(www.vknews.in) : ಇತಿಹಾಸವಿರುವ ಸಮುದಾಯದ ಇಂದಿನ ನಡೆಯನ್ನು ನೋಡುವಾಗ ತುಂಬಾ ದುಃಖವಾಗುತ್ತದೆ ಯಾಕೆಂದರೆ ಜಾತಿ ಮುಸ್ಲಿಂ ನಿಯಮವೂ ಒಂದೇ ಆದರೂ ಹಲವು ಸಂಘಟನೆಗಳನ್ನು ಕಟ್ಟಿ ಬೇಕಾದ ರೀತಿಯಲ್ಲಿ ಇಸ್ಲಾಮಿನ ನಿಯಮವನ್ನು ವಾದಿಸುವವರು ತಮ್ಮಳೊಗೆ ಹಲವು ಅನುಮಾನಗಳು ಯಾವಾಗ ಇದೆಕ್ಕೆಲ್ಲ ಸೂಕ್ತವಾದ ಪರಿಹಾರ..? ವಿರೋಧ ಸಂಘಟನೆಯವರು ಏನಾದರೂ ಕಾರ್ಯ ಮಾಡಿದರೆ ಅದರ ವಿರುದ್ಧ ಶುರುವಾಯಿತು ಹಲವು ಹಣೆ ಪಟ್ಟಿ ಹಾಗೂ ತೆಜೋವಧೆ ಬರಹಗಳನ್ನು ಗೀಚುವವರು ಒಂದು ಸಾಲಿನಲ್ಲಾದರೆ ಅದನ್ನು ರವಾನಿಸಲು ಅಂದರೆ ಪೋಸ್ಟ್ ಮ್ಯಾನ್ ಕೆಲಸವನ್ನು ಮಾಡಲು ಮತ್ತೊಂದು ಸಾಲಿನಲ್ಲಿ ನಿಂತಿರುತ್ತಾರೆ..?
ಬೇಕಾದ ರೀತಿಯಲ್ಲಿ ಫತ್ವಾವನ್ನು ಹೊರಡಿಸುವವರು ಅ ಸಮಯದಲ್ಲಿ ಒಂದು ಮಾತಿದೆ ನಾವು ಮಾಡಿದರೆ ಚಮತ್ಕಾರ ಬೇರೆಯವರು ಮಾಡಿದರೆ ಬಲತ್ಕಾರ ಎಂದು ಈ ಮಾತು ಅನ್ವಯವಾಗುವುದು ರಾಜಕೀಯದಲ್ಲಾಗಿದೆ… ನಾವುಗಳು ನೋಡಬಹುದು ವಿರೋಧ ಪಕ್ಷದ ಮಹಿಳೆಯರು ಪ್ರತಿಭಟನೆ ಮಾಡಿದರೆ ಶುರುವಾಯಿತು ವಾಟ್ಸಪ್ ವೀರರ ಹವ ಮತ್ತೇ ಕೇಳಬೇಕೇ..?
ಶುರುವಾಯಿತು ಅ ಸಹೋದರಿಯರ ಭಾವ ಚಿತ್ರಕ್ಕೆ ಬರಹಗಳು ಹಾಗೂ ಉಸ್ತಾದರ ಪ್ರಭಾಷಣಗಳನ್ನು ಹಾಕಿ ಸೋಶಿಯಲ್ ಮೀಡಿಯಾದಲ್ಲಿ ತೆಜೋವಧೆ ಮಾಡಲು ಹಾಗೂ ಫತ್ವ ನೀಡಲು ಆದರೆ ಸ್ವಂತ ಪಕ್ಷದವರು ಮಾಡಿದರೆ ಏನು ಇಲ್ಲ ಫತ್ವಾನೂ ಇಲ್ಲ ಅವಾಗ ಹರಾಂ ಆಗಲ್ಲ ಮತ್ತೊಂದು ವಿಷಯವೇನೆಂದರೆ ಹರಾಂ ಗೊತ್ತಿದರು ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯವ ನ್ನು ಕೇಳಿದರೆ ಎಲ್ಲಿಯಾದರೂ ಹರಾಂ ಹೇಳಿದರೆ ಪಕ್ಷದಿಂದ ಹೊರಗಿಡುವರು ಎಂದು ಭಾವಿಸಿ ಹರಾಂ ಆದ ಕಾರ್ಯವನ್ನು ಹಲಾಲ್ ಎಂದು ಸಮರ್ಥಿಸವರಿಗೇನು ಕಮ್ಮಿಯಿಲ್ಲ ಎಂಬುವುದು ಖೇದಕರವಾದ ವಿಷಯ
ಸ್ವಂತ ಊರಿನಲ್ಲಿ ಸಮುದಾಯದ ರಾಜಕೀಯದವರು ಹಾಗೂ ಗಣ್ಯರು ಮೂರ್ತಿ ಪೂಜೆಯನ್ನು ಮಾಡುವುದು ಕೆಲವು ಫತ್ವಾಧಾರಿಗಳಿಗೆ ಹರಾಂ ಆಗಲ್ಲ ಆದರೆ ಯಾವುದೋ ಯಾವುದೋ ದೇಶದಲ್ಲಿ ನಡೆಯುವ ಕ್ರೀಡೆಯನ್ನು ಹರಾಂ ಎಂದು ಹೇಳಿ ನಡೆಯುತ್ತಾರೆ ಹಾಗಂತ ಸ್ವಂತ ಊರಿನಲ್ಲಿ ನಡೆಯುವ ಕಾರ್ಯವನ್ನು ಮಾತ್ರ ಹರಾಂ ಹಲಾಲ್ ಎಂದು ಹೇಳಬೇಕು ಎಂದಲ್ಲ ಇಸ್ಲಾಮಿನ ಕಾನೂನಿನ ವಿರುದ್ಧವಾಗಿ ಯಾರೇ ಮಾಡಿದರೂ ಅದು ತಪ್ಪೇ ಅದರಲ್ಲಿ ಎಳ್ಳು ಕಾಲಿನಷ್ಟು ರಾಜಿಯ ವಿಷಯವೇ ಇಲ್ಲಾ ಆದರೆ ಇಲ್ಲಿ ಬೇಸರದ ವಿಷಯವೇನಂದರೆ
ಶ್ರೀಮಂತರು ಹಾಗೂ ರಾಜಕೀಯದವರು ಹಾಗೂ ಏನೇ ಮಾಡಿದರೂ ಅವರು ಮಾಡಿದ್ದು ಹರಾಂ ಎಂದು ಹೇಳಲು ಕೆಲವರು ಹಿಂಜರಿಯುತ್ತಾರೆ ಆದರೆ ಅವರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಿ ಅವರಿಗೆ ಹೂ ಗುಚ್ಚವನ್ನು ನೀಡಿ ಸನ್ಮಾನವನ್ನು ಸಹ ಮಾಡುತ್ತಾರೆ ಯಾಕೆಂದರೆ ಅವರಲ್ಲಿ ಇವರಿಗೆ ಹಲವು ಕಾರ್ಯಗಳು ನಡೆಯುತ್ತದೆ ಅಂತ ಧರ್ಮದ ನಿಯಮವನ್ನು ತಿರುಚಲು ಇವರು ಯಾರು ಎಂಬುವುದು ಅರಿವಾಗುತ್ತಿಲ್ಲ
ಇಸ್ಲಾಂ ಧರ್ಮದಲ್ಲಿಲ್ಲ ತಾರತಮ್ಯ ಇಂದು ಕೆಲವು ಜನರಲ್ಲಿದೆ ತಮ್ಮ ಪಕ್ಷದ ನಾಯಕರು ಇಸ್ಲಾಮಿನ ವಿರುದ್ಧವಾದ ಕಾರ್ಯ ಮಾಡಿದರೆ ತುಟಿಕ್ ಪಿಟಿಕ್ ಅನ್ನದೆ ಮೌನ ವಹಿಸುತ್ತಾರೆ ಆದರೆ ವಿರೋಧ ಪಕ್ಷದವರು ಮಾಡಿದರೆ ಗಲ್ಲಿ ಗಲ್ಲಿಗಲಲ್ಲಿ ಶುರುವಾಗುತ್ತದೆ ನಿಂದನೆ ಹಾಗೂ ಭಾಷಣಗಳು ಎತ್ತ ಕಡೆಗೆ ಸಾಗುತ್ತಿದೆ ನಮ್ಮ ಸಮುದಾಯ ಹರಾಂ ಮಾಡುವವನು ಯಾರೇ ಆಗಲಿ ಅವನಿಗೆ ಧರ್ಮದ ನಿಯಮನ್ನು ಮೂಡಿಸಲು ಯಾಕೆ ಹಿಂಜರಿಕೆ ಜಾತಿ ಒಂದೇ ಅಲ್ಲವೇ..? ನಿಯಮವು ಒಂದೇ ಅಲ್ಲವೇ..? ಮತ್ತೆ ಯಾಕೆ ತಾರತಮ್ಯ ನೀತಿಯನ್ನು ಪಾಲಿಸುವುದು ಎಂದು ಅರಿವಾಗುತ್ತಿಲ್ಲ …
ಧರ್ಮವನ್ನು ರಕ್ಷಿಸಬೇಕಾದ ಕೆಲವರು ಹಣದಾಸೆ ಹಾಗೂ ಅಧಿಕಾರದಾಸೆಗೆ ಬೇಕಾಗಿ ಅವರಿಗೆ ಬೇಕಾದ ರೀತಿಯಲ್ಲಿ ಧರ್ಮದ ನಿಯಮವನ್ನು ತಿರುಚಿ ಜೀವನ ಸಾಗಿಸಿ ಧರ್ಮವನ್ನು ಒತ್ತೆ ಇಟ್ಟಿರುವುದು ಖೇದಕರವಾದ ಸಂಗತಿ ಅಂತ ಹೇಳಬಹುದು..
✍️ ಅನೀಸ್ ಕುಕ್ಕಾಜೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.