ಕೋಝೀಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) : ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಯುಎಇ ಅಧ್ಯಕ್ಷರ ಧಾರ್ಮಿಕ ವ್ಯವಹಾರಗಳ ಸಲಹೆಗಾರ ಡಾ. ಸಯ್ಯಿದ್ ಅಲಿ ಅಬ್ದುರ್ರಹ್ಮಾನ್ ಹಾಶಿಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಯುರೋಪಿಯನ್ ಮತ್ತು ಏಷ್ಯಾ ದೇಶಗಳ ಹಲವಾರು ಉನ್ನತ ಇಸ್ಲಾಮಿಕ್ ವಿಶ್ವವಿದ್ಯಾಲಯಗಳ ಸಲಹೆಗಾರ ಮತ್ತು ಸ್ಥಾಪಕ ಸದಸ್ಯರಾಗಿರುವ ಹಾಶಿಮಿ, ಮರ್ಕಝ್ ಅನ್ನು ವಿಶ್ವದ ಅನೇಕ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮರ್ಕಝ್ ನೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಸ್ಮರಿಸಿದ ಅವರು, ಶೇಖ್ ಅಬುಬಕರ್ ಅವರ ಉದಾತ್ತ ದೃಷ್ಟಿಕೋನ, ದೃಢಸಂಕಲ್ಪ ಮತ್ತು ಹುರುಪು ಕೇರಳದ ಬೌದ್ಧಿಕ ಚಟುವಟಿಕೆಗಳನ್ನು ಅಂತರರಾಷ್ಟ್ರೀಯ ಗಮನಕ್ಕೆ ತಂದಿತು ಎಂದು ಹೇಳಿದರು. ಶೇಖ್ ಅಬುಬಕರ್ ಅವರ ಬೌದ್ಧಿಕ, ಸೇವೆ ಮತ್ತು ಸ್ವಯಂಪ್ರೇರಿತ ಕೆಲಸದ ಮೂಲಕ ಭಾರತದಲ್ಲಿ ಅಪೇಕ್ಷಣೀಯ ಬದಲಾವಣೆಗಳಾಗಿವೆ ಮತ್ತು ಅವರಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಶೇಖ್ ಅಬುಬಕರ್ ಅವರು ಶೀಘ್ರದಲ್ಲೇ ಅಂತಹ ಚಟುವಟಿಕೆಗಳಿಗೆ ಮರಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಶುಕ್ರವಾರ ಮರ್ಕಝ್ ನೊಲೆಜ್ ಸಿಟಿಯ ಮಸೀದಿಯಲ್ಲಿ ನಡೆಯಲಿರುವ ಜುಮುಹ ನಲ್ಲಿ ಅಲಿ ಅಲ್-ಹಾಶಿಮಿ ಭಾಗವಹಿಸಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.