(ವಿಶ್ವ ಕನ್ನಡಿಗ ನ್ಯೂಸ್) : ಸರ್ಕಾರಕ್ಕೆ ಹಲವಾರು ಜವಬ್ದಾರಿಗಳಿವೆ, ನಮ್ಮ ಕರ್ನಾಟಕದ ಕೆಲವು ಅತ್ಯಮೂಲ್ಯ ಸಾಂಸ್ಕೃತಿಕ ಸ್ಥಳಗಳಿಗೆ ಉತ್ತೇಜನ ನೀಡಬೇಕು, ಅವುಗಳನ್ನು ಸಂರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈಗಾಗಲೇ ಹಲವಾರು ಸಂರಕ್ಷಣ ಪ್ರಿಯರು ಇದರ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಆದರೂ ನಮ್ಮ ಸಂದೇಶ ಸರ್ಕಾರವು ಕೆರೆಗಳ ಬಗ್ಗೆ ನಿರ್ಲಕ್ಷಿಸದೆ ಅವುಗಳು ಸಂಪೂರ್ಣವಾಗಿ ಒತ್ತುವರಿಯಾಗದಂತೆ ಪ್ರಕೃತಿಯನ್ನು ಸಂರಕ್ಷಿಸಬೇಕು ಎಂಬುವುದೇ ಆಗಿದೆ.
ಈಗಾಗಲೇ ಬಹುತೇಕ ಕೆರೆಗಳು ನಿರ್ವಹಣೆಯ ಕೊರತೆಯಿಂದ ಸೊರಗಿದೆ, ಕೆಲವು ಕೆರೆಗಳಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿದೆ, ಅಲ್ಲದೆ ಕೆರೆಗಳ ಸೇತುವೆಗಳು ಹಾಗೂ ಏರಿಗಳು ಭದ್ರವಾಗಿಲ್ಲ, ಅಲ್ಲದೆ ಮೇಲ್ನೋಟಕ್ಕೆ ಕೆರೆಗಳ ನೀರು ತುಂಬಿದರೂ ಎಲ್ಲ ಕೆರೆಗಳಲ್ಲಿಯೂ ಹೂಳು ತುಂಬಿ ಹೋಗಿರುವುದರಿಂದ ಅವುಗಳ ಸಾಮಾರ್ಥ್ಯಕ್ಕೆ ನೀರು ತುಂಬಲು ಸಾದ್ಯವಾಗುತ್ತಿಲ್ಲ, ಹೂಳು ತೆಗೆಯಲು ಅಧಿಕಾರಿಗಳು ಯಾವುದೇ ಕ್ರಮಗಳನ್ನು ಸಹ ಕೈಗೊಳ್ಳದಿರುವುದು ಬೇಜಾವಬ್ದಾರಿತನವಾಗಿದೆ.
ನಾನು ಹೀಗೆಯೇ ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಹೋಗುವಾಗ ಕಂಡ ಕೆಲವು ಕೆರೆಗಳು. ಸುಂದರವಾದ ಪರಿಸರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನಮ್ಮ ಕರ್ನಾಟಕದಲ್ಲಿ ಅಧಿಕಾರಿಗಳು ಗಮನಹರಿಸಿ ಪಾಳು ಬಿದ್ದ, ಅಕ್ರಮವಾಗಿ ಆಕ್ರಮಿಸಿ ಕೊಳ್ಳುವ ಕೆರೆಗಳನ್ನು ಸಂರಕ್ಷಿಸಿ ಉತ್ತಮ ಕೆರೆಗಳಾಗಿ ಪರಿವರ್ತಿಸಿ ಅದಕ್ಕೆ ಹೊಸ ಕಾಯಕಲ್ಪವನ್ನು ನೀಡಬೇಕು.
ಏಕೆಂದರೆ ಕೆಲವು ದೇಶಿ-ವಿದೇಶಿಗಳಿಂದ ಪಕ್ಷಿಗಳು ಬಂದು ಆಶ್ರಯಿಸುತ್ತದೆ. ಉತ್ತಮ ಪ್ರವಾಸಿ ತಾಣಗಳನ್ನಾಗಿ ಮಾಡಬಹುದು. ನಿಲರ್ಕ್ಷಕ್ಕೆ ಒಳಗಾಗಿರುವ ಅದೆಷ್ಟೂ ಕೆರೆಗಳುಂಟು, ಪ್ರಸ್ತುತ ನಮ್ಮ ಕರ್ನಾಟಕದಲ್ಲಿ 36,000 ಕೆರೆಗಳಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಲ್ಲಿ 33,000 ಸಣ್ಣ ಕೆರೆಗಳನ್ನು ಹೊಂದಿದ್ದು, ಮೂಲಭೂತ ಸೌಲಭ್ಯಗಳಿಲ್ಲದೆ ಗಿಡ, ಗಂಟೆಗಳಿಂದ ಹೂಳು ತುಂಬಿ ಹೋಗಿದೆ, ಅಲ್ಲದೆ ಗ್ರಾ.ಪಂ ಕೆರೆಗಳ ಅಭಿವೃದ್ಧಿ ಮತ್ತು ಪುನಶ್ಚೇತಕ್ಕೆ ರಾಜ್ಯ ಸರ್ಕಾರದ ಬಳಿ ಅನುದಾನ ಲಭ್ಯವಿಲ್ಲವೇ?.
ಇತ್ತೀಚಿಗಂತೂ ಮಳೆರಾಯನ ಕೃಪೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿ ಸಂಪೂರ್ಣವಾಗಿ ಭರ್ತಿಯಾಗಿ ಕೋಡಿಬಿದ್ದಿವೆ. ಜಿಲ್ಲಾ ಪಂಚಾಯತಿ ಮತ್ತು ಗ್ರಾಮ ಪಂಚಾಯಿತಿಗಳ ನಿರ್ವಹಣೆಯ ಕೊರತೆಯಿಂದ ಕೆರೆಗಳ ಅಭಿವೃದ್ಧಿಯೇ ಮರೀಚಿಕೆಯಾಗಿ ನೀರಾವರಿ ಕೆಲಸಕ್ಕೆ ಸಂಕಷ್ಟ ಎದುರಾಗಿದೆ. ಈಗಲೂ ಬೆಂಗಳೂರಿನ ಸಾರಕ್ಕಿ ಕೆರೆಯು ಕಲುಷಿತ ಪರಿಸರ ವ್ಯವಸ್ಥೆಯಾಗಿದ್ದು, ಹಲಸೂರು ಕೆರೆಯ ಕಲುಷಿತ ನೀರಿನಲ್ಲಿ ಆಟವಾಡುವ ಮತ್ತು ಮೀನು ಹಿಡಿಯುವ ಮಕ್ಕಳಿದ್ದಾರೆ. ಅಲ್ಲದೆ ನಗರದ ಅತಿ ದೊಡ್ಡ ಕೆರೆಯಾದ ಬೆಳ್ಳಂದೂರು ಕೆರೆಯ ಕಲುಷಿತ ನೀರಿನಿಂದ ಸಂಗ್ರಹಿಸಿದ ಹುಲ್ಲನ್ನು ಆ ಭಾಗದ ಹಸುಗಳಿಗೆ ನೀಡಲಾಗುತ್ತದೆ. ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.
ಹಾಗೂ ನರೇಗ ಯೋಜನೆಯಲ್ಲಿ ಕೆರೆಗಳ ಅಭಿವೃದ್ದಿ ಹಾಗೂ ನಿರ್ವಹಣೆಗೆ ಸರ್ಕಾರದಿಂದ ಆದೇಶ ನೀಡಿದ್ದರೂ ಸಹ ಕೆಲವೊಂದು ಗ್ರಾಮಗಳಲ್ಲಿ ನಿರ್ವಹಣೆ ನಡೆಸುತ್ತಿದ್ದರೂ ಅಷ್ಟೂಂದು ಪ್ರಗತಿಯನ್ನು ಸಾಧಿಸಿಲ್ಲ, ಹಾಗೂ ಮಾದರಿ ಕೆರೆ ಬರೀ ಘೋಷಣೆಯಾಗಿದೆ. ಕಳೆದೆರಡು ವರ್ಷಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್ ಸುರೇಶ್ ಕುಮಾರ್ ರವರು ಕೊಳ್ಳೆಗಾಲ, ಯಳಂದೂರು, ಹನೂರು ತಾಲೂಕುಗಳ ತಲಾ ಒಂದು ಕೆರೆಯನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿ ಘೋಷಿಸಿದರು, ಆದರೂ ಯಾವುದೇ ಅಭಿವೃದ್ದಿ ಕೆರೆಗಳನ್ನು ಮಾಡದೆ ನಿರ್ಲಕ್ಷಿಸಿದ್ದಾರೆ.
– ಜ್ಯೋತಿ.ಜಿ(ಉಪನ್ಯಾಸಕಿ ಮೈಸೂರು)
ಅಕ್ಟೋಬರ್ 15 ರಂದು ಒಂದು ಪ್ರತಿಷ್ಥಿತ ಪತ್ರಿಕೆಯಲ್ಲಿ ಚಂದಾಪುರ ಕೆರೆ ಅಭಿವೃದ್ದಿಗೊಳಿಸಲು ವಿಫಲವಾದ ಹಿನ್ನಲೆಯಲ್ಲಿ ಹಸಿರು ನ್ಯಾಯಾಧಿಕರಣ ಸರ್ಕಾರಕ್ಕೆ 500 ಕೋಟಿ ದಂಡವನ್ನು ವಿಧಿಸಿದೆ, ಅಧಿಕಾರಿಗಳ ದಿವ್ಯ ನಿರ್ಲಕ್ಯ ಇದಕ್ಕೊಂದು ನಿದರ್ಶನವಷ್ಷೇ, ಇಂತಹ ಕೆರೆಗಳಿಗೆ ಕೈಗಾರಿಕೆಗಳಿಂದ ಬಿಡುವ ತಾಜ್ಯಗಳು ಮೀನುಗಳ ಹಾಗೂ ಪಕ್ಷಿಗಳ ಪಾಲಿಗೆ ವಿಷವಾಗಿ ಪರಿಣಮಿಸಿದೆ, ಮೈಸೂರಿನಲ್ಲಿರುವ ಅತಿ ದೊಡ್ಡ ಕೆರೆಯಾದ ಕುಕ್ಕರಳ್ಳಿಕೆರೆಯು ಸಹ ಸರಿಯಾದ ನಿರ್ವಹಣೆ ಇಲ್ಲದೆ ಕೆರೆಯ ಏರಿಯು ಕುಸಿಯುವ ಭೀತಿಯಲ್ಲಿದೆ ಎಂದು ದಿನಾಂಕ 21 ರಂದು ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.
ಪರಿಸರ ಪ್ರೇಮಿಗಳು ಸ್ಪಂದಿಸಿದರೆ ಸಾಲದು, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕೆರೆಗಳನ್ನು ಉತ್ತಮವಾಗಿ ನಿರ್ವಹಿಸುವ ಜವಾಬ್ದಾರಿ ಜನತೆ ಹಾಗೂ ಸರ್ಕಾರದ ಹೊಣೆಯಾಗಿದೆ.
ಜ್ಯೋತಿ. ಜಿ, ಮೈಸೂರು (ಉಪನ್ಯಾಸಕಿ, ಸಾಮಾಜಿಕ ಹೋರಾಟಗಾರ್ತಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.