ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ಶಾಲು ಚಕ್ರದಲ್ಲಿ ಸಿಲುಕಿ ಗೃಹಿಣಿಯೊಬ್ಬರು ಬೈಕ್ ನಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಮೇಲೂರು-ಕುವಕಟ್ಟುಕುನ್ನುವಿನ ಪುಲ್ಲೂಕರನ್ ನಿವಾಸಿ ಸತ್ಯನ್ ಎಂಬವರ ಪತ್ನಿ ರೇಖಾ (46) ಎಂದು ಗುರುತಿಸಲಾಗಿದೆ.
ತಲೆನೋವಿನ ಹಿನ್ನೆಲೆಯಲ್ಲಿ ಚಲಕುಡಿಯ ಸೇಂಟ್ ಜೇಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಹೋದರನೊಂದಿಗೆ ಬೈಕಿನಲ್ಲಿ ಮನೆಗೆ ಮರಳುತ್ತಿದ್ದಾಗ ಉತ್ತರ ಚಲಕುಡಿಯಲ್ಲಿ ಈ ಅಪಘಾತ ಸಂಭವಿಸಿದೆ. ಶಾಲು ಸಿಕ್ಕಿಹಾಕಿಕೊಂಡಾಗ, ಅವರು ಕೆಳಗೆ ಬಿದ್ದಿದ್ದಾರೆ.
ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದ್ದ ರೇಖಾರನ್ನು ತಕ್ಷಣವೇ ಸೇಂಟ್ ಜೇಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.