(www.vknews.in)ಪುತ್ತೂರು :ಮಾದಕ ದ್ರವ್ಯ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಧಾರ್ಮಿಕ ಕೇಂದ್ರಗಳು ಮುಂದಕ್ಕೆ ಬರಬೇಕೆಂದು ನ್ಯಾಯವಾದಿ ನೂರುದ್ದೀನ್ ಸಾಲ್ಮರ ಕರೆ ನೀಡಿದರು. ಅವರು ಪುತ್ತೂರಿನ ದರ್ಬೆ ಸರ್ಕಲ್ ನಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ನಡೆದ ಮಾದಕ ದ್ರವ್ಯದ ವಿರುದ್ಧದ ಜನಸಂಚಲನ ಕಾರ್ಯಕ್ರಮದಲ್ಲಿ ಈ ಕರೆಯನ್ನು ನೀಡಿದರು
ಮಾದಕ ದ್ರವ್ಯವನ್ನು ಮಾರಾಟ ಹಾಗೂ ಸೇವನೆಯನ್ನು ತಡೆಯಲು ಕೇವಲ ಪೊಲೀಸರಿಂದ ಸಾಧ್ಯವಾಗುವುದಿಲ್ಲ. ಸಮಾಜದ ಎಲ್ಲಾ ವರ್ಗದವರು, ಅವರವರ ಧಾರ್ಮಿಕ ಕೇಂದ್ರಗಳ ಮೂಲಕ, ಈ ಬಗ್ಗೆ ಜಾಗೃತಿ ಹಾಗೂ ಕಠಿಣ ಕ್ರಮಗಳನ್ನು ಅನುಸರಿಸುವುದರ ಮೂಲಕ ಇದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಮತಿಯ ವಾದದಂತೆ, ಸಮಾಜವನ್ನು ಕಾಡುತ್ತಿರುವ ಮತ್ತೊಂದು ಪ್ರಬಲ ಸಮಸ್ಯೆ ಮಾದಕ ದ್ರವ್ಯವಾಗಿದೆ. ಇದನ್ನು ಈಗಲೇ ತಡೆಗಟ್ಟದಿದ್ದಲ್ಲಿ ಮುಂದೆ ಸಮಾಜವು,ದೊಡ್ಡ ಬೆಲೆ ತೆರ ಬೇಕಾದಿತು. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಮತ್ತು ಅವರ ಧಾರ್ಮಿಕ ಕೇಂದ್ರಗಳು ಮುಂದಕ್ಕೆ ಬರುವುದು ಬಹಳ ಅವಶ್ಯಕವೆಂದು ಅವರು ನುಡಿದರು
ಕಾರ್ಯಕ್ರಮವನ್ನು ಉದ್ದೇಶಿಸಿ,ಕರ್ನಾಟಕ ರಾಜ್ಯ ಎಸ್ ಕೆ ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಪ್ರೊ ಅನೀಸ್ ಕೌಸರಿ, ದ.ಕ ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ಈಸ್ಟ್ ಉಪಾಧ್ಯಕ್ಷರಾದ ಅಬ್ದುಲ್ ರಶೀದ್ ರಹ್ಮನಿ ಪರ್ಲಡ್ಕ, ಬಶೀರ್ ಮುಸ್ಲಿಯರ್ ಮಾತಾಡಿದರು. ಸಮಸ್ತ ಮದರಸ ಮಂಡಳಿ ಸದಸ್ಯರಾದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಶಾಪಿ ದಾರಿಮಿ ಕೂರ್ನಡ್ಕ, ಮುಸ್ತಫ ಫೈಜಿ ಪರ್ಲಡ್ಕ, ಕೋಶಾಧಿಕಾರಿ ಸೂಫಿ ಬಪ್ಪಳಿಗೆ, ಬಾತಿಶ ಸಾಲ್ಮರ, ಉಮ್ಮರ್ ಡಿಕೆ, ಇಸಾಕ್ ಕುಲಕುಂದ, ಜಮಾಲ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ಕ್ಲಸ್ಟರ್ ಕಾರ್ಯದರ್ಶಿ ಸೀನಾನ್ ಪರ್ಲಡ್ಕ ಸ್ವಾಗತಿಸಿ,ಸಂಘಟನಾ ಕಾರ್ಯದರ್ಶಿ ನಾಸಿರ್ ದಾರಿಮಿ ವಂದಿಸಿದರು. ಕೊನೆಯಲ್ಲಿ ಮಾದಕ ದ್ರವ್ಯದ ಜಾಗೃತಿ ಮೂಡಿಸುವ ಕರ ಪತ್ರ ವಿತರಿಸಲಾಯಿತು.ಈ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯದ್ಯಂತ 35 ಕಡೆಗಳಲ್ಲಿ ಏಕಕಾಲದಲ್ಲಿ ನಡೆಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.