ಬೊಳ್ಳೂರು(ವಿಶ್ವಕನ್ನಡಿಗ ನ್ಯೂಸ್): ಶಂಸುಲ್ ಉಲಮಾ ಹಿಫ್ಳುಳ್ ಖುರ್ ಆನ್ ಕಾಲೇಜ್ ಹಾಗೂ ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಅತ್ ಹಾಗೂ ಪಿ.ಯು ಕಾಲೇಜ್ ಬೊಳ್ಳೂರು ಹಳೆಯಂಗಡಿ ಇದರ ವಿದ್ಯಾರ್ಥಿಗಳಿಗಾಗಿ ಮೀಮ್ ಅಲ್ ಮೀಲಾದ್ ಕಾನ್ಪರೇನ್ಸ್ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು
ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕರಾದ ಶೈಖುನಾ ಬೊಳ್ಳೂರು ಉಸ್ತಾದ್ ದುಆದೊಂದಿಗೆ ಚಾಲನೆ ನೀಡಿ ಉದ್ಘಾಟಿಸಿದರು
ನಂತರ ಶರೀಅತ್ ವಿದ್ಯಾರ್ಥಿನಿಯರು ಹಾಗೂ ಖುರ್ ಆನ್ ಹಾಫಿಳ್ ವಿದ್ಯಾರ್ಥಿಗಳ ವಿವಿಧ ಸ್ಪರ್ಧಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಬಿ.ಇ ಮಹಮ್ಮದ್ ವಹಿಸಿ, ಸಂಸ್ಥೆಯ ಕಾರ್ಯನಿರ್ವಹಕರಾದ ಬಹು. ಜಿ.ಎಮ್ ಹನೀಪ್ ದಾರಿಮಿ ಅತೀಥಿ ಸ್ವಾಗತ ನೀಡಿ ಪ್ರಾಸ್ತಾವಿಕವಾಗಿ ನುಡಿದರು, ಕಾರ್ಯಕ್ರಮದಲ್ಲಿ ಬೊಳ್ಳೂರು ಉಸ್ತಾದರ ಸುದೀರ್ಘ ಸೇವೆಯನ್ನು ಗಮನಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಅದ್ಯಕ್ಷ ಶಂಸುದ್ದಿನ್,ಬೊಳ್ಳೂರು ಎಸ್.ಕೆ.ಎಸ್.ಎಸ್.ಎಫ್ ಕಾರ್ಯದರ್ಶಿ ಅಲ್ಪಾಝ್ ಇಂದಿರಾನಗರ,ಬೊಳ್ಳುರು ಮಸೀದಿ ಉಪಾದ್ಯಕ್ಷ ಟಿ.ಎಚ್.ಎ ರೆಹಮಾನ್,ಕಾರ್ಯದರ್ಶಿ ಬಿ.ಎಮ್ ಸುಲೈಮಾನ್, ಲಿಯಾವುಲ್ ಇಸ್ಲಾಮ್ ಧಪ್ ಸಮೀತಿ ಕಾರ್ಯದರ್ಶಿ ಹುಸೈನಬ್ಬ ಬೊಳ್ಳೂರು, ಗ್ರಾಮ ಪಂಚಾಯತ್ ಸದಸ್ಯರಾದ ಎಮ್ ಅಬ್ದುಲ್ ಕಾದರ್ ಹಾಗೂ ಅಬ್ದುಲ್ ಅಝೀಝ್ ಬೊಳ್ಳೂರು,ನಾಸಿರ್ ಮುಸ್ಲಿಯಾರ್,ರಿಯಾಝ್ ಪೈಝಿ,ಅನ್ಸಾರ್ ಅಝ್ಹರಿ, ಅಬ್ದುಲ್ ರಝಾಕ್ ಸಾಗ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ತ್ವಯ್ಯಿಬ್ ಪೈಝಿ ಬೊಳ್ಳೂರು ಹಾಗೂ ಹಾಫಿಳ್ ತ್ವಲ್ ಹತ್ ಕಾರ್ಯಕ್ರಮ ನಿರೂಪಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.