ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಇಂದು ಬೆಳಿಗ್ಗೆ ಎದ್ದೇಳಿದಾಗ ಕೇಳಿದ ವಾರ್ತೆ ನಿಜಕ್ಕೂ ಸುನ್ನೀ ಸಮೂಹವನ್ನು ಬೆಚ್ಚಿಬೀಳಿಸುವಂತಹದ್ದಾಗಿತ್ತು. ಹಲವು ಬಾರಿ ಅರಿವಿಲ್ಲದೇ ಕೇಳಿದ್ದೆ… ‘ಓ..ರಬೀವುಲ್ ಆಖರ್ ತಿಂಗಳೇ ನಿನಗೇಕೆ ನಮ್ಮ ಉಲಮಾಗಳೆಂದರೆ ಅಷ್ಟೊಂದು ಪ್ರೀತಿ !?” ನಮ್ಮ ಉಲಮಾಗಳನ್ನು ಯಾಕೆ ಅಷ್ಟು ಬೇಗ ಕರೆದುಕೊಳ್ಳುತ್ತಿದ್ದೀಯಾ..? ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಉಚ್ಚರಿಸಬೇಕಾಗಿ ಬಂದಿತು. ಹೌದು ಸುನ್ನೀ ಲೋಕ ಮತ್ತೊಮ್ಮೆ ಮತ್ತಷ್ಟು ಅನಾಥಭಾವ ಅನುಭವಿಸಿದೆ. ಉಲಮಾಗಳ ವಿದಾಯ ತುಂಬಲಾರದ ನಷ್ಟ.
ಒಬ್ಬರು ಮರಣ ಹೊಂದಿದರೆ ಪರವಾಗಿಲ್ಲ ಇವರಾದರು ಇದ್ದಾರಲ್ವಾ ಎಂದು ನಿಟ್ಟುಸಿರು ಬಿಡುವಾಗ ಆ ಉಲಮಾಗಳು ಅಲ್ಲಾಹನೆಡೆಗೆ ಯಾತ್ರೆಯಾಗುತ್ತಿದ್ದಾರೆ.
ಬರಹದ ಪ್ರತಿ ಗೀಚುವಿಕೆಯಲ್ಲೂ ಬಹಳಷ್ಟು ನೋವುಗಳು ತುಂಬಿವೆ. ಶೈಖುನಾ ಸುಲ್ತಾನುಲ್ ಉಲಮಾ ಅನಾರೋಗ್ಯಕ್ಕೀಡಾದಾಗ ನಮಗೆ ಅಭಯವಾಗಿ ಚೆರಿಯೆ ಎ.ಪಿ ಉಸ್ತಾದ್ ಇದ್ದಾರಲ್ವಾ ಎಂದು ಸಮಾಧಾನಗೊಳ್ಳುವಾಗ ಇಂದು ಮುಂಜಾನೆ ಕಿವಿಗಪ್ಪಳಿಸಿದ ವಾರ್ತೆ ನಿಜಕ್ಕೂ ಸಿಡಿಲು ಬಡಿದಂತಾಯಿತು.
ಒಂದು ವಾರಗಳಿಂದ ಸಣ್ಣ ಮಟ್ಟಿನ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಇಷ್ಟು ಬೇಗ ಇಹಲೋಕ ತ್ಯಜಿಸುವರು ಎಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಚೆರಿಯೇ ಎ.ಪಿ ಉಸ್ತಾದ್ ಎಂದೇ ಖ್ಯಾತಿಯಾಗಿದ್ದ ಶೈಖುನಾ ಎ.ಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಬೆಳಿಗ್ಗಿನ ಹೊತ್ತು ಇಹಲೋಕ ತ್ಯಜಿಸಿದರು. ಉಲಮಾಗಳ ಮರಣ ಅದು ಈ ಲೋಕದ ಮರಣ ಎಂಬಂತೆ ಭೂಮಿ ಮತ್ತಷ್ಟು ಅನಾಥವಾಗುತ್ತಾ ಇದೆ. ಸುನ್ನೀ ಲೋಕವನ್ನು ತಬ್ಬಲಿಯಾಗಿಸಿ ಉಲಮಾಗಳು ಪರಲೋಕ ಯಾತ್ರೆಯಾಗುತ್ತಿದ್ದಾರೆ. ಅಲ್ಲಾಹು ಉಸ್ತಾದರಿಗೆ ಮಗ್ಫಿರತ್ ನೀಡಲಿ, ಸ್ವರ್ಗ ನೀಡಿ ಅನುಗ್ರಹಿಸಲಿ(ಆಮೀನ್) ಫ್ರೌಢಿ ತುಂಬಿದ ಪ್ರೌಢಿಮೆಯೊಂದು ಇಂದು ಅಲ್ಲಾಹನೆಡೆಗೆ ಯಾತ್ರೆಯಾಯಿತು.
✍️ಕೆ.ಪಿ ಬಾತಿಶ್ ತೆಕ್ಕಾರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.