(www.vknews.in) ಈ ದಿನ ನಮ್ಮ ಶಾಲಾ ಮಕ್ಕಳು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಖ್ಯಾತ ರಂಗಕರ್ಮಿ ಐ ಕೆ ಬೊಳುವಾರು ನಮ್ಮ ಮಕ್ಕಳ ಶಿಸ್ತನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವುದು ನನಗೆ ಅತ್ಯಂತ ಹೆಮ್ಮೆಯಾಗಿದೆ. ಅಲ್ಲಿನ ವಿದ್ಯಾರ್ಥಿಗಳು ಕೂಡ ಖಾಸಗಿ ಶಾಲೆ ಅಂದುಕೊಂಡೆವು .ಸರಕಾರಿ ಶಾಲೆ ಇಷ್ಟು ಚಂದ ಇರುತ್ತಾ ಅಂದ್ರಂತೆ. ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಕೂಡ ಕಲರ್ ಡ್ರೆಸ್ ತ್ಯಾಗ ಮಾಡಿ ಶಿಸ್ತನ್ನು ತೋರಿರುವುದು ಸಂತಸ ತಂದಿದೆ. ಭಯವಿಲ್ಲದೆ ಮುಕ್ತ ವಾತಾವರಣದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವುದು ಕಲಿಸಿ ಬರುವಂತದಲ್ಲ. ಎಲ್ಲೊ ಒಂದು ಕಡೆ ಇನ್ನೊಬ್ಬ ಮೌನ ವಾಗಿ ನಾಟಕ ಆಲಿಸುವುದನ್ನು ಇನ್ನೊಬ್ಬ ಸಹಿಸಿಕೊಂಡು ಮೌನಕ್ಕೆ ಜಾರವುದು ಮನಸ್ಸಿನ ಭಾವನೆಗಳಿಗೆ ಕಸುವು ಕೊಟ್ಟಂತೆ. ಜೊತೆಗೆ ನಮ್ಮ ಶಾಲಾ ಹಳೆವಿದ್ಯಾರ್ಥಿ ಪ್ರಣಮ್ಯ ಅಗಳಿ ಇಂದು ತಾಲೂಕುಮಟ್ಟದ ಮಕ್ಕಳ ದಿನಾಚರಣೆಯನ್ನು ಬಾಲವನದಲ್ಲಿ ಉದ್ಘಾಟಿಸಿರುವುದು ನಮ್ಮ ಶಾಲೆಗೆ ಹೆಮ್ಮೆ.
ವ್ಯಾಪಾರಿಗಳು ಕಷ್ಟಪಟ್ಡು ವ್ಯಾಪಾರ ಮಾಡುತ್ತಾರೆ. ಸಂಜೆಯಾಗುವಾಗ 5000 ವ್ಯಾಪರ ಆದರೆ ಅವರಿಗೆ 500 ರಿಂದ 700 ರವರೆಗೆ ಲಾಭ ಆಗುತ್ತೆ. ಅದಕ್ಕಾಗಿ ಅವರು ಎಷ್ಟು ಕಷ್ಟಪಡಬೇಕೆಂದು ಇಂದು ನಮ್ಮ ಮಕ್ಕಳಿಗೆ ಸ್ಪಷ್ಟ ಅರಿವಾಗಿದೆ. ತಮಾಷೆಯಾದರೂ ಜೀವನ ಪಾಠವಾಗಿದೆ. ವಸ್ತುಗಳನ್ನು ರೂಡಿ ಮಾಡುವುದು , ರೇಟ್ ಹಾಕುವುದು, ಲಾಭ ನಷ್ಟ ನೋಡುವುದು,ಜಾಹಿರಾತು ನೀಡುವುದು ಅಸಲು ಹಾಕುವುದು, ಸಾಲ ಮಾಡುವುದು,ಬಡ್ಡಿ ಕಟ್ಟುವುದು ಒಂದೇ ಎರಡೇ .. ಹಾಡುವುದು ಟ್ರಾಕ್ ನಲ್ಲಿ ಹಾಡುವುದು ಅತ್ಯಂತ ಸಂಕೀರ್ಣ ಸಂಗತಿ . ಅದು ನಮ್ಮ ಮಕ್ಖಳಿಂದ ಸಾಧ್ಯವಾಗಿದೆ.
ಆಹಾರವನ್ನು ತಾವು ತಯಾರಿಸುವುದು ಅದೊಂದು ಜೀವನ ಪಾಠ .ಅದು ಸಾಧ್ಯವಾದರೆ ನಾವು ಬದುಕು ಕಟ್ಡಿಕೊಳ್ಳಬಹುದಾಗಿದೆ. ಈ ಅನುಭವವು ನಮ್ಮ ಮಕ್ಕಳಿಗೆ ಆಗಿದೆ. ಮೆಹಂದಿ ಇಡುವುದು ಅತ್ಯಂತ ತಾಳ್ಮೆಯ ಕಾರ್ಯ ರಂಗೋಲಿ ಯು ಹಾಗೆ ಈ ಕೆಲಸ ಮಾಡುವವರು ಅತ್ಯಂತ ಸೂಕ್ಷ್ಮವಾಗಿರುತ್ತಾರೆ ಇದು ನಮ್ಮ ಮಕ್ಕಳಿಂದ ಸಾಧ್ಯವಾಗಿದೆ. ಇಂದು ನಾವು ಖುಷಿ ಯಲ್ಲಿ ಇದ್ದೇವೆ ನಮಗೆ ಬೆಳಗ್ಗಿನಿಂದ ಕಷ್ಡಪಟ್ಟು ಅಡುಗೆ ಅಕ್ಕನವರು ಸಹಕರಿಸಿದ್ದಾರೆ ಅವರ ಶ್ರಮಕ್ಕೆ ಪ್ರೀತಿಗೆ ಶರಣು.
ನಮ್ಮ ಪೋಷಕರು ಎಸ್ ಡಿ ಎಂ ಸಿ ಯವರು ಎಲ್ಲಾ ಶಾಲೆಗೆ ಮಾದರಿ . ನನ್ನ 28 ವರ್ಷದ ಸರ್ವಿಸ್ ನಲ್ಲಿ ಬೇರೆ ಬೇರೆ ಕಡೆ ಊರವರ ಸಹಕಾರ ನೋಡಿದ್ದೇನೆ. ಆದರೆ ಅನುಭವಿಸಿದ್ದು ಇಲ್ಲಿ ಮಾತ್ರ. ಅತ್ಯುತ್ತಮವಾದ ಸಹಕಾರ. ಎಲ್ಲ ಪೋಷಕರು ಅವರ ಮಕ್ಕಳಿಂದ ವ್ಯಾಪಾರ ಮಾಡಿದ್ದಾರೆ. ಖುಷಿಯಿಂದ ಒಂದು ದಿನ ಕಳೆದಿದ್ದಾರೆ. ನಮ್ಮ ಶಿಕ್ಷಕ ವೃಂದ ಜವಾಬ್ದಾರಿ ಕೇಳಿ ಕೆಲಸ ಮಾಡಿದ್ದಾರೆ. ಇಂತಹ ಶಿಕ್ಷಕ ವೃಂದ ಇದ್ದರೆ ಯಾರಿಗೂ ಮುಖ್ಯಗುರು ಗಳಾಗಿ ಕೆಲಸ ಮಾಡಬಹುದು ಒಟ್ಟಂದದಲ್ಲಿ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿದೆ. ಅಭಿವಂದನೆಗಳು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.