(www.vknews.in) ದ. ಕ. ಜಿಲ್ಲೆಯು ಒಂದು ಕಾಲದಲ್ಲಿ ವಿಶ್ವ ಭೂಪಟದಲ್ಲಿ ಬುದ್ದಿವಂತರ ಜಿಲ್ಲೆಯ ವಿದ್ಯಾ ಕೇಂದ್ರವಾಗಿ ಗುರುತಿಸಲ್ಪಟ್ಟಿತ್ತು. ಯಾರ ಕೆಟ್ಕಟ ಣ್ಣು ಬಿತ್ತೋ ಏನೋ ಹಾಗೂ ರಾಜಕಾರಣಿಗಳ ಸ್ವಾರ್ಥದಿಂದ ಕೋಮು ಗಲಭೆಯ ಬೀಡಾಯಿತ್ತಲ್ಲದೇ ಮುಂದುವರಿದು ಜಿಲ್ಲೆಯು ಅವ್ಯಾಹಿತವಾಗಿ ನೆಲದ ಕಾನೂನಿಗೆ ವಿರುದ್ಧವಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವವರ, ಧಾರ್ಮಿಕ ಪಂಡಿತರಿಗೆ ಸವಾಲಾಗಿ ಮಾದಕ ವ್ಯಸನಿಗಳಿಗೆ ಒಂದು ಸುಸಜ್ಜಿತವಾದ ತಾಣವಾಗಿ ಮಾರ್ಪಟ್ಟಿತು.
ದಿನಂಪ್ರತಿ ನಡೆಯುತ್ತಿರುವ ಪ್ರತಿಯೊಂದು ಅಸ್ವಾಭಾವಿಕ ಪ್ರಕರಣಗಳು, ಕೊಲೆಗಳು, ಹಲ್ಲೆಗಳು, ಅತ್ಯಾಚಾರಗಳು ಹಾಗೂ ಇತ್ಯಾದಿ ಅನಾಗರಿಕ ವರ್ತನೆಗಳು ಸಮಾಜದಲ್ಲಿ ನಡೆಯುತ್ತಿರುವುದು ಸ್ವಾಭಾವಿಕವಾಗಿದೆ. ಇದನ್ನು ಕಂಡು ಕಾಣದಂತೆ ವರ್ತಿಸುತ್ತಿರುವ ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಧಾರ್ಮಿಕ ಪಂಡಿತರು, ಸಮುದಾಯದ ನಾಯಕರು, ಸಾಮಾಜಿಕ ಕಾರ್ಯಕರ್ತರು, ಸಂವಿಧಾನದ ರಕ್ಷಕರು, ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಮುದಾಯದ ಸಂಘಟನೆಗಳ ಮೇಲೆ ಒಂದು ರೀತಿಯ ಸಂಶಯ ಹಾಗೂ ವಾಕರಿಕೆ ಬರುವಂತಾಗಿದೆ. ಈಗಲೇ ಸಮಾಜದ ಮೂಲೆ, ಮೂಲೆಗೂ ಯಾವುದೇ ಜಾತಿ, ಕೋಮು, ಹೆಣ್ಣು, ಗಂಡು ಭೇಧ ಭಾವವಿಲ್ಲದೇ ವ್ಯಾಪಕವಾಗಿ ಪಸರಿಸಿರುವ ಈ ವ್ಯಾಧಿಯನ್ನು ಈಗಲೇ ಬುಡ ಸಮೇತ ಕಿತ್ತು ಹಾಕಿ ಅದಕ್ಕೆ ನೇರವಾಗಿ, ಪರೋಕ್ಷವಾಗಿ ಬಲಿಯಾದವರನ್ನು ಪತ್ತೆ ಹಚ್ಚಿ ಅವರಿಗೆ ಸರಿಯಾದ ರೀತಿಯಲ್ಲಿ ಮಾನಸಿಕವಾಗಿ, ದೈಹಿಕವಾಗಿ ಶುಶ್ರೂಷೆ ನಡೆಸಿ ಮತ್ತು ತಮ್ಮ ಸ್ವಾರ್ಥಕ್ಗಾಗಿ ನೇರವಾಗಿ, ಪರೋಕ್ಷವಾಗಿ ಹಾಗೂ ವ್ಯವಹಾರಿಕ ಲಾಭಕ್ಕಾಗಿ ಇಂತಹ ಕ್ರತ್ಯಗಳಿಗೆ ಪ್ರೇರಣೆ ನೀಡುವವರು, ಸಹಕಾರ ನೀಡುವವರನ್ನು ಕಂಡು ಹಿಡಿದು ಅವರಿಗೆ ಈ ನೆಲದ ಕಾನೂನಿಗನುಗುಣವಾಗಿ ಶಿಕ್ಷಿಸುವುದ್ದಲ್ಲದೇ ಅವರನ್ನು ಆಯಾಯ ಸಮುದಾಯದ ನಾಯಕರು, ಆಯಾಯ ಸಮುದಾಯದ ಧಾರ್ಮಿಕ ಪಂಡಿತರು ಬಲವಾಗಿ ಎಚ್ಚರಿಸುವ ರೀತಿಯಲ್ಲಿ ಅವರು, ಅವರ ಕುಟುಂಬದವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಲು ಶ್ರಮಿಸಬೇಕು, ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಗ್ರಾಮ, ಗ್ರಾಮಗಳಲ್ಲಿ ಮಾದಕವ್ಯಸನಿ ಕೇಂದ್ರ ಸ್ಥಾಪಿಸಲ್ಪಡಬೇಕಾಗಿ ಬರುವುದ್ದಲ್ಲದೇ ಸಮಾಜದಲ್ಲಿ ಆಶಾಂತಿ, ಅನಾಗರೀಕತೆ ಅವ್ಯಾಹತವಾಗಿ ಹರಡಿ ನಾಗರೀಕರಿಗೆ ಜೀವಿಸಲು ಕಷ್ಟಕರವಾಗಬಹುದು ಎಂದು ಎಚ್ಚರಿಸಲು ಈ ಸಂಧರ್ಭದಲ್ಲಿ ನಾನು ಇಷ್ಟಪಡುವೇನು.
ಅಶ್ಫಾಕ್ ಎ. ಕಾರ್ನಾಡ್, ಸ್ಥಾಪಕಾಧ್ಯಕ್ಷರು, ಕಾರ್ನಾಡ್ ಫೌಂಡೇಶನ್ (ನೊಂ) ಮುಲ್ಕಿ. ಮಂಗಳೂರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.