ಚಿಕ್ಕಬಳ್ಳಾಪುರ,(ವಿಶ್ವ ಕನ್ನಡಿಗ ನ್ಯೂಸ್): ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೇಕಡವಾರು ಅಂಕಗಳಿಕೆಯಲ್ಲಿಯೂ ತೀವ್ರವಾದ ಪೈಪೋಟಿ ಇರುವುದರಿಂದ ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಶಿಕ್ಷಣ ಪಡೆಯಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಿವೈಎಸ್ಪಿ ವಾಸುದೇವ್ ಸಲಹೆ ನೀಡಿದರು.
ನಗರದ ಮದೀನಾ ಶಾದಿ ಮಹಲ್ನಲ್ಲಿ ಲಿಟ್ರೆಸಿ ಇಂಟರ್ ನ್ಯಾಷನಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ಆಶ್ರಯದಲ್ಲಿ ಎಸ್ಎಸ್ಎಲ್ಸಿ,ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಇದುವರೆಗೂ ಚೆನ್ನಾಗಿ ಓದಿ ಉತ್ತಮ ಅಂಕಗಳಿಸಿದ ನಿಮಗೆ ಸಂಘ ಸಂಸ್ಥೆಗಳು ಗುರ್ತಿಸಿ ಸನ್ಮಾನ ಮಾಡುತ್ತಿವೆ ಇದು ನಿಮ್ಮ ಸಾಧನೆಗೆ ಸಂದ ಗೌರವ ಇದನ್ನ ಸ್ಪೂರ್ತಿಯಾಗಿ ಸ್ವೀಕರಿಸಿ ಮೇಲ್ಮಟ್ಟದ ಶಿಕ್ಷಣವನ್ನು ಇನ್ನಷ್ಟು ಮುತುವರ್ಜಿಯಿಂದ ಓದಿ ಉನ್ನತ ಸ್ಥಾನಗಳನ್ನ ಅಲಂಕರಿಸಿ ಸಮಾಜಮುಖಿ ಸೇವೆಗಳಿಗೆ ಮುಂದಾಗಿ ಎಂದರು.
ವಿದ್ಯಾರ್ಥಿಗಳು ಕಾಲಹರಣ ಮಾಡದೇ ಸತತ ಪರಿಶ್ರಮದೊಂದಿಗೆ ನಿರ್ಧಿಷ್ಟ ಗುರಿ ಸಾಧನೆಗೆ ಶ್ರಮಿಸಬೇಕು ಎಂದರಲ್ಲದೆ ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ತಮ್ಮ ಗುರಿಯ ಸಾಧನೆಯತ್ತ ಗಮನಹರಿಸಿ,ದೊರೆಯುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮವಾದ ಭವಿಷ್ಯ ರೂಪಿಸಿಕೊಂಡು ಸಮಾಜದ ಸತ್ಪ್ರಜೆಗಳಾಗಿ ಬೆಳೆಯಬೇಕು.ಸಂಘ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಅವರಲ್ಲಿ ಮತ್ತಷ್ಟು ಸಾಧಿಸುವ ಹುರುಪು ಮೂಡಲಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮರೆಡ್ಡಿ ಮಾತನಾಡಿ,ಶಿಕ್ಷಣವಿಲ್ಲದೆ ಬದುಕಬಹುದು,ಆದರೆ ಶಿಕ್ಷಣ ಪಡೆಯದೇ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಿಲ್ಲ,ಉನ್ನತ ಶಿಕ್ಷಣ ಪಡೆದವರಿಗೆ ಎಲ್ಲೆಡೆ ಮಾನ್ಯತೆ ದೊರೆಯಲಿದ್ದು,ಈ ನಿಟ್ಟಿನಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೇ ಉನ್ನತ ವ್ಯಾಸಂಗ ಮಾಡಬೇಕು.ಅಲ್ಲದೆ ಮಕ್ಕಳಿಗೆ ಪೋಷಕರು ಪ್ರೋತ್ಸಾಹಿಸಿ ಅವರಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡಬೇಕೆಂದರು.
ವಿಶೇಷ ಅಹ್ವಾನಿತರಾದ ಅಹ್ಮದ್ ಅಬ್ಬಾಸ್ ಮಾತನಾಡಿ,ಮಕ್ಕಳಿಗೆ ಕಾಲಕಾಲಕ್ಕೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು ಈ ನಿಟ್ಟಿನಲ್ಲಿ ಅಭಿನಂದನಾ ಸಮಾರಂಭಗಳು ಅವರನ್ನು ಪ್ರೋತ್ಸಾಹಿಸಲು ಉಪಯುಕ್ತವಾಗಿದೆ ಎಂದರು. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ ಎಂಬುದನ್ನು ಅರಿತು ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಸಂಸ್ಥೆಯು ಶ್ರಮಿಸುತ್ತಿದ್ದು,ಇಂದಿನ ಕಾರ್ಯಕ್ರಮದಲ್ಲಿ 220ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಲಿಟ್ರೆಸಿ ಇಂಟರ್ ನ್ಯಾಷನಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ಆಶ್ರಯದಲ್ಲಿ ಸನ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿಡಿಪಿಯು ಆನಂದ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್, ಡಾ; ಮೌಲಾನ ಮೀರ್ನಬಿ ರಝಾ ಆಬೀದಿ, ಲಿಟ್ರಸಿ ಟ್ರಸ್ಟ್ ( ಕ್ಯಾಲಿ ಫಾರ್ನಿಯ ಯು ಎಸ್ ಎ ) ಸೈಯದ್ ಮೊಹ್ಮದ್ ಅಖೀಲ್ ಅಧ್ಯಕ್ಷ ಅಂಜುಮನ್ ಜಾಫರಿಯ ಅಲಿಪೂರ್, ಅಹಮದ್ ಅಬ್ಬಸ್ ಪಿಎಚ್ಡಿ ಆಲಿಪೂರ್, ಮೀರ್ ತಖಿ ರಝಾ ಕಾರ್ಯದರ್ಶಿ ಲಿಟ್ರಸಿ ಟ್ರಸ್ಟ್, ಬಿಇಒ ಶೋಭ, ಹಝ್ರತ್ ಮೌಲಾನಾ ಶಾ ಖಾದ್ರಿ ರಫಾಯಿ ಜೀಲಾನಿ , ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಶನ್ ರಾಜ್ಯಾಧ್ಯಕ್ಷ ಎಂ.ಎಂ. ಬಾಷಾ, ಸುಲೈಮಾನ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.