ಚೆನ್ನೈ (ವಿಶ್ವ ಕನ್ನಡಿಗ ನ್ಯೂಸ್) : ತನ್ನ ಮನೆಗೆ ಪೆಟ್ರೋಲ್ ಬಾಂಬ್ ಎರಚಿ ಪೊಲೀಸರಿಗೆ ಕರೆ ಮಾಡಿದ ಸಂಘಪರಿವಾರದ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಚೆನ್ನೈ ಕುಂಭಕೋಣಂ ಹಿಂದೂ ಸಂಘಟನೆ ಪಟ್ಟಣದ ಕಾರ್ಯದರ್ಶಿ ಚಕ್ರಪಾಣಿ (40) ಬಂಧಿತ ಆರೋಪಿ.
ರಾಜ್ಯ ಮಟ್ಟದಲ್ಲಿ ಗಮನ ಸೆಳೆಯಲು ತನ್ನ ಮನೆಗೆ ಬಾಂಬ್ ಹಾಕಿರುವುದಾಗಿ ಚಕ್ರಪಾಣಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಬಾಂಬ್ ದಾಳಿ ವೇಳೆ ಜೀವ ಬೆದರಿಕೆ ಇದೆ ಎಂಬ ಕಾರಣಕ್ಕೆ ಪೊಲೀಸರಿಂದ ಭದ್ರತಾ ಅಧಿಕಾರಿ ಸಿಗಬಹುದೆಂಬ ನಿರೀಕ್ಷೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ಚಕ್ರಪಾಣಿ ಹೇಳಿಕೆ ನೀಡಿದ್ದಾರೆ. ನ.21ರಂದು ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿ ಜನರ ಗುಂಪೊಂದು ಬಂದು ತನ್ನ ಮನೆಗೆ ಪೆಟ್ರೋಲ್ ಬಾಂಬ್ ಎಸೆದಿದೆ ಎಂದು ಹೇಳಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ.
ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಚಕ್ರಪಾಣಿ ಅವರ ಮನೆ ಮುಂದೆ ಪ್ರತಿಭಟನೆ ಆರಂಭಿಸಿದರು. ಇದೇ ವೇಳೆ ವಿಧಿವಿಜ್ಞಾನ ತಂಡ ನಡೆಸಿದ ವಿಸ್ತೃತ ಪರಿಶೀಲನೆಯಲ್ಲಿ ಚಕ್ರಪಾಣಿ ಅವರ ಮನೆಯಿಂದ ಪೆಟ್ರೋಲ್ ತುಂಬಿದ ಬಾಟಲಿಯಲ್ಲಿ ವಿಕ್ಸ್ ತಯಾರಿಸಲು ಬಳಸುವ ಬಟ್ಟೆ ಪತ್ತೆಯಾಗಿದೆ. ವಿಚಾರಣೆ ವೇಳೆ ಚಕ್ರಪಾಣಿ ತಪ್ಪೊಪ್ಪಿಕೊಂಡಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.