ಶಿರ್ವ (ವಿಶ್ವ ಕನ್ನಡಿಗ ನ್ಯೂಸ್) : ಅಣ್ಣ ನನ್ನನ್ನು ಕರೆಯುತ್ತಿದ್ದಾನೆ ನಾನು ಬಾವಿಗೆ ಹಾರುತ್ತೇನೆ ಎಂದು ವಿಪರೀತ ಕುಡಿತದ ಚಟ ಹೊಂದಿದ್ದ ಯುವಕನೋರ್ವ ತನ್ನ ಮನೆ ಸಮೀಪದ ನೆರೆಮನೆಯವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸಚಿನ್ ಮೂಲ್ಯ ಎಂದು ತಿಳಿದುಬಂದಿದೆ.
ಈತನ ಅಣ್ಣನೂ ಸುಮಾರು 4 ವರ್ಷದ ಹಿಂದೆ ಇದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಣ್ಣ ನನ್ನನ್ನು ಕರೆಯುತ್ತಿದ್ದಾನೆ ನಾನು ಬಾವಿಗೆ ಹಾರುತ್ತೇನೆ ಎಂದು ಮನೆಯವರಲ್ಲಿ ಹೇಳಿ ಸಂಜೆ ಬಾವಿಗೆ ಹಾರಿದ್ದಾನೆ. ಸುಮಾರು 25 ಅಡಿ ನೀರಿದ್ದು ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಹಾಗೂ ದೆಂದೂರಿನ ಅಶೋಕ್ ಶೆಟ್ಟಿ ಮತ್ತು ತಂಡ ಮೃತ ದೇಹವನ್ನು ರಾತ್ರಿ ಬಾವಿಯಿಂದ ಮೇಲಕ್ಕೆತ್ತಿದ್ದು, ಮೃತದೇಹ ಉಡುಪಿಯ ಶವಾಗಾರದಲ್ಲಿಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.