ಕುನ್ನಂಕುಲಂ (ವಿಶ್ವ ಕನ್ನಡಿಗ ನ್ಯೂಸ್) : ಕಳ್ಳತನದ ಆರೋಪದ ಮೇಲೆ ತ್ರಿಶೂರ್ನಲ್ಲಿ 15 ವರ್ಷದ ಬಾಲಕ ಮತ್ತು ಆತನ ತಾಯಿಯನ್ನು ಥಳಿಸಲಾಗಿದೆ. ಕುನ್ನಂಕುಲಂನಲ್ಲಿ ಈ ಘಟನೆ ನಡೆದಿದೆ. ವಡಕ್ಕೆದಡ್ ನ ಂಜಮನೆಂಗಾಡ್ ಮೂಲದ ಶಂಸೀನಾ ಮತ್ತು ಆಕೆಯ ಪುತ್ರನಿಗೆ ಥಳಿಸಲಾಗಿದೆ. ಇಬ್ಬರೂ ಕುನ್ನಂಕುಲಂ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಂಸೀನಾ ಅವರ ಪುತ್ರ ಶುಕ್ರವಾರ ಹಗಲು ವೇಳೆ ನೆರೆಹೊರೆಯವರಾದ ಅಲಿಮೋನ್ ಅವರ ಮನೆಗೆ ಹೋಗಿದ್ದರು. ಅಂದು ಸಂಜೆ ಅಲಿ ಶಂಸೀನಾಗೆ ಕರೆ ಮಾಡಿ ಮನೆಯಲ್ಲಿ 600 ರೂಪಾಯಿ ಕಾಣೆಯಾಗಿದೆ ಎಂದು ತಿಳಿಸಿದ್ದಾರೆ.
ಮಾಹಿತಿ ತಿಳಿದು ಅಲಿ ಮನೆಗೆ ಬಂದ ಶಂಸೀನಾ ಹಾಗೂ ಆಕೆಯ ಮಗನ ಮೇಲೆ ಕಳ್ಳತನದ ಆರೋಪ ಮಾಡಿ ಥಳಿಸಿದ್ದಾರೆ. ಶಂಸೀನಾ ವಡಕ್ಕೇದಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.