ಆತೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ಆತೂರು ಪೇಟೆ -ಹುಸೈನ್ ನಗರ – ಎಲ್ಯoಗ – ಆತೂರು ಶ್ರೀ ಸದಾಶಿವ ದೇವಸ್ಥಾನ ವೆಂಬ ರಸ್ತೆ ವಿರುತ್ತದೆ. ಆತೂರು ಶ್ರೀ ಸದಾಶಿವ ದೇವಸ್ಥಾನ ದಿಂದ ಎಲ್ಯoಗದ ವರೆಗೂ ಕಾಂಕ್ರೀಟ್ ರಸ್ತೆ ವಾಗಿರುತ್ತದೆ.
ಎಲ್ಯoಗ ದಿಂದ ಆತೂರು ಪೇಟೆ ವರೆಗೆ ಸರಿಯಾದ ರಸ್ತೆ ವಿರುವುದಿಲ್ಲ. ಆತೂರು ಪೇಟೆ ಯಿಂದ 250 ಮೀಟರ್ ಟಾರು ರಸ್ತೆಯಾಗಿರುತ್ತದೆ, ಟಾರು ರಸ್ತೆಯೂ ಕಿತ್ತು ಹೋಗಿದೆ. ಕಿತ್ತು ಹೋದ ಕಾರಣದಿಂದ ವಾಹನ ಸವಾರರಿಗೆ ಹೋಗಲು ಕಷ್ಟವಾಗುತ್ತದೆ. ಹುಸೈನ್ ನಗರದಲ್ಲಿ 50 ಮೀಟರ್ ನಷ್ಟ ಕಾಂಕ್ರೀಟ್ ರಸ್ತೆ ವಾಗಿರುತ್ತದೆ. ಉಳಿದ ಸ್ಥಳದಲ್ಲಿ ಟಾರು ಅಥವಾ ಕಾಂಕ್ರೀಟ್ ರಸ್ತೆ ವಾಗಿರುವುದಿಲ್ಲ.
ಮಳೆಗಾಳದಲ್ಲಿ ಈ ರಸ್ತೆಯಲ್ಲಿ ಹೋಗಲು ಜನರು ಪರದಾಟ ಮಾಡುತ್ತಾರೆ. ಮಳೆಗಾಲದಲ್ಲಿ ಕೆಲವೊಂದು ಸ್ಥಳದಲ್ಲಿ ನೀರು ರಸ್ತೆಯು ಹೊಂಡವಾಗಿರುತ್ತದೆ. ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು, ವಾಹನಗಳು ಹಾಗು ದಿನ ನಿತ್ಯ ಜನರು ಕೆಲಸಕ್ಕೆ ಹೋಗಲು ಅವಲಂಬನೆ ಮಾಡುತ್ತಾರೆ. ಅದು ಅಲ್ಲದೆ 50 ರಷ್ಟು ಅಲ್ಪಸಂಖ್ಯಾತ ಮನೆಗಳಿದ್ದು ಮತ್ತು 1 ಮಸೀದಿ ಇದೆ.
ಈ ರಸ್ತೆಯು ಆತೂರು ಶ್ರೀ ಸದಾಶಿವ ದೇವಸ್ಥಾನ ಹಾಗು ಮುಹ್ಯುದ್ದೀನ್ ಜುಮಾ ಮಸೀದಿ ಆತೂರಿಗೆ ಪ್ರಾಮುಖ್ಯ ರಸ್ತೆ ವಾಗಿರುತ್ತದೆ. ಶಾಸಕರಿಗೆ, ಅಲ್ಪಸಂಖ್ಯಾತ ಇಲಾಖೆಗೆ ಹಾಗು ಗ್ರಾಮ ಪಂಚಾಯತ್ ಗ್ಗೆ ಮನವಿ ಮಾಡಿದರು ಯಾವುದೇ ಪ್ರಯೋಜನೆ ವಿಲ್ಲದಂತೆ ವಾಗಿ ಹೋಗಿದೆ. ಅಂತೂ ಇಂತೂ ಹಲವಾರು ವರ್ಷ ಗಳಿಂದ ಜನರು ಹಾಗು ವಿದ್ಯಾರ್ಥಿಗಳು ಸಮರ್ ರ್ಪಕವಾದ ರಸ್ತೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.
ಪಂಚಾಯತ್ ಅಥವಾ ಸರಕಾರ ಯಾವಾಗ ರಸ್ತೆ ಅಭಿವೃದ್ಧಿ ಮಾಡುತ್ತೆ ವಂಬುದು ಕಾದು ನೋಡಬೇಕಾಗಿದೆ ಎಂದು ಊರವರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.