ಮದೀನ(ವಿಶ್ವಕನ್ನಡಿಗ ನ್ಯೂಸ್): ಸಮಸ್ತ ಕೆರಳ ಜಂಇಯ್ಯತುಲ್ ಉಲೇಮಾದ ಅನಿವಾಸಿ ಸಂಘಟನೆ ಸಮಸ್ತ ಇಸ್ಲಾಮಿಕ್ ಸೆಂಟರ್ (SIC) ನ ಸೌದಿ ರಾಷ್ಟ್ರೀಯ ಸಮ್ಮೇಳನ ಸೌದಿ ಅರೇಬಿಯಾದ ಮದೀನದಲ್ಲಿ ನವೆಂಬರ್ 18 ರಂದು ಜರುಗಿತು. ಸೌದಿ ಅರೇಬಿಯಾದ ವಿವಿಧ ಭಾಗದಿಂದ 500 ಕ್ಕೂ ಮೇಲ್ಪಟ್ಟು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸಮ್ಮೇಳನಕ್ಕೆ SIC ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಉಬೈದುಲ್ಲಾ ತಂಗಳ್ ಅಲ್ ಹೈದ್ರೋಸಿ ಧ್ವಜರೋಹಣ ಮೂಲಕ ಚಾಲನೆ ನೀಡಿದರು. ಸಮ್ಮೇಳನವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಖಾಝಿ ಶೈಖುನಾ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಉಸ್ತಾದ್ ಉದ್ಘಾಟಿಸಿ ಮಾತನಾಡಿ, “ಸಮಸ್ತ ಇಸ್ಲಾಮಿಕ್ ಸೆಂಟರ್ ಸೌದಿ ಅರೇಬಿಯಾದಲ್ಲಿ ಸಮಸ್ತದ ಆದರ್ಶತೆಯನ್ನು ಕಾರ್ಯಕರ್ತರಲ್ಲಿ ಮೈಗೂಡಿಸುವ ಕಾರ್ಯಕ್ರಮ ಮತ್ತು ಜಾಗೃತಿಗಳು ನಡೆಸುತ್ತಿರುವುದು ಪ್ರಶಂಸನೀಯ. SIC ಕರ್ನಾಟಕ ಘಟಕಗಳು ಕುಡಾ ಹಲವಾರು ಆದ್ಯಾತ್ಮಿಕ, ಶೆಕ್ಷಣಿಕ, ಸಾಮಾಜಿಕ, ಜೀವ ಕಾರುಣ್ಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ. ಅದರ ರಾಷ್ಟ್ರೀಯ ಸಮಿತಿಯೂ ರಚನೆಯಾಗಬೇಕು” ಎಂದರು. ಸಯ್ಯದ್ ಅಬಿದ್ ತಂಗಳ್ ಮೊಗ್ರಾಲ್ ಪುತ್ತೂರು ದುಃಅ ಪ್ರಾರ್ಥನೆಗೈದರು.
ಸಂಜೆ ನಡೆದ ಸಮಾರೋಪ ಸಮಾರಂಭದಕ್ಕೆ ಸಮಸ್ತದ ಅಧ್ಯಕ್ಷರಾದ ಸಯ್ಯದುಲ್ ಉಲೇಮಾ ಸಯ್ಯದ್ ಮೊಹಮ್ಮದ್ ಜಿಫ್ರಿ ಮುತ್ತು ಕೋಯ ತಂಗಳ್ ನೇತೃತ್ವ ನೀಡಿದರು. ” ಆಧುನಿಕ ಕಾಲಘಟ್ಟದಲ್ಲಿ ಆದರ್ಶತೆಯನ್ನು ಮೈಗೂಡಿಸಿಕೊಳ್ಳುವ ಸಂಕಷ್ಟ ಸಮಯದಲ್ಲಿ SIC ತನ್ನ ಪರಿಮಿತಿಯಲ್ಲಿ ಅದನ್ನು ಪಸರಿಸುತ್ತಿದೆ. ಒಳಿತಿನ ಮೂಲಕ ಕೆಡುಕನ್ನು ಸೋಲಿಸಬೇಕು, ಸಮಸ್ತದ ಉಲೇಮಾಗಳು ನಮಗೆ ತೋರಿಸಿಕೊಟ್ಟ ಅಹ್ಲುಸುನ್ನತಿ ವಲ್ ಜಮಾಹತಿನ ಹಾದಿಯಲ್ಲಿ ಸಾಗಬೇಕು” ಎಂದು ಕರೆ ನೀಡಿದರು.
SYS ಕೇಂದ್ರ ಸಮಿತಿ ಕಾರ್ಯದರ್ಶಿ ವಾಗ್ಮಿ ಅಬ್ದುಸ್ಸಮದ್ ಪೂಕೋಟೂರ್ ಪ್ರಧಾನ ಭಾಷಣಗೈದರು. ಸಮಸ್ತ ವಿದ್ಯಭ್ಯಾಸ ಬೋರ್ಡ್ ಮ್ಯಾನೇಜರ್ ಮೊಯಿದೀನ್ ಕುಟ್ಟಿ ಹಾಜಿ ಅಶಂಶಗೈದರು. ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮೌಲವಿ ಅರೆಕ್ಕಲ್ ಸ್ವಾಗತ ಭಾಷಣ, ಸಯ್ಯದ್ ಜಮಾಲುಲ್ಲೈಲಿ ತಂಗಳ್ ಪ್ರಾರ್ಥನೆಗೈದರು.
ಸಮ್ಮೇಳನದಲ್ಲಿ SIC ಕರ್ನಾಟಕ ರಿಯಾದ್ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಆರಿಫ್ ಬಾಖವಿ ನೆಲ್ಯಾಡಿ, ಜುಬೈಲ್ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಹುದವಿ ಮೂಡಿಗೆರೆ, SKSSF ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಬಶೀರ್ ಅರಂಬೂರು, ರಿಯಾದ್ ಸಮಿತಿ ಚೇರ್ಮನ್ ಹಸನ್ ಅರ್ಕಾನ, ಜುಬೈಲ್ ಸಮಿತಿ ಕಾರ್ಯದರ್ಶಿ ನವಾಜ್ ಮುಕ್ವೆ, ಹರ್ರರ್ ಸಮಿತಿಯ ಅಬೂಬಕ್ಕರ್ ದಾರಿಮಿ ಅಳಿಕೆ ಮುಂತಾದವರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.