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಶಿಕ್ಷಣವನ್ನು ಅವರಿಗೆ ನೀಡುವ ಅವಶ್ಯಕತೆಯಿದೆ. ಸ್ಪರ್ಶ ಫಲಕಗಳಂತಹ ಸಾಧನಗಳು, ಸಂವೇದನಾ ಫಲಕಗಳು, ವಿದ್ಯಾರ್ಥಿಗಳ ಜ್ಞಾನದ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಇಂತಹ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯನ್ನು ಬೆಂಬಲಿಸುವ ಕಾರ್ಯಕ್ರಮದ ಭಾಗವಾಗಿ ಐಕೇರ್ನ 150 ಸ್ವಯಂಸೇವಕರು, 3-10 ವರ್ಷಗಳ ವಯಸ್ಸಿನ ಗುಂಪಿನ ವಿದ್ಯಾರ್ಥಿಗಳಿಗೆ ವಿಷಯಾಧಾರಿತ ಸ್ಪರ್ಶ ಫಲಕಗಳನ್ನು ವಿನ್ಯಾಸಗೊಳಿಸಿದರು. ಪ್ರತಿ ಸ್ಪರ್ಶ ಫಲಕವನ್ನು ಶಾಲೆಗಳಲ್ಲಿ ಬಳಸಲಾಗುವುದು, ಇದು 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಕಲಿಕೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಸ್ಪರ್ಶದ ಪ್ರಜ್ಞೆಯನ್ನು ಹೆಚ್ಚಿಸಲು ಸ್ಪರ್ಶ ಫಲಕಗಳನ್ನು ವಿನ್ಯಾಸಗೊಳಿಸಲಾಗಿದೆ. ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಮೇಲ್ಮೈ ವಿನ್ಯಾಸದ ಬಗ್ಗೆ ಪ್ರಜ್ಞಾಪೂರ್ವಕ ಅರಿವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವ ವಸ್ತುಗಳಿಂದ ಮಾಡಲ್ಪಟ್ಟ ಈ ಬೋರ್ಡ್ಗಳನ್ನು ಕೈಗಳ ಶಿಕ್ಷಣ ಎಂದೂ ಕರೆಯಲಾಗುತ್ತದೆ. ಇವು ಮಕ್ಕಳು ಪರಿಣಾಮಕಾರಿಯಾಗಿ ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ.
ಈ ಚಟುವಟಿಕೆಯ ಬಗ್ಗೆ ಮಾತನಾಡಿದ ಟೊಯೋಟಾ ಗ್ರೂಪ್ ನ ವಿದೇಶಾಂಗ ವ್ಯವಹಾರಗಳ (ರಾಜ್ಯ) ಕಾರ್ಯನಿರ್ವಾಹಕ ಸಲಹೆಗಾರ ಶ್ರೀ ಟಿ.ಆರ್.ಪರಶುರಾಮನ್ ಅವರು “ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು, ಉದ್ಯೋಗಿಗಳೊಂದಿಗೆ ಸೇರಿನಾವು ವಾಸಿಸುವ ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಿರಂತರ ಪ್ರಯತ್ನಿಸುತ್ತವೆ. ಪ್ರತಿಯೊಂದು ಕಾರ್ಯಕ್ರಮದೊಂದಿಗೆ ನಾವು ಸಾಮಾಜಿಕ ಉದ್ದೇಶಕ್ಕೆ ಕೊಡುಗೆ ನೀಡಲು ಮತ್ತು ಸಮಾಜದಲ್ಲಿ ಬದಲಾವಣೆ ತರಲು ನಮ್ಮ ಉದ್ಯೋಗಿಗಳನ್ನು ಉತ್ತೇಜಿಸಲು ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ. ಈ ಉಪಕ್ರಮವು ದೃಷ್ಟಿಹೀನ ವಿದ್ಯಾರ್ಥಿಗಳಿಗೆ ವಿನ್ಯಾಸಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಸುತ್ತಲಿನ ಪರಿಸರದ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ. ಟಿಕೆಎಂನಲ್ಲಿ ಇಂತಹ ಪ್ರಜ್ಞಾಪೂರ್ವಕ ಪ್ರಯತ್ನಗಳೊಂದಿಗೆ, ಸಮಾಜ ಸುಧಾರಣೆಗಾಗಿ ಶ್ರಮಿಸಲು ಮತ್ತು ಸಮಾಜಕ್ಕೆ ಎನನ್ನಾದರೂ ಕೊಡುಗೆ ನೀಡಲು ಯುವ ಪೀಳಿಗೆಯನ್ನು ಪ್ರೋತ್ಸಾಹಿಸಲು ಶ್ರಮಿಸುತ್ತಿದ್ದೇವೆ” ಎಂದರು.
2017 ರಲ್ಲಿ ಪ್ರಾರಂಭವಾದಾಗಿನಿಂದ ಐಕೇರ್ ಅಗಾಧವಾಗಿ ಬೆಳೆದಿದೆ. ಇಲ್ಲಿಯವರೆಗೆ 57000 ಜನರನ್ನು ತಲುಪುವ ಮೂಲಕ ಸಮಾಜದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಪ್ರಸ್ತುತ, ಸುಮಾರು 1000 ಉದ್ಯೋಗಿಗಳು ಐಕೇರ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ, ಇದರ ಅಡಿಯಲ್ಲಿ ಉದ್ಯೋಗಿಗಳಿಗೆ ಸಮೃದ್ಧ ಅನುಭವವನ್ನು ನೀಡುವಾಗ ಸಮಾಜಕ್ಕೆ ಮತ್ತಷ್ಟು ಬೆಂಬಲಿ ನೀಡಲು ಮತ್ತು ಬದಲಾವಣೆ ತರಲು ವಿವಿಧ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಟಿಕೆಎಂನ ಸಿಎಸ್ಆರ್ ದೃಷ್ಟಿಕೋನಕ್ಕೆ ಅನುಗುಣವಾಗಿ ಶಿಕ್ಷಣ, ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ, ರಸ್ತೆ ಸುರಕ್ಷತೆ, ಕೌಶಲ್ಯ ಅಭಿವೃದ್ಧಿ ಮತ್ತು ವಿಪತ್ತು ನಿರ್ವಹಣೆಯ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತದೆ. ಈ ವೇದಿಕೆಯು ತಮ್ಮ ಬಿಡುವಿನ ವೇಳೆಯಲ್ಲಿ ಸಾಮಾಜಿಕ ಕಾರ್ಯಗಳಿಗೆ ಸ್ವಯಂಸೇವಕರಾಗಿ ಕೆಲಸ ಮಾಡುವುದರಿಂದ ಉದ್ಯೋಗಿಗಳು ಭಾವನಾತ್ಮಕವಾಗಿ ಸಶಕ್ತರಾಗುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.