ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ): ಜಿಲ್ಲಾ ಕಾಂಗ್ರೆಸ್ನ ರಮೇಶ್ಕುಮಾರ್ ಬಣದ ಮುಖಂಡರು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯ ಕೋಲಾರ ಭೇಟಿ ಸಂದರ್ಭದಲ್ಲಿ ಹೆಚ್ಚಿನ ಉತ್ಸಾಹದಿಂದ ತೊಡಗಿಕೊಂಡರೆ , ಕೆ.ಎಚ್.ಮುನಿಯಪ್ಪ ಬೆಂಬಲಿಗರು ಅಂತರವನ್ನು ಕಾಪಾಡಿಕೊಂಡರು .
ನಿಗದಿತ ಕಾರ್ಯಕ್ರಮದಂತೆ ಸಿದ್ದರಾಮಯ್ಯವನ್ನು ಕೋಲಾರದ ಬಂಗಾರಪೇಟೆ ವೃತ್ತದಲ್ಲಿ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಮತ್ತು ದಲಿತ ಸಂಘಟನೆಗಳ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ , ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ , ಕೋಲಾರದ ಮುಂದಿನ ಶಾಸಕ ಸಿದ್ದರಾಮಯ್ಯ , ಕೆ.ಎಚ್.ಮುನಿಯಪ್ಪರಿಗೆ ಜೈ ಎಂಬಿತ್ಯಾದಿಯಾಗಿ ಘೋಷಣೆಗಳನ್ನು ಮೊಳಗಿಸಿದರು . ಬೃಹತ್ ಹಾರವನ್ನು ಸಿದ್ದರಾಮಯ್ಯರಿಗೆ ಹಾಕಿ , ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿಸಿದರು .
ಈ ಕಾರ್ಯಕ್ರಮದ ನಂತರ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಸಿದ್ದರಾಮಯ್ಯರೊಂದಿಗೆ ತೆರಳದೆ ತಟಸ್ಥವಾಗಿ ಉಳಿದುಕೊಂಡರು. ಯಥಾ ಪ್ರಕಾರ ಇಡೀ ಕಾರ್ಯಕ್ರಮದ ನೇತೃತ್ವವಹಿಸಿಕೊಂಡಿದ್ದ ರಮೇಶ್ಕುಮಾರ್ ಬಣದ ಕಾರ್ಯಕರ್ತರು , ಮುಖಂಡರು ಸಿದ್ದರಾಮಯ್ಯರ ಇಡೀ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಹಾಗೆಯೇ ಕೋಲಾರ ಜಿಲ್ಲಾ ಕುರುಬರ ಸಂಘದ ಪ್ರಮುಖ ಪದಾಧಿಕಾರಿಗಳು ಸಮುದಾಯದ ಮುಖಂಡ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಿದರೂ ಕನಕ ಮಂದಿರ ಬಳಿ ಸ್ವಾಗತ ಕೋರುವ ಸಂದರ್ಭದಲ್ಲಿ ಹಾಜರಿರದೆ , ತಾವು ವರ್ತೂರು ಪ್ರಕಾಶ್ ಜೊತೆ ನಿಂತಿರುವುದನ್ನು ದೃಢಪಡಿಸಿಕೊಂಡರು .
ರಮೇಶ್ಕುಮಾರ್ ಗುಂಪಿನಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿದ್ದ ಮುಳಬಾಗಿಲಿನ ಕೊತ್ತೂರು ಮಂಜುನಾಥ್ , ಸಿದ್ದರಾಮಯ್ಯರ ಸ್ವಾಗತಿಸುವ ಯಾವುದೇ ಸಭೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ . ಪೂರ್ವಸಿದ್ಧತಾ ಸಭೆಗಳಲ್ಲಿಯೂ ಪಾಲ್ಗೊಂಡಿರಲಿಲ್ಲ . ಹಾಗೆಯೇ ಭಾನುವಾರ ಸಿದ್ದರಾಮಯ್ಯಕೋಲಾರ ಭೇಟಿ ಸಂದರ್ಭದಲ್ಲಿಯೂ ಗೈರು ಹಾಜರಾಗಿದ್ದ ಗಮನ ಸೆಳೆಯಿತು . ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿತು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.