ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಇಡೀ ಜಗತ್ತೇ ಅನಾಚಾರ,ಆಧಾರ್ಮಿಕತೆಯ ಅಂದಕಾರದಲ್ಲಿ ಮುಳುಗಿದ್ದ ಕಾಲ,ಸುಳ್ಳು ಸುಲಿಗೆ ಹೇರಳವಾಗಿದ್ದ ಕಾಲ,ಮದ್ಯಪಾನದ ಮದ ತಲೆಗೆ ಅಡರಿದ್ದ ಕಾಲ,ಹುಟ್ಟಿದ ಮಗು ಹೆಣ್ಣಾಗಿದ್ದರೆ ಜೀವಂತವಾಗಿ ಹೂಳುತ್ತಿದ್ದ ಕಾಲ…ಒಟ್ಟಿನಲ್ಲಿ ಅನೈತಿಕತೆ ತಾಂಡವಾಡುತ್ತಿದ್ದ ಬೀಕರ ಸನ್ನಿವೇಶ…
ಅರೇಬಿಯಾ ಮರುಭೂಮಿಯಲ್ಲಿ ಅಬ್ದುಲ್ಲಾ ಆಮೀನಾ ದಂಪತಿಗಳ ಎಕೈಕ ಸುಪುತ್ರನಾಗಿ ಜನಿಸಿದ ಪುಣ್ಯ ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರು ತನ್ನ ಆದರ್ಶ ಬದುಕಿನ ಮೂಲಕ ಕ್ರಾಂತಿಯನ್ನೇ ಸೃಷ್ಟಿಸಿದರು.. ಆಮಾನವೀಯತೆಯನ್ನು ನೆಚ್ಚಿಕೊಂಡಿದ್ದ ಜನರನ್ನು ಮಾನವೀಯತೆಯ ವಿರಾಟ್ ಅಂಬಾಸಿಡರ್ಗಳಾದರು. ಹೆಣ್ಣನ್ನು ಭೋಗ ವಸ್ತು ವಾಗಿ ಕಂಡಿದ್ದ ಜನತೆಯು “ಹೆಣ್ಣಿನ ಕಾಲಡಿಯಲ್ಲಿ ಸ್ವರ್ಗವಿದೆ ” ಎಂಬ ಸಂದೇಶವನ್ನು ಜಗತ್ತಿಡೀ ಪಸರಿಸಿದರು. ಮದ್ಯಪಾನ ದ ದಾಸರಾಗಿದ್ದ ಜನತೆ “ಮದ್ಯಪಾನ ಎಲ್ಲಾ ಕೆಡುಕುಗಳ ಮೂಲ” ಎಂಬ ಸಂದೇಶವನ್ನು ಜಗತ್ತಿಡೀ ಹರಡಿದರು.
ಕ್ಷುಲ್ಲುಕ ಕಾರಣಗಳಿಗೆ ನರಮೇದ ನಡೆಸುತ್ತಿದ್ದ ಜನತೆ “ಒಬ್ಬ ಮನುಷ್ಯ ನನ್ನು ಕೊಂದರೆ ಆತ ಇಡೀ ಮಾನವಕುಲವನ್ನೇ ಕೊಂದಂತೆ.ಒಬ್ಬಾತ ಒಬ್ಬ ನನ್ನು ಬದುಕಿಸಿದರೆ ಆತ ಇಡೀ ಮನುಕುಲವನ್ನೇ ಬದುಕಿಸಿದಂತೆ” ಎಂಬ ಸಂದೇಶವನ್ನು ಜಗತ್ತಿಡೀ ಪಸರಿಸಿದರು. ನೈತಿಕತೆಯ ವಾಹಕರಾಗಿ ಹೊಸ ಜಗತ್ತನ್ನು ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರು ಅಂದು ಸೃಷ್ಟಿ ಸಿದರು….
ಮತ್ತೊಂದೆಡೆ ಅನೈತಿಕತೆಯ ವಾಹಕರು ನಬಿಯವರನ್ನು ಕಟುವಾಗಿ ವಿರೊದಿಸಿದರು,ಹಿಂಸಿಸಿದರು,ಎಲ್ಲಾ ರೀತಿಯ ದಿಗ್ಬಂದನಗಳನ್ನು ಹೇರಿದರು ಕೊನೆಗೆ ಜನ್ಮ ನಾಡನ್ನು ಬಿಟ್ಟು ದೂರದ ಮದೀನಾ ಕ್ಕೆ ವಲಸೆ ಹೋಗಬೇಕಾಯಿತು. ಅಲ್ಲೂ ವಿಶ್ವ ಮಾನವೀಯತೆಯ ರಾಜದಾನಿಯನ್ನು ಸೃಷ್ಟಿ ಸಿದರು.. ಕಾಲಕ್ರಮೇಣ ತನ್ನನ್ನು ಒದ್ದೋಡಿಸಿದ ಸ್ವಂತ ಊರಾದ ಮಕ್ಕಾ ರಾಜ್ಯ ತನ್ನ ಅದೀನದಲ್ಲಿ ಬಂದಾಗ,ತಲೆ ತಗ್ಗಿಸಿ ನಿಂತ ಶತ್ರು ಬಳಗ,ರಾತ್ರೊರಾತ್ರಿ ಸ್ವಂತ ಊರಿಂದ ವಲಸೆ ಹೊಗಲು ಕಾರಣ ಕರ್ತರಾದವರು, ತನ್ನ ಅಸಂಖ್ಯಾತ ಶಿಷ್ಯಂದಿರನ್ನು ಕೊಂದು ತೇಗಿದವರು,ತಾನು ಸಾಷ್ಟಾಂಗ ದಲ್ಲಿ ದ್ದಾಗ ಮಲಿನವಾದ ಒಂಟೆಯ ಕೊರಲನ್ನು ತಲೆಯ ಮೇಲೆ ಹಾಕಿದವರು. ಎಲ್ಲರಿಗೂ ಸಾಮೂಹಿಕ ಕ್ಷಮದಾನ ನೀಡಿ ವಿಶ್ವ ಚರಿತ್ರೆ ಯಲ್ಲಿ ರಕ್ತದೋಕುಲಿಯ ವಿರುದ್ದ ಸಮರ ಸಾರಿ ಸ್ವರ್ಣ ಲಿಪಿಯಲ್ಲಿ ಚರಿತ್ರೆ ಬರೆದಿಟ್ಟ ಪುಣ್ಯ ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ… ಮಾನವೀಯತೆಯ,ಸಾಮರಸ್ಯದ,ಪರಸ್ಪರ ಸಹಕಾರದ ಅರ್ಥ ಪೂರ್ಣ ಜಗತ್ತನ್ನು ವಿಶ್ವದಾದ್ಯಂತ ಕಟ್ಟು ಬೆಳೆಸಿದರು.
ವರ್ಷ ಗಳು ಸಾವಿರ ದಾಟಿದವು..
ಇಂದು ಮಾನವನು ವಿಜ್ಞಾನ ತಂತ್ರಜ್ಞಾನ ದ ಆಸರೆ ಯಲ್ಲಿ ಅಭಿವೃದ್ಧಿ ಉತ್ತುಂಗದಲ್ಲಿದ್ದರೂ ತನ್ನ ಮನಸ್ಸನ್ನು ಅರ್ಥೈಸುವಲ್ಲಿ, ನಿಯಂತ್ರಿಸುವಲ್ಲಿ ಸಂಪೂರ್ಣ ವಿಪಲನಾಗಿದ್ದಾನೆ. ಸೌಲಭ್ಯಗಳು, ಸೌಕರ್ಯ ಗಳು ಹೇರಳವಾಗಿದ್ದರೂ..ಮನಸ್ಸು ಸದಾ ಖಿನ್ನತೆ ಯಿಂದ ಚಡಪಡಿಸುತ್ತಿದೆ. ರಸ್ತೆ ಗಳು ವಿಶಾಲವಾಗಿದ್ದರೂ..ದೃಷ್ಟಿಕೊನಗಳು ಸಂಕುಚಿತವಾಗಿದೆ.
ಮನೆ ಮಾಳಿಗೆಗಳು ದೊಡ್ಡ ದಾಗುತ್ತಿದ್ದರೂ ಮನಸ್ಸು ಚಿಕ್ಕದಾಗುತ್ತಿದೆ. ವಿದ್ಯಾರ್ಹತೆಗಳು ಹೆಚ್ಚುತ್ತಿದೆಯಾದರೂ ಸಮಾನ್ಯ ಜ್ನಾನ ಕಡಿಮೆಯಾಗುತ್ತಿದೆ. ಔಷದಿ ಕಂಡು ಹಿಡಿತಗಳು ಹೆಚ್ಚುತ್ತಿವೆಯಾದರೂ ಆರೊಗ್ಯ ಕಡಿಮೆಯಾಗುತ್ತಿದೆ.
ಆಸ್ತಿ ಪಾಸ್ತಿಗಳ ಮೌಲ್ಯ ಹೆಚ್ಚುತ್ತಿದೆಯಾದರೂ ಮಾನವೀಯತೆಯ ಮೌಲ್ಯ ಕುಸಿಯುತ್ತಿದೆ. ಮಾತುಗಾರಿಕೆಗಳು ಹೆಚ್ಚುತ್ತಿವೆಯಾದರೂ ಮನಸ್ಸಿನ ಪ್ರೀತಿ ಕಡಿಮೆಯಾಗುತ್ತಿದೆ. ತಂತ್ರಜ್ಞಾನ ಗಳು ಚಂದ್ರಲೋಕವನ್ನು ಮೀರಿಸಿದೆ.. ಆದರೆ ನರೆಕರೆಯವರ ಸುಃಖದುಃಖದಲ್ಲಿ ಇಂದಿನ ಮನುಷ್ಯ ಬಾಗಿಯಾಗುವುದಿಲ್ಲ. ಬ್ರಷ್ಟಚಾರ ಅಬಿವೃದ್ದಿಗೆ ತೊಡಕಾಗುತ್ತಿದೆ. ಕೋಮುವಾದ, ಪ್ಯಾಸಿಸ್ಟ್ ಶಕ್ತಿಗಳ ಉಪಟಳದಿಂದ ಜಗತ್ತು ನಡುಗುತ್ತಿದೆ.
ವಿಶ್ವ ದ ಆರ್ಥಿಕ ಪರಿಸ್ಥಿತಿ ಸುದಾರಿಸುತ್ತಿದೆ. ಆದರೆ ನೈತಿಕತೆ ಕುಸಿಯುತ್ತಿದೆ. ಒಟ್ಟಿನಲ್ಲಿ ಜಗತ್ತು ಇಂದು ಸಂಕೀರ್ಣ ಸಮಸ್ಯೆಗಳಿಂದ ಪರಿತಪಿಸುತ್ತಿದೆ… ಸಮಸ್ಯೆ ಗಳೇ ಸಾದನೆಗಳಾಗುತ್ತಿದೆ… ಪರಿಹಾರ ವೊಂದೆ… ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರ ಸಂದೇಶ ದತ್ತ ಮರಳುವುದು. ಅವರ ಆದೇಶ ಗಳನ್ನು ಕಾಯಾ-ವಾಚಾ-ಕರ್ಮಣಾ ಅನುಸರಿಸುವುದು.. ಅಶಾಂತಿಯ ಜಗತ್ತಿಗೆ ಶಾಂತಿಯ ಪ್ರವಾದಿ ಯ ಪ್ರೀತಿಯ ಸಿಂಚನವೇ..ರಹದಾರಿ… ಇಡೀ ಜಗತ್ತೇ ಅನಾಚಾರ,ಆಧಾರ್ಮಿಕತೆಯ ಅಂದಕಾರದಲ್ಲಿ ಮುಳುಗಿದ್ದ ಕಾಲ,ಸುಳ್ಳು ಸುಲಿಗೆ ಹೇರಳವಾಗಿದ್ದ ಕಾಲ,ಮದ್ಯಪಾನದ ಮದ ತಲೆಗೆ ಅಡರಿದ್ದ ಕಾಲ,ಹುಟ್ಟಿದ ಮಗು ಹೆಣ್ಣಾಗಿದ್ದರೆ ಜೀವಂತವಾಗಿ ಹೂಳುತ್ತಿದ್ದ ಕಾಲ…ಒಟ್ಟಿನಲ್ಲಿ ಅನೈತಿಕತೆ ತಾಂಡವಾಡುತ್ತಿದ್ದ ಬೀಕರ ಸನ್ನಿವೇಶ…
ಅರೇಬಿಯಾ ಮರುಭೂಮಿಯಲ್ಲಿ ಅಬ್ದುಲ್ಲಾ ಆಮೀನಾ ದಂಪತಿಗಳ ಎಕೈಕ ಸುಪುತ್ರನಾಗಿ ಜನಿಸಿದ ಪುಣ್ಯ ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರು ತನ್ನ ಆದರ್ಶ ಬದುಕಿನ ಮೂಲಕ ಕ್ರಾಂತಿಯನ್ನೇ ಸೃಷ್ಟಿಸಿದರು.. ಆಮಾನವೀಯತೆಯನ್ನು ನೆಚ್ಚಿಕೊಂಡಿದ್ದ ಜನರನ್ನು ಮಾನವೀಯತೆಯ ವಿರಾಟ್ ಅಂಬಾಸಿಡರ್ಗಳಾದರು. ಹೆಣ್ಣನ್ನು ಭೋಗ ವಸ್ತು ವಾಗಿ ಕಂಡಿದ್ದ ಜನತೆಯು “ಹೆಣ್ಣಿನ ಕಾಲಡಿಯಲ್ಲಿ ಸ್ವರ್ಗವಿದೆ ” ಎಂಬ ಸಂದೇಶವನ್ನು ಜಗತ್ತಿಡೀ ಪಸರಿಸಿದರು. ಮದ್ಯಪಾನ ದ ದಾಸರಾಗಿದ್ದ ಜನತೆ “ಮದ್ಯಪಾನ ಎಲ್ಲಾ ಕೆಡುಕುಗಳ ಮೂಲ” ಎಂಬ ಸಂದೇಶವನ್ನು ಜಗತ್ತಿಡೀ ಹರಡಿದರು. ಕ್ಷುಲ್ಲುಕ ಕಾರಣಗಳಿಗೆ ನರಮೇದ ನಡೆಸುತ್ತಿದ್ದ ಜನತೆ “ಒಬ್ಬ ಮನುಷ್ಯ ನನ್ನು ಕೊಂದರೆ ಆತ ಇಡೀ ಮಾನವಕುಲವನ್ನೇ ಕೊಂದಂತೆ.ಒಬ್ಬಾತ ಒಬ್ಬ ನನ್ನು ಬದುಕಿಸಿದರೆ ಆತ ಇಡೀ ಮನುಕುಲವನ್ನೇ ಬದುಕಿಸಿದಂತೆ” ಎಂಬ ಸಂದೇಶವನ್ನು ಜಗತ್ತಿಡೀ ಪಸರಿಸಿದರು. ನೈತಿಕತೆಯ ವಾಹಕರಾಗಿ ಹೊಸ ಜಗತ್ತನ್ನು ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರು ಅಂದು ಸೃಷ್ಟಿ ಸಿದರು….
ವಿಶ್ವ ದ ಆರ್ಥಿಕ ಪರಿಸ್ಥಿತಿ ಸುದಾರಿಸುತ್ತಿದೆ. ಆದರೆ ನೈತಿಕತೆ ಕುಸಿಯುತ್ತಿದೆ. ಒಟ್ಟಿನಲ್ಲಿ ಜಗತ್ತು ಇಂದು ಸಂಕೀರ್ಣ ಸಮಸ್ಯೆಗಳಿಂದ ಪರಿತಪಿಸುತ್ತಿದೆ… ಸಮಸ್ಯೆ ಗಳೇ ಸಾದನೆಗಳಾಗುತ್ತಿದೆ… ಪರಿಹಾರ ವೊಂದೆ… ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರ ಸಂದೇಶ ದತ್ತ ಮರಳುವುದು. ಅವರ ಆದೇಶ ಗಳನ್ನು ಕಾಯಾ-ವಾಚಾ-ಕರ್ಮಣಾ ಅನುಸರಿಸುವುದು.. ಅಶಾಂತಿಯ ಜಗತ್ತಿಗೆ ಶಾಂತಿಯ ಪ್ರವಾದಿ ಯ ಪ್ರೀತಿಯ ಸಿಂಚನವೇ..ರಹದಾರಿ…
✍️ಇಮ್ರಾನ್ ರೆಂಜಲಾಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.