(ವಿಶ್ವ ಕನ್ನಡಿಗ ನ್ಯೂಸ್) : ಮುಂದುವರೆದ ಭಾಗವಾಗಿ ಲೇಖಕ ವಿವೇಕಾನಂದ ಎಚ್ ಕೆ ಅವರೇ, ಟಿಪ್ಪು ಸುಲ್ತಾನ್ ಅವರು ಮೈಸೂರು ಒಡೆಯರ ಬಳಿ ಯಾವ ತಪ್ಪಿಗಾಗಿ ಕ್ಷಮೆ ಕೇಳಬೇಕು. 20,000 ಚದರ ಮೀಟರ್ ಇದ್ದ ಮೈಸೂರು ರಾಜರ ಓಡೆತನವನ್ನು 50,000 ಚದರ ಮೀಟರ್ ಗೆ ವಿಸ್ತರಿಸಿದ್ದಕ್ಕಾಗಿಯಾ?, ಮುಳುಗಡೆ ಗೊಂಡಿದ್ದ ಮೈಸೂರು ರಾಜಮನೆತನನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿಯಾ?, ಬಲಿಷ್ಠ ರಾಜಮನೆತನಯ ಪಟ್ಟಿಯಲ್ಲಿ ಮೈಸೂರು ರಾಜ ಮನೆತನೆಯನ್ನು ಸೇರಿಸಿ ಬ್ರಿಟಿಷರ ಗುಲಾಮಗಿರಿಯಿಂದ ತಪ್ಪಿಸಿದ್ದಕ್ಕಾಗಿಯಾ?, ರಾಜಮನೆತನಯ ಒಡನಾಟದಲ್ಲಿದ್ದ ಪೂರ್ಣಯ್ಯನ ಮೋಸಕ್ಕೆ ಬಲಿಯಾಗಿದ್ದಕ್ಕಾಗಿಯಾ?, ಯಾವುದಕ್ಕಾಗಿ ಕ್ಷಮೆ ಕೇಳಬೇಕು ಎಂದು ಸ್ವಲ್ಪ ವಿವರಿಸಿ ಹೇಳುತ್ತೀರಾ ವಿವೇಕಾನಂದರವರೆ.
ಟಿಪ್ಪು ಸುಲ್ತಾನ್ ರವರು ಎಷ್ಟು ದೇವಸ್ಥಾನಗಳನ್ನು ಕೆಡವಿದ್ದಾರೆ?, ನಿಮ್ಮ ಬಳಿ ನಿಜವಾದ ಇತಿಹಾಸದಲ್ಲಿ ಉಲ್ಲೇಖವಿದ್ದರೆ ಅದನ್ನು ತೋರಿಸುವಿರಾ?, ಬ್ರಿಟಿಷರ ಗುಲಾಮಗಿರಿ ಮಾಡುವ ಕೆಲವರು ಕೆಲವು ದೇವಸ್ಥಾನದ ಕೆಲವು ಸ್ಥಳಗಳನ್ನು ನಾಶಪಡಿಸಿ ಅದನ್ನು ಟಿಪ್ಪುವಿನ ತಲೆಗೆ ಕಟ್ಟಲು ಯತ್ನಿಸಿದಾಗ ಅಂತವರ ಸದೆ ಬಡಿದು ತಲೆ ಕಡಿದು ದೇವಸ್ಥಾನಗಳನ್ನು ಚೀರ್ಣೋದ್ಧಾರ ಮಾಡಿದ ನಿಜವಾದ ಇತಿಹಾಸವನ್ನು ತರಲು ನಿಮ್ಮಿಂದ ಸಾಧ್ಯವಿಲ್ಲವೇ?, ಅಥವಾ ಬ್ರಿಟಿಷರು ಅವರ ಗುಲಾಮರು ಷಡ್ಯಂತ್ರ ಮಾಡಿ ಟಿಪ್ಪು ಸುಲ್ತಾನನ್ನು ಖಳನಾಯಕನನ್ನಾಗಿ ಮಾಡಲು ರಚಿಸಿದ ಸುಳ್ಳು-ಪೊಳ್ಳು ಇತಿಹಾಸಗಳೆ ನಿಮಗೆ ಕಾಣುವುದೇ?,
ಕೊಡಗಿನ ಹಾಗೂ ಹಲವು ಕಡೆಗಳಲ್ಲಿ ಟಿಪ್ಪುವಿನ ವಿರುದ್ಧ ಬ್ರಿಟಿಷರ ಗುಲಾಮಗಿರಿ ಮಾಡಿ ಗೂಢಚಾರಿಕೆ ಮಾಡುತ್ತಿದ್ದ, ದೇಶದ್ರೋಹಿ ಯುವಕರನ್ನು ಸೆರೆಹಿಡಿದು ತಲೆ ಕಡಿದಿದ್ದು ತಪ್ಪಾ?, ಅಂದು ಆ ಜಾಗದಲ್ಲಿ ಯಾರೇ ರಾಜನಿದ್ದರೂ ಹಾಗೆ ಮಾಡುತ್ತಿದ್ದ ಅದು ರಾಜ ನಿಯಮವು ಸರಿ. ಹಾಗೇನಾದರೂ ಅದು ತಪ್ಪು ಎಂದಾದರೆ ಇಂದು ಸರ್ಕಾರದ ವಿರುದ್ಧ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರನ್ನು ಬಂಧಿ ಮಾಡಲಾಗುತ್ತಿದೆ, ಈಡಿ ಐಟಿ ರೇಡುಗಳನ್ನು ಮಾಡಿ ಚಿತ್ರಹಿಂಸೆ ಕೊಡಲಾಗುತ್ತಿದೆ, ಇವೆಲ್ಲವೂ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ?.
ಬ್ರಿಟಿಷರಿಗೆ ಚರ್ಚಿನ ಒಳಗೆ ರಕ್ಷಣೆ ನೀಡಿ ಗೂಢಚಾರಿಕೆ ಮಾಡಿ ಅವರ ಗುಲಾಮಗಿರಿ ಮಾಡುತ್ತಿದ್ದ ಕೆಲ ಕ್ರಿಶ್ಚಿಯನ್ ಸಮುದಾಯದವರನ್ನು ಬಂದಿ ಮಾಡಿ ಕೊಲೆ ಮಾಡಲಾಯಿತು. ಹಾಗೆ ಮಾಡದಿದ್ದಲ್ಲಿ ಟಿಪ್ಪುವನ್ನು ಎಂದು ಮೋಸದಿಂದ ಸಾಯಿಸಿ ಬಿಡುತ್ತಿದ್ದರು, ಮಾತ್ರವಲ್ಲ ನಮ್ಮ ಮೈಸೂರು ರಾಜಮನೆತನದ ಹೆಸರೇ ಇಲ್ಲದಂತಾಗುತ್ತಿತ್ತು. ಇಂದು ಕರ್ನಾಟಕವೂ ದಸರವು ಇರುತ್ತಿರಲಿಲ್ಲ, ಇದು ಸತ್ಯ ಅಲ್ಲವಾ ವಿವೇಕಾನಂದ ಅವರೇ?.
ಇನ್ನು ಸತ್ತ ಮೇಲೆ ಜಾತಿ ಇಲ್ಲ ಜಾತಿಯನ್ನು ನಾವೇ ಮಾಡಿಕೊಂಡದ್ದು ಗಾಂಡ್ ಚಾಲಿಯಿಂದ ಎಂದು ಅರಿವಾಗಿದ್ದು, ಸತ್ತು ಹೋದ ಟಿಪ್ಪು ಸುಲ್ತಾನಿಗೆ ಮಾತ್ರವ ನೀವು ಹೇಳುತ್ತಿರುವುದು, ಅಥವಾ ಇದುವರೆಗೆ ಒಳ್ಳೆಯ ರೀತಿಯಲ್ಲಿ ಆಗಲಿ, ಕೆಟ್ಟ ರೀತಿಯಾಗಲಿ ಒಳ್ಳೆ ಸಂದೇಶ ನೀಡಿದವರಾಗಲಿ, ಅಥವಾ ಕೆಟ್ಟ ಸಂದೇಶ ನೀಡಿದವರಾಗಲಿ, ತಮ್ಮ ಧರ್ಮದ ಹೆಸರನ್ನೇ ಇಟ್ಟುಕೊಂಡು ಅದೇ ಹೆಸರಿನಲ್ಲಿ ಸತ್ತುಹೋದಂತಹ ಮಹಾನರು ಹೀನರು, ಎಲ್ಲರಿಗೂ ನಿಮ್ಮ ಮಾತಿನ ಸಂದೇಶ ಅನ್ವಯವಾಗುತ್ತದೇಯಾ?, ಅದನ್ನು ಹೇಳುವ ತಾಕತ್ತು ದಮ್ಮು ನಿಮಗೆ ಇದೆಯಾ?, ಇದೆ ಎಂದಾದರೆ ನಾನು ಅವರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ಹಾಗೇನಾದರೂ ನೀವು ಅದನ್ನು ಸಮರ್ಥಿಸಿಕೊಂಡರೆ ಮತ್ತೆ ನಿಮಗೆ ನೆಮ್ಮದಿಯ ಜೀವನ ಮಾಡಲು ಕಷ್ಟವಾಗಬಹುದೇನೋ.
ಏಕೆಂದರೆ ಮುಸ್ಲಿಂ ಸಮುದಾಯದಂತೆ ಎಲ್ಲವನ್ನು ಸಹಿಸಿಕೊಂಡು ನಮಗ್ಯಾಕೆ ನೀನು ಮಾಡು ಅವನು ಮಾಡ್ಲಿ, ನೀನು ಕೇಳು ಅವನ ಕೇಳಿ ಅವನಿಗಾಗಿದ್ದು ನಮಗಲ್ವಲ್ಲ, ಅಂತ ಸುಮ್ಮನೆ ಕೂರೋ ಸಮುದಾಯ ಬೇರೆ ಸಮುದಾಯಗಳಲ್ಲ, ಅದರಿಂದ ನಿಮಗೆ ಅದು ಸಮರ್ಥಿಸಿಕೊಳ್ಳಲು ಕಷ್ಟವಾಗಬಹುದು.
ಇನ್ನು ಟಿಪ್ಪು ಸುಲ್ತಾನ್ ಬಗ್ಗೆ ಹೇಳಿರುವಂತಹ ನುಡಿಗಳ ಬಗ್ಗೆ ದಾಖಲೆಗಳಿದ್ದರೆ ಅದನ್ನು ತೆಗೆದುಕೊಂಡು ಬನ್ನಿ ಬಹಿರಂಗವಾಗಿ ಚರ್ಚಿಸಲು ನಾವು ಸಿದ್ದರಿದ್ದೇವೆ. ವಿವೇಕಾನಂದ ಹೆಚ್ ಕೆ ಅವರೋ ಅಥವಾ ಅವರ ರೀತಿ ಚಿಂತಿಸುವ ಬರೆಯುವ ಯಾರಾದರೂ ಸರಿ.
– ಮನ್ಸೂರ್ ಅಹಮದ್ ಕೌಡಳ್ಳಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.