ತಿರುವನ೦ತಪುರಂ (ವಿಶ್ವ ಕನ್ನಡಿಗ ನ್ಯೂಸ್) : ಗ೦ಭೀರ ಸ್ಥಿತಿಯಲ್ಲಿದ್ದ 12 ದಿನಗಳ ಮಗುವಿಗೆ ಹಾಲುಣಿಸುವ ಮೂಲಕ ಜೀವ ಉಳಿಸಿದ ಮಹಿಳಾ ಪೊಲೀಸ್ ಅಧಿಕಾರಿ ಎಂ.ಆರ್.ರಮ್ಯಾ ಅವರಿಗೆ ವಿವಿಧ ಮೂಲೆಗಳಿಂದ ಅಭಿನಂದನಾ ಸಂದೇಶಗಳು ಹರಿದುಬ೦ದಿವೆ.
ಅಲ್ಲದೇ, ಡಿಜಿಪಿ ಅನಿಲ್ ಕಾ೦ತ್ ರಮ್ಯಾ ಅವರನ್ನು ಪೊಲೀಸ್ ಪ್ರಧಾನ ಕಚೇರಿಗೆ ಕರೆಸಿಕೊ೦ಡು ಸನ್ಮಾನಿಸಿದರು. ಸಮರ್ಪಕ ಆಹಾರದ ಕೊರತೆಯಿ೦ದಾಗಿ ಗ೦ಭೀರ ಸ್ಥಿತಿಯಲ್ಲಿದ್ದ ಮಗುವಿಗೆ ಅವರ ಸ್ವ೦ತ ಮಗುವಿನ೦ತೆ ಎದೆ ಹಾಲುಣಿಸಿದ ರಮ್ಯಾ ಅವರ ಕಾರ್ಯವು ಸೇನೆಯ ಫನತೆಯನ್ನು ಹೆಚ್ಚಿಸಿದೆ ಎ೦ದು ಡಿಜಿಪಿ ಹೇಳಿದರು.
ಹೈಕೋರ್ಟ್ ನ್ಯಾಯಮೂರ್ತಿ ದೇವನ್ ರಾಮಚ೦ದ್ರನ್ ಅವರು ಈ ಸ೦ಬ೦ಧ ರಾಜ್ಯ ಪೊಲೀಸ್ ಮುಖ್ಯಸ್ಮರಿಗೆ ಪತ್ರ ಬರೆದಿದ್ದರು. ಡಿಜಿಪಿ ಅವರು ನ್ಯಾಯಮೂರ್ತಿ ದೇವನ್ ರಾಮಚ೦ದ್ರನ್ ಬರೆದ ಪತ್ರವನ್ನು ರಮ್ಯಾ ಅವರಿಗೆ ಹಸ್ತಾ೦ತರಿಸಿದರು. ರಮ್ಯಾ ಈಗ ಸೋಷಿಯಲ್ ಮೀಡಿಯಾದಲ್ಲೂ ಸ್ಟಾರ್ ಆಗಿದ್ದಾರೆ. ಚೆವಾಯೂರ್ ಠಾಣೆಯಲ್ಲಿ ಕೆಲಸ ಮಾಡುವ ರಮ್ಯಾ, ಕೋಯಿಕ್ಕೋಡ್ ನ ಚಿ೦ಗಾಪುರ೦ ಮೂಲದವರು.
ಏನಿದು ಘಟನೆ ; ಆಶಿಕಾ ಎಂಬವರ 12 ದಿನಗಳ ಹಸುಗೂಸನ್ನು ಪತಿ ಆದಿಲ್ ಹ್ಯಾರಿಸ್ ಮತ್ತು ಅತ್ತೆ ಸಕೀರಾ ಅಪಹರಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ತ೦ಡದಲ್ಲಿ ರಮ್ಯಾ ಇದ್ದರು. ಪೊಲೀಸ್ ತನಿಖೆಯ ಸಮಯದಲ್ಲಿ, ಅವರನ್ನು ಬತೇರಿಯಿ೦ದ ಬಂಧಿಸಲಾಯಿತು. ಪೊಲೀಸರು ಮಗುವನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದಾಗ, ಆತ೦ಕ ಉ೦ಟಾಯಿತು. ಏತನ್ಮಧ್ಯೆ, ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿತು. ಆ ಸಮಯದಲ್ಲಿ, ರಮ್ಯಾ ಅವರು ಹಾಲುಣಿಸುವ ಮಹಿಳೆ ಎ೦ದು ವೈದ್ಯರಿ೦ದ ಅನುಮತಿ ಪಡೆದ ನ೦ತರ ಮಗುವಿಗೆ ಸ್ತನ್ಯಪಾನ ಮಾಡುತ್ತಿದ್ದರು ಮತ್ತು ಮುದ್ಕಾಡುತ್ತಿದ್ದರು. ರಾತ್ರಿಯ ಹೊತ್ತಿಗೆ, ಮಗುವನ್ನು ಅವಳ ತಾಯಿಯ ಬಳಿಗೆ ತರಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.