ಮಂಗಳೂರು (www.vknews.in) : ಇತ್ತೀಚೆಗೆ ನಗರದಲ್ಲಿ ಸಂಭವಿಸಿದ ಕುಕ್ಕರ್ ಸ್ಫೋಟದ ಘಟನೆಯ ಸುದ್ದಿಯ ನಂತರ ಸರಕಾರದ ಉನ್ನತ ಅಧಿಕಾರಿಗಳು ವಿಧಿ ವಿಜ್ಞಾನ ಇಲಾಖೆ ಯ ಪ್ರಾಥಮಿಕ ವರದಿಗಿಂತ ವೇಗವಾಗಿ ಘಟನೆಗೆ ಸಂಬಂಧಿಸಿ ಜನರಲ್ಲಿ ಆತಂಕ ಮೂಡಿಸುವ ಅದೆಷ್ಟೋ ಹೇಳಿಕೆಗಳನ್ನು ನೀಡಿದ ಒಂದು ವಾರದ ನಂತರ ನಗರದ ಉನ್ನತ ಪೊಲೀಸು ಅಧಿಕಾರಿಗಳು ಆರೋಪಿಯ ತನಿಖೆ ಇನ್ನಷ್ಟೇ ಆಗಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.
ಈ ಮಧ್ಯೆ ಜಿಲ್ಲೆಯ,ರಾಜ್ಯದ ಮಾಧ್ಯಮಗಳು ಈ ಘಟನೆಗೆ ಸಂಬಂಧಿಸಿ ವ್ಯತ್ಯಯ ಮತ್ತು ತರಾವರಿ ಸುದ್ದಿಗಳನ್ನು ಪ್ರಕಟಿಸಿ, ಇಡೀ ಜಿಲ್ಲೆಯ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ವಂಸಕ ಕೃತ್ಯದ ಷಡ್ಯಂತ್ರ ಉದ್ದೇಶಿಸಲಾಗಿತ್ತು, ನಗರದ ಪ್ರಮುಖ ಆರಾಧನಾ ಕೇಂದ್ರವೂ ಕೂಡಾ ಸ್ಫೋಟದ ಉದ್ದೇಶಿತ ಗುರಿಯಾಗಿತ್ತು ಎಂಬಂತೆ,ಅದೆಷ್ಟೋ ಗಾಸಿಪ್ ಗಳನ್ನು ಪ್ರಚಾರ ಪಡಿಸಿ ಕುಕ್ಕರ್ ಬಾಂಬ್ ಗಳನ್ನೂ ಮೀರುವ ಆತಂಕದ ಸ್ಥಿತಿ ನಿರ್ಮಾಣದ ಸುದ್ದಿ ಸ್ಫೋಟ ನಡೆಸಿದ್ದಾರೆ. ಇಂತಹ ಗಾಸಿಪ್ ಗಳ ಮೂಲಗಳನ್ನು ಜನರೇ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿದೆ ಎಂದು ಮಾಜಿ ಮೇಯರ್, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್ ಅವರು’ ಮಾಧ್ಯಮಕ್ಕೆ ತಿಳಿಸಿದ್ದಾರೆ
ಇಂತಹ ಗಾಸಿಪ್ ಸ್ಫೋಟದ ಮೂಲಕ ಜಿಲ್ಲೆಯ ಮತ್ತು ರಾಜ್ಯದ ನೈಜ ಸಮಸ್ಯೆ ಯನ್ನು ಉದ್ದೇಶ ಪೂರ್ವಕವಾಗಿ ಮರೆ ಮಾಚಲು ಪ್ರಯತ್ನಿಸಲಾಗಿದೆ.ಇದರ ಫಲಿತಾಂಶದ ಗತಿಯನ್ನು ಅರಿಯಲು ಕಾಯಬೇಕಿದೆ, ಈ ಪ್ರಯತ್ನದ ಹಿಂದೆ ವೈದಿಕ ಶ್ರಮದ ವಾಸನೆ ಬಡಿಯುತ್ತಿದೆ. ಈ ಬಗ್ಗೆ ತನಿಖೆ ಆಗಲಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.