ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದೇಶದ ಸಂವಿಧಾನದ ಬದಿಗೊತ್ತಿ ದೇಶದ ಮೇಲೆ ಮನುಸ್ಮೃತಿಯನ್ನು ಹೇರುವ ಬಹುದೊಡ್ಡ ಷಡ್ಯಂತರ ನಡೆಯುತ್ತಿದ್ದು ಭಾರತವನ್ನು ಹಿಂದೂ ದೇಶವನ್ನಾಗಿಸುವ ಸಂಘ ಪರಿವಾರದ ಪ್ರಯತ್ನವನ್ನು ವಿಫಲಗೊಳಿಸಿ ದೇಶದ ಪವಿತ್ರ ಸಂವಿಧಾನ ಸಂರಕ್ಷಣೆಗೆ ಮುಸ್ಲಿಂ ಐಕ್ಯ ಅನಿವಾರ್ಯವಾಗಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಾದ್ಯಂತ ಮುಸ್ಲಿಂಲೀಗ್ ಸಂಘಟಿಸುವ ಪ್ರಯತ್ನ ನಡೆಯುತ್ತಿದ್ದು ಇದಕ್ಕೆ ರಾಜ್ಯದ ಮುಸ್ಲಿಮರು ಕೈ ಜೋಡಿಸಬೇಕು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಮ್ ಜೋಕಟ್ಟೆ ಹೇಳಿದರು.
ದ.ಕ ಜಿಲ್ಲಾ ಮುಸ್ಲಿಂಲೀಗ್ ವತಿಯಿಂದ ಜಿಲ್ಲಾದ್ಯಕ್ಷ ಕೆ.ಎಮ್ ಫಯಾಝ್ ರವರ ಅಧ್ಯಕ್ಷತೆಯಲ್ಲಿ ನಗರದ ಸೆಂಟ್ರಲ್ ಕಮಿಟಿ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಹು|| ಅಬ್ಬೂಟಿ ಮಾಸ್ಟರ್ ಶಿವಪುರಂ ರವರು ಕಾರ್ಯಾಗಾರ ನಡೆಸಿಕೊಟ್ರು, ಮುಸ್ಲಿಂ ಲೀಗ್ ರಾಷ್ಟ್ರೀಯ ಸಹ ಕಾರ್ಯದರ್ಶಿ ಸಿ.ಕೆ ಸುಬೈರ್, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಬಿ ಮೂಸ ಚೆರ್ಕಲ , ಮುಸ್ಲಿಂ ಲೀಗ್ ನಾಯಕರುಗಳಾದ ಮುಜೀಬ್ ತಲಂಗೆರೆ, ಎ.ಎಸ್ಇ ಕರೀಮ್ ಕಡಬ, ನ್ಯಾಯವಾದಿ ಎಸ್ ಸುಲೈಮಾನ್, ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಯು ಇಸ್ಮಾಯೀಲ್ ಸ್ವಾಗತಿಸಿ ಕೊನೆಗೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.