ಕೋಲಾರ( ವಿಶ್ವ ಕನ್ನಡಿಗ ನ್ಯೂಸ್ ) : ರಾಜ್ಯ ಸರ್ಕಾರಿ ನೌಕರರ ಆಶಯದಂತೆ ೭ ನೇ ವೇತನ ಆಯೋಗ ರಚಿಸಿ ಅಧ್ಯಕ್ಷರನ್ನೂ ಘೋಷಿಸಿ ನುಡಿದಂತೆ ನಡೆದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರನ್ನು ಗುರುವಾಗ ಬೆಳಗ್ಗೆ ಬೆಂಗಳೂರಿನ ಸಿಎಂ ನಿವಾಸದೆದುರು ಅಭಿನಂದಿಸಲು ರಾಜ್ಯ ಸಂಘದ ಕರೆಯ ಮೇರೆಗೆ ಕೋಲಾರದಿಂದಲೂ ೪೦೦ ಕ್ಕೂ ಹೆಚ್ಚು ಮಂದಿ ತೆರಳಿದ್ದಾಗಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್ಬಾಬು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ೧೦-೩೦ ಗಂಟೆಗೆ ಮುಖ್ಯಮಂತ್ರಿಗಳ ನಿವಾಸದಲ್ಲಿ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದಿಸಲು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಪ್ರತ್ಯೇಕವಾಗಿ ಬಸ್ಸುಗಳಲ್ಲಿ ನೌಕರರು ಹೋಗಿದ್ದಾಗಿ ತಿಳಿಸಿದ ಅವರು , ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು .
ಮುಖ್ಯಮಂತ್ರಿಗಳು ೭ ನೇ ವೇತನ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾಗಿದ್ದ ಸುಧಾಕರ್ ರಾವ್ ಅವರನ್ನು ನೇಮಕ ಮಾಡುವ ಮೂಲಕ ನೌಕರರ ಹಿತ ರಕ್ಷಣೆ ಮಾಡಿದ್ದಾರೆ . ಇದರಿಂದಾಗಿ ರಾಜ್ಯದ ೬ ಲಕ್ಷ ನೌಕರರು , ೩.೪೦ ಲಕ್ಷ ನಿಗಮ ಮಂಡಳಿ ನೌಕರರು , ೪ ಲಕ್ಷ ಮಂದಿ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ .
ಈ ವರ್ಷದ ಅಂತ್ಯದೊಳಗೆ ನೌಕರರ ಆಶಯದಂತೆ ೭ ನೇವೇತನ ಆಯೋಗ ರಚನೆ ಕುರಿತಂತೆ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ . ಯಾವುದೇ ಹೋರಾಟ , ಘರ್ಷಣೆಯಿಲ್ಲದೇ ನೌಕರರ ನ್ಯಾಯಯುತ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವಲ್ಲಿ ಷಡಕ್ಷರಿ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ತಿಳಿಸಿದ್ದಾರೆ .
ಇದೇ ಸಂದರ್ಭದಲ್ಲಿ ನೌಕರರ ಪ್ರಮುಖ ಬೇಡಿಕೆಯಾಗಿರುವ ಎನ್ಪಿಎಸ್ ರದ್ದು , ಹಳೆ ಪಿಂಚಣಿ ಜಾರಿ ಕುರಿತಂತೆಯೂ ರಾಜ್ಯ ನೌಕರರ ಸಂಘ ಬದ್ಧತೆ ಹೊಂದಿದೆ . ಷಡಕ್ಷರಿ ಅವರ ನಾಯಕತ್ವದಿಂದ ಮಾತ್ರ ಸಮಸ್ಯೆಗಳ ಇತ್ಯರ್ಥ ಸಾಧ್ಯ ಎಂಬುದನ್ನು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಸಮಸ್ತ ನೌಕರರು ಷಡಕ್ಷರಿ ಅವರನ್ನು ಬೆಂಬಲಿಸುವ ಮೂಲಕ ಎನ್ಪಿಎಸ್ ರದ್ದು ಮಾಡುವ ಪ್ರಮುಖ ಬೇಡಿಕೆ ಶೀಘ್ರ ಈಡೇರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ . ಕೋಲಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಸಂಘಟಿತರಾಗಿ ಬಂದಿರುವ ಕುರಿತು ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅಭಿನಂದಿಸಿ , ಜಿಲ್ಲಾ ಸಂಘ ಹಮ್ಮಿಕೊಳ್ಳಲಿರುವ ಪ್ರತಿಭಾಕಾರಂಜಿ ಕಾರ್ಯಕ್ರಮಕ್ಕೆ ತಾವು ಭಾಗವಹಿಸುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು .
ಈ ಸಂದರ್ಭದಲ್ಲಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರುಗಳಾದ ಕೆ.ಎನ್.ಮಂಜುನಾಥ್ , ಕೆ.ಬಿ.ಅಶೋಕ್ , ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ , ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ , ಉಪಾಧ್ಯಕ್ಷರಾದ ಮಂಜುನಾಥ್ , ಪುರುಷೋತ್ತಮ್ , ಎಂ.ನಾಗರಾಜ್ , ನಂದೀಶ್ , ಕಾರ್ಯದರ್ಶಿ ವಿಜಯಮ್ಮ , ಪದಾಧಿಕಾರಿಗಳಾದ ನವೀನಾ , ಪ್ರೇಮ , ಹರೀಶ್ , ಅನಿಲ್ , ಬಂಗಾರಪೇಟೆ ತಾ . ಅಧ್ಯಕ್ಷ ಅಪೇಗೌಡ , ಕೆಜಿಎಫ್ ನರಸಿಂಹಮೂರ್ತಿ , ರವಿಪ್ರಕಾಶ್ , ಶ್ರೀನಿವಾಸಪುರ ಅಧ್ಯಕ್ಷ ಬಂಗವಾದಿ ನಾಗರಾಜ್ , ಪಿಡಿಒಗಳ ಸಂಘದ ಅಧ್ಯಕ್ಷ ಸಿ.ಆರ್.ಗೌಡ , ಕೃಷ್ಣಪ್ಪ ಶಿಕ್ಷಕ ಗೆಳೆಯರ ಬಳಗದ ಸದಸ್ಯರು ಸೇರಿದಂತೆ ಮತ್ತಿತರರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.