ಬಾರ್ಮರ್ (ವಿಶ್ವ ಕನ್ನಡಿಗ ನ್ಯೂಸ್) : ಹಲ್ಲು ನೋವಿಗೆ ವೈದ್ಯರನ್ನು ಭೇಟಿ ಮಾಡಲು ತೆರಳಿದ್ದ ಉದ್ಯಮಿಯೊಬ್ಬರು ಪತ್ರಿಕೆ ಓದುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ ಈ ಘಟನೆ ನಡೆದಿದೆ. ಅರವತ್ತೊಂದು ವರ್ಷದ ದಿಲೀಪ್ ಕುಮಾರ್ ಮೃತರು. ಘಟನೆಯ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಯಾಗಿದೆ.
ಕ್ಲಿನಿಕ್ ತಲುಪಿದ ಅವರು ಪತ್ರಿಕೆ ಓದುತ್ತಾ ತನ್ನ ಸರದಿಗಾಗಿ ಕಾಯುತ್ತಿದ್ದರು. ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಕ್ಲಿನಿಕ್ ನ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಗುಜರಾತಿನ ಸೂರತ್ ನಲ್ಲಿ ವಾಸವಾಗಿದ್ದ ಅವರು ಗಾರ್ಮೆಂಟ್ ವ್ಯಾಪಾರ ಮಾಡುತ್ತಿದ್ದರು. ಅವರು ನವೆಂಬರ್ 4 ರಂದು ಸಾಮಾಜಿಕ ಸಮಾರಂಭದಲ್ಲಿ ಭಾಗವಹಿಸಲು ಬಾರ್ಮರ್ಗೆ ಬಂದಿದ್ದರು. ನವೆಂಬರ್ 5ರಂದು ಹಲ್ಲು ನೋವಿನಿಂದಾಗಿ ಕ್ಲಿನಿಕ್ ಗೆ ಬಂದಿದ್ದರು. ಸಾವಿಗೆ ಹೃದಯಾಘಾತವೇ ಕಾರಣ ಎಂದು ನಂಬಲಾಗಿದೆ ಎಂದು ಅವರ ಸಹೋದರ ಹೇಳಿದ್ದಾರೆ.
5 November 2022 : 🇮🇳 : Heart attack 💉 " Businessman dies while reading newspaper, LIVE VIDEO : Went to the doctor to show his teeth; Sitting in the waiting room – fell on the ground "https://t.co/iB89sMln9P pic.twitter.com/JtvZ6XVGpz — Anand Panna (@AnandPanna1) November 6, 2022
5 November 2022 : 🇮🇳 : Heart attack 💉
" Businessman dies while reading newspaper, LIVE VIDEO : Went to the doctor to show his teeth; Sitting in the waiting room – fell on the ground "https://t.co/iB89sMln9P pic.twitter.com/JtvZ6XVGpz
— Anand Panna (@AnandPanna1) November 6, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.