(www. vknews.in)ಅಧುನಿಕ ಗ್ರಂಥಾಲಯಗಳು ಯಾವುದೇ ಶೈಕ್ಷಣಿಕ ಸಂಸ್ಥೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಬಲ್ಮಠ ಕಾಲೇಜು ಗ್ರಂಥಾಲಯವು ಇ-ಲೈಬ್ರೆರಿ ತಂತ್ರಾಂಶವನ್ನು ಅಳವಡಿಸುವುದರ ಮೂಲಕ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದೆ ಹಾಗೂ ಅಂತರರಾಷ್ಟ್ರೀೀಯ ಗುಣಮಟ್ಟಕ್ಕೆ ಏರಿಸಲಾಗಿದೆ” ಎಂದು ಕಾರ್ಕಳ ಮಂಜುನಾಥ ಪೈ ಮೆಮೋರಿಯಲ್ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಗ್ರಂಥಪಾಲಕರಾದ ಶ್ರೀ ವೆಂಕಟೇಶ್ ಅವರು ಹೇಳಿದರು. ಅವರು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇ-ಗ್ರಂಥಾಲಯದ ಉದ್ಘಾಟನೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ನವದೆಹಲಿಯ ರಾಷ್ಟ್ರೀಯ ಮಾಹಿತಿ ಕೇಂದ್ರವು ಇ-ಗ್ರಂಥಾಲಯದ ಮೂಲಕ ಗ್ರಂಥಾಲಯ ನಿರ್ವಹಣೆಯನ್ನು ಸರಳಗೊಳಿಸಿದೆ ಎಂದು ಅವರು ಹೇಳಿದರು. ಪ್ರಾಂಶುಪಾಲರಾದ ಪೆÇ್ರ. ಜಗದೀಶ ಬಾಳ ಅವರು ಇ-ಗ್ರಂಥಾಲಯವನ್ನು ಉದ್ಘಾಟಿಸಿ, ಗ್ರಂಥಾಲಯದ ವಿವಿಧ ಸೇವೆಗಳನ್ನು ಕಂಪ್ಯೂಟರ್ ಮೂಲಕ ವೀಕ್ಷಣೆ ಮಾಡಿ ಚಾಲನೆಯನ್ನು ನೀಡಿದರು ಹಾಗೂ “ಗ್ರಂಥಾಲಯ ಗಣಕೀಕರಣ ಇಂದಿನ ಆಗತ್ಯವಾಗಿದ್ದು, ಕಂಪ್ಯೂಟರ್ ತಂತ್ರಜ್ಣಾನದ ಅಳವಡಿಕೆಯೊಂದಿಗೆ ಇಡೀ ಗ್ರಂಥಾಲಯದ ಚಟುವಟಿಕೆಗಳಿಗೆ ಮಾದರಿಯಾಗಲಿದೆ” ಎಂದು ಹೇಳಿದರು. ಬಳಿಕ ಶ್ರೀ ವೆಂಕಟೇಶ್ ಅವರು ಇ-ಗ್ರಂಥಾಲಯದಲ್ಲಿ ಲಭ್ಯವಿರುವ ವಿವಿಧ ಸೇವೆಗಳನ್ನು ಉಪಯೋಗಿಸುವ ಬಗ್ಗೆ ಹ್ಯಾಂಡ್ಸ್ ಆನ್ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಂಥಾಲಯ ಮುಖ್ಯಸ್ಥರಾದ ಡಾ. ಶೈಲರಾಣಿ ಬೋಳಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಡಾ. ಚಂದ್ರಶೇಖರ್ ಕೆ. ವಂದನಾರ್ಪಣೆ ಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.