ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಕಮ್ಮಾಡಿ ಇಸ್ಲಾಮಿಕ್ ಸೆಂಟರ್ ಸಂಪ್ಯ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಝಹ್ರಬತೂಲ್ ವುಮೆನ್ಸ್ ಕಾಲೇಜು ಇಲ್ಲಿ ಕಾಲೇಜು ಡೇ ಕಾರ್ಯಕ್ರಮ ಪ್ರಯುಕ್ತ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮ ನಾಳೆ (ಡಿ.1ರಂದು) ಬೆಳಿಗ್ಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಡಾ.ಅಶ್ರಫ್ ಕಮ್ಮಾಡಿ ಅಧ್ಯಕ್ಷತೆ ವಹಿಸಲಿದ್ದು, ಅಬೂಬಕ್ಕರ್ ಸಿದ್ದೀಕ್ ಜಲಾಲಿ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ಆತೂರು ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಅಡ್ವಕೇಟ್ ಮೂಸಕುಞಿ ಪೈಂಬಚಾಲ್, ಅಬ್ದುಲ್ ರಝಾಕ್ ಸಂಪ್ಯ, ಅಬ್ದುಲ್ ರಝಾಕ್ ಸಂಟ್ಯಾರ್, ಪ್ರೊ. ಎ.ಕೆ ಅನೀಶ್ ಶ್ರೀನಿವಾಸ್ ಯುನಿವರ್ಸಿಟಿ, ಶರೀಫ್ ಪಣೆಮಜಲ್, ಕರೀಂ ಸವಣೂರು ಭಾಗವಹಿಸಲಿದ್ದಾರೆ.
ಬಳಿಕ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಡಾ. ಹಬೀನ ಶೈರ M.B.B.S ,M.D, FIDM(UK) (ಡಯಾಕೇರ್, ಸ್ಪೇಷಲಿಟಿ ಕ್ಲಿನಿಕ್ ಪುತ್ತೂರು) ಭಾಗವಹಿಸಲಿದ್ದಾರೆ. ಶಾಹಿದ M.com PG ಡಿಸಿ, ಸೌದ ಅಝ್ಝಾಹಿರ, ಆಯಿಷತ್ ಮರ್ವ MA, ಸೌದ ಅಝ್ಝಕಿಯ್ಯ, ಫರ್ಝಾನ ಅಝ್ಝಕಿಯ್ಯ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.