ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) : ನಾಮಪತ್ರ ಸಲ್ಲಿಸುವಾಗ ಮತ್ತೊಮ್ಮೆ ಬರುವೆ ಹೀಗೆಂದು ಸಿದ್ದರಾಮಯ್ಯ ಕೋಲಾರದಲ್ಲಿ ಹೇಳಿಕೆ ನೀಡುವ ಮೂಲಕ ಕೋಲಾರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದರ ಸುಳಿವನ್ನು ಪರೋಕ್ಷವಾಗಿ ನೀಡಿದರೆಂಬ ವ್ಯಾಖ್ಯಾನ ಎಲ್ಲೆಡೆ ಕೇಳಿ ಬಂದಿತು. ಕೋಲಾರಮ್ಮ ದೇವಾಲಯದ ಪೂಜೆಯ ನಂತರ ಮೆಥೋಡಿಸ್ ಚರ್ಚ್ಗೆ ಭೇಟಿ ನೀಡಿದ ಸಿದ್ದರಾಮಯ್ಯ ಅಲ್ಲಿ ಕೆಲ ಹೊತ್ತು ಅಭಿಮಾನಿಗಳ ಕೋರಿಕೆ ಮೇರೆಗೆ ಮಾತನಾಡಿದರು.
ಮೈಸೂರು ಜಿಲ್ಲೆಯವನಾದ ನನ್ನ ಮೇಲೆ ಕೋಲಾರ ಜಿಲ್ಲೆಯವರು ಇಟ್ಟಿರುವ ಪ್ರೀತಿ ಅಭಿಮಾನಕ್ಕೆ ಅಭಾರಿಯಾಗಿದ್ದೇನೆಂದು ಹೇಳಿದ ಸಿದ್ದರಾಮಯ್ಯ , ಮತ್ತೊಮ್ಮೆ ನಾಮೀನೇಷನ್ ಸಂದರ್ಭದಲ್ಲಿ ನಿಮ್ಮನ್ನೆಲ್ಲಾ ಮತ್ತೆ ಭೇಟಿಯಾಗುತ್ತೇನೆ , ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಿ , ಬೆಂಬಲಿಸಬೇಕೆಂದು ಕೋರಿಕೊಂಡರು .
ನಾನು ಕೋಲಾರ ಜನರ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದೇನೆ . ೫ ವರ್ಷ ಸಿಎಂ ಆಗಿದ್ದಾಗ ಎಲ್ಲ ವರ್ಗದ ಜನರಿಗೂ ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ . ಎಂದಿಗೂ ಜಾತಿ , ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿದವನಲ್ಲ .
ದೇಶದಲ್ಲಿ ಹಿಂದೂ , ಕ್ರೈಸ್ತ , ಮುಸ್ಲಿಂ ಸೇರಿದಂತೆ ಸಾಕಷ್ಟು ಧರ್ಮಗಳ ಜನರು ಇದ್ದಾರೆ . ಈ ದೇಶ ಬಹುತ್ವ ಸಂಸ್ಕೃತಿಯಿರುವ ದೇಶ . ಪರಸ್ಪರ ಮನುಷ್ಯರಾಗಿ ಎಲ್ಲರೂ ಬಾಳಬೇಕು . ಮನುಷ್ಯ ಇನ್ನೊಬ್ಬ ಮನುಷ್ಯನ್ನು ಪ್ರೀತಿಸುವುದು ಮುಖ್ಯ ಎಂದು ಹೇಳಿದರು . ಆದರೆ ಬಿಜೆಪಿ ಸೇರಿದಂತೆ ಬೇರೆ ಪಕ್ಷಗಳು ಧರ್ಮ , ಜಾತಿ ಆಧಾರದಲ್ಲಿ ನಡೆಯುತ್ತವೆ . ಆದರೆ , ಕಾಂಗ್ರೆಸ್ ಪಕ್ಷವು ಬಹುತ್ವದ ಮೇಲೆ ನಂಬಿಕೆಯಿಟ್ಟು . ಎಲ್ಲರನ್ನೂ ಸಮನಾಗಿ ಕಾಣುವ ಪಕ್ಷವಾಗಿದೆ .
ದೇಶದಲ್ಲಿ ೧೩೫ ಕೋಟಿ ಜನರು , ರಾಜ್ಯದಲ್ಲಿ ೭ ಕೋಟಿ ಜನರು ಇದ್ದು ಒಂದು ತಾಯಿ ಮಕ್ಕಳಂತೆ ಬದುಕುವ ವಾತಾವರಣವನ್ನು ನಿರ್ಮಾಣ ಮಾಡುವುದು ಕಾಂಗ್ರೆಸ್ ಸರಕಾರದ ಕರ್ತವ್ಯ . ಜವಾಬ್ದಾರಿ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಯಾವುದೇ ಧರ್ಮದವರಿಗೆ ತೊಂದರೆ ಕೊಡುವ ಕೆಲಸವಾಗಲಿ , ಬೇಧಭಾವವನ್ನಾಗಲಿ ಮಾಡಿಲ್ಲ . ಮುಂದೆಯೂ ಮಾಡುವುದಿಲ್ಲ. ನಮ್ಮ ೫ ವರ್ಷಗಳ ಆಡಳಿತವನ್ನು ನೋಡಿದ್ದೀರಿ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ಕೆಲಸ ಮಾಡಿದ್ದೇವೆ ಎಂದರು . ಕ್ರೈಸ್ತ ಮುಖಂಡರು ನೀಡಿದ ಅಭಿಮಾನದ ಸ್ವಾಗತಕ್ಕೆ ಧನ್ಯವಾದ ಸಲ್ಲಿಸಿ ಸಿದ್ದರಾಮಯ್ಯ ಚರ್ಚ್ನಿಂದ ತೆರಳಿದರು . ಚರ್ಚ್ನಲ್ಲಿ ಸದಾನಂದ , ಡೇವಿಡ್ ಸೇರಿದಂತೆ ಚರ್ಚ್ನ ಮುಖ್ಯಸ್ಥರು , ಭಕ್ತರು ಸಿದ್ದರಾಮಯ್ಯನ್ನು ಬೃಹತ್ ಸೇಬು ಹಾರದ ಮೂಲಕ ಸ್ವಾಗತಿಸಿ ಅಭಿಮಾನ ಮೆರೆದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.