(www.vknews.in) : ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಕ್ರೀಡಾ ಕೂಟವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎನ್ ಐ ಎಸ್ ಕೋಚ್, ಟೆಕ್ನಿಕಲ್ ಕಮಿಟಿ ಆಫ್ ವಾಲಿಬಾಲ್ ಇಂಡಿಯಾ ಪಿ.ವಿ.ನಾರಾಯಣ, ಸಂಸ್ಥೆಯ ಕಾರ್ಯನಿರ್ವಾಹಕ ಶೈಕ್ಷಣಿಕ ನಿರ್ದೇಶಕರಾದ ರಫೀಕ್ ಮಾಸ್ಟರ್, ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷೆ ಶೆಫೀನಾ, ಸಲಹಾ ಸಮಿತಿಯ ಸದಸ್ಯರಾದ ಕೆ.ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಉಪಸ್ಥಿತರಿದ್ದರು.
ಮೊದಲಿಗೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ನಂತರ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಸ್ವೀಕರಿಸಲಾಯಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರು ಉಯ್ಯುವ ಮುಖಾಂತರ ಚಾಲನೆ ನೀಡಲಾಯಿತು ಹಾಗೂ ಪಾರಿವಾಳವನ್ನು ಹಾರಿಸುವುದರ ಮೂಲಕ ಸ್ಪೋರ್ಟ್ಸ್ ಮೀಟ್ ಅನ್ನು ಘೋಷಿಸಲಾಯಿತು. ತದನಂತರ ಶಿಕ್ಷಕಿಯಾದ ಶಫ್ರೀನಾ ಪಿ.ವಿ. ನಾರಾಯಣ ಅವರ ಕಿರು ಪರಿಚಯವನ್ನು ವಾಚಿಸಿದರು ಹಾಗೂ ಗೌರವಾನ್ವಿತ ಅತಿಥಿಗಳಾದ ಪಿ.ವಿ. ನಾರಾಯಣ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಂತರ ರಫೀಕ್ ಮಾಸ್ಟರ್ ರವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು. ಬಂದಂತಹ ಗೌರವಾನ್ವಿತ ಅತಿಥಿಗೆ ಶಾಲೆಯ ಆಡಳಿತಾಧಿಕಾರಿ ಜಾಫರ್ ಸಾಧಿಕ್ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಅಥ್ಲೆಟಿಕ್ಸ್ ಅನ್ನು ಆಯೋಜಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಸಂಸ್ಥೆಯ ಶಿಕ್ಷಕಿಯರಾದ ಶಿಫಾನತ್ ಸ್ವಾಗತಿಸಿ, ಶ್ವೇತಾ ಮಾರಿಯಾ ಡಿಸೋಜ ವಂದಿಸಿದರು ಹಾಗೂ ಶಿಕ್ಷಕಿ ಮನೋದ ಕಾರ್ಯಕ್ರಮವನ್ನು ನಿರೂಪಿಸಿದರು . ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.