ಸುರತ್ಕಲ್ (ವಿಶ್ವಕನ್ನಡಿಗ ನ್ಯೂಸ್): ಸುರತ್ಕಲ್ನ ಮೊಹಿಯುದ್ದೀನ್ ಜುಮಾ ಮಸೀದಿ ಸಭಾಂಗಣದಲ್ಲಿ ಅಲ್ ಮದ್ರಸತುಲ್ ಬದ್ರಿಯಾ ಮದ್ರಸಾ ಸಮಿತಿ ಹಾಗೂ ಹಳೇ ವಿದ್ಯಾರ್ಥಿ ಸಂಘ ಇದರ ಜಂಟಿ ಆಶ್ರಯದಲ್ಲಿ ನಡೆದ ಸ್ವಲಾತ್ ಮಜ್ಲಿಸ್ ವಾರ್ಷಿಕ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ಬುಧವಾರ ನಡೆಯಿತು. ಅಸ್ಸಯ್ಯಿದ್ ಶಿಹಾಬುದ್ದೀನ್ ಅಹ್ದಲ್ ತಂಙಳ್ ಮುತ್ತನ್ನೂರು ರವರ ಸ್ವಲಾತ್ ಮಜ್ಲಿಸ್ಗೆ ನೇತೃತ್ವ ನೀಡಿದರು. ಮುಖ್ಯ ಅತಿಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭಾಗವಹಿಸಿ ಮಾತನಾಡಿದರು.
ಹಾಫಿಝ್ ಸುಲೈಮಾನ್ ಹನೀಫಿ ಪಾಣೆಮಂಗಳೂರು, ಆತೂರು ಇಬ್ರಾಹೀಂ ಸಖಾಫಿ, ಐ ಯಾಕೂಬ್, ಅಬ್ದುಲ್ ಅಝೀಝ್ ಸುರತ್ಕಲ್, ಸಿದ್ದೀಖ್ ನಿಝಾಮಿ ನೆಲ್ಯಾಡಿ, ಹೈದರ್ ಲತೀಫಿ ಅಲ್ಲಿಪಾದೆ, ಕೆ.ಎ. ಹೈದರ್ ಅಲಿ ಸಅದಿ ಕುಕ್ಕಿಲ, ಜಲೀಲ್ ಫೈಝಿ ಕೊಲ್ಪೆ, ಆಸಿಫ್ ಮುಈನಿ ಫೈಝಾನಿ ಫಝಲ್ನಗರ, ಹಂಝ ಇಡ್ಯಾ, ಝುಲ್ಪಿಕರ್ ಅಲಿ, ಎಸ್.ಕೆ. ಮುಸ್ತಫಾ, ನಯಾಝ್ ಸುರತ್ಕಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಜೀಶಾನ್ ಅಲಿ ಸ್ವಾಗತಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.