(ವಿಶ್ವ ಕನ್ನಡಿಗ ನ್ಯೂಸ್) : ಕೊರೋನದಲ್ಲಿ ಮೃತಪಟ್ಟ ಮೃತದೇಹವನ್ನು ಆಯಾಯ ಧರ್ಮದ ರೀತಿಯಿಂದ ಅತ್ಯಂತ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಧೈರ್ಯದಿಂದ ದೇಶದಲ್ಲಿ ಪ್ರಾರಂಭಿಸಿದ್ದೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. ಅದಲ್ಲದೇ ಪ್ರಳಯ, ವಿಮಾನ ದುರಂತ, ಪ್ರಾಕ್ರತಿಕ ವಿಕೋಪದಂತಹ ಸಂಧರ್ಭದಲ್ಲಿ ಮಾನವೀಯ ಸೇವೆಗಳನ್ನು ಮಾಡಿ ಮಾದರಿಯಾಗುತ್ತಿರುವವರೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. ಒಂದು ಕಾಲದಲ್ಲಿ ರೋಗಿಗಳಿಗೆ ರಕ್ತದ ಬೇಡಿಕೆ ಇದ್ದಾಗ ರಕ್ತವು ಒಂದು ದಂದೆಯಾಗಿತ್ತು ಮತ್ತು ಮಾಫಿಯವಾಗಿತ್ತು. ಆದರೆ ಸಾಮೂಹಿಕ ರಕ್ತದಾನ ಕಾರ್ಯಕ್ರಮ ನಡೆಸುವ ಮೂಲಕ ಯುವಕರಲ್ಲಿ ಹಾಗೂ ಮಹಿಳೆಯರಲ್ಲಿ ರಕ್ತದಾನ ಅಭಿಯಾನ ಪ್ರಾರಂಭಿಸಿದವರೇ ಇದೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ.
ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸ್ಕೂಲ್ ಕಿಟ್ , ಸ್ಕಾಲರ್ಶಿಪ್ ವಿತರಿಸುವ. ಹಬ್ಬ ಹರಿದಿನಗಳಲ್ಲಿ ಆಹಾರಪೊಟ್ಟಣಗಳನ್ನು ಬಡವರಿಗೆ ಹಂಚಿ ಅವರನ್ನು ಸಂತೋಷ ಪಡಿಸುವ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಂತಹಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ಆಪಾದಿಸಿರುವ ಆರೋಪಿಗಳು ಸುಳ್ಳಿನ ಸರಮಾಲೆಯಾಗಿದೆ. ಅವರು ಸಮಾಜಕ್ಕೆ ಕೊಡುಯಾಗಿದ್ದಾರೆಯೇ ಹೊರತು ಮಾರಕವಲ್ಲ. ಎಲ್ಲಾ ರೀತಿಯ ಸಮಾಜಸೇವೆ, ಆಹಾರ ಕಿಟ್, ವೈವಿಧ್ಯಮಯ ಯಶಸ್ವೀ ಕಾರ್ಯಕ್ರಮಗಳನ್ನು ಮಾಡಿ ತೋರಿಸಿದ್ದೇ ಇದೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ.
ಸರ್ಕಾರವನ್ನು ಮತ್ತು ಅದರ ತಪ್ಪುಗಳನ್ನು ವಿರೋಧಿಸಿದ ಕಾರಣ ಅವರ ವಿರುದ್ಧ ಸರಕಾರೀ ಏಜೆನ್ಸ್ ಗಳನ್ನು ಛೂ ಬಿಟ್ಟು ದುರ್ಬಳಕೆ ನಡೆಸುತ್ತಿರುವುದನ್ನು ನಾನು ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸುತ್ತೇನೆ. ಅದೂ ಅಲ್ಲದೇ ಮಾಧ್ಯಮಗಳು ಕಥೆಗಳನ್ನು ಹೆಣೆದು ಸಮಾಜದಲ್ಲಿ ಧರ್ಮಗಳ ನಡುವೆ ಕಂದಕ ನಿರ್ಮಿಸಲು ಪ್ರಯತ್ನಿಸುತ್ತಿದೆ. 22ರಂದು ಬೆಳಗ್ಗಿನ ಜಾವ 4ಗಂಟೆಗೆ ಬಂಧಿಸಿದ್ದರು, ಆದರೆ 11ಗಂಟೆಗೆ ಮಾಧ್ಯಮದವರಿಗೆ ಪಿಎಫ್ಐ ನ ಎಲ್ಲಾ ಕರಾಳ ಕಥೆಗಳು ಗೊತ್ತಾಯಿತಂತೆ. ಇದರಲ್ಲೇ ಸ್ಪಷ್ಟವಾಗುತ್ತಿದೆ ಇದೊಂದು ಪೂರ್ವಯೋಜಿತ ಯೋಜನೆಯಾಗಿದೆ ಮತ್ತು ರಾಜಕೀಯ ದುರುದ್ದೇಶವಾಗಿದೆ.
ದೇಶದಲ್ಲಿ ರೈಡ್ ಮಾಡಲು ಬಹಳಷ್ಟು ಜಾಗಗಳಿವೆ. ತಾಕತ್ತಿದ್ದರೆ ಅಲ್ಲಿಗೆ ನೇರವಾಗಿ ಹೋಗಲಿ ಮತ್ತು ಮಾಧ್ಯಮಗಳು ಬಾಲಮಂಗಳದ ಕಥೆಯನ್ನು ನಿಲ್ಲಿಸಲಿ.
– ಡಾ.ಸುಮತಿ.ಎಸ್.ಹೆಗ್ಡೆ (ಅಧ್ಯಕ್ಷೆ, ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.