(ವಿಶ್ವ ಕನ್ನಡಿಗ ನ್ಯೂಸ್) : ಡಿಸೆಂಬರ್ ಐದು ಸೋಮವಾರ ನಾನು ಕುಂಬ್ರ ಮರ್ಕಝುಲ್ ಹುದಾ ಕಾಲೇಜಿಗೆ ಭೇಟಿ ನೀಡಿದೆ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ವ್ಯವಸ್ಥಾಪಕ ರಶೀದ್ ರವರನ್ನು ಕಂಡು ಮಾತನಾಡಿದೆ. ಸಂಸ್ಥೆಯ ಇತ್ತೀಚಿನ ಬೆಳವಣಿಗೆ ಕಂಡು ನಾನು ರೋಮಾಂಚಿತನಾದೆ. ಅಲ್ಲಿ ಅಧ್ಬುತ ಬದಲಾವಣೆಗಳನ್ನು ನಾನು ಕಂಡೆ. ಅಂದು ನಾನು ನೋಡಿದ ಆ ಮರ್ಕಝ್ ಗೂ ಇಂದಿನ ಮರ್ಕಝ್ ಗೂ ಅಜಗಜಾಂತರ ವ್ಯತ್ಯಾಸ ಕಂಡು ಹೃದಯ ತುಂಬಿ ಬಂತು.
ಸಂಸ್ಥೆಯನ್ನು ಚೆನ್ನಾಗಿ ಬೆಳೆಸಿದರೆ ಅದು ಎಲ್ಲಿಗೆ ತಲುಪುವುದೆಂಬುವುದನ್ನು ಮರ್ಕಝ್ ಕಂಡು ನಾನು ಮನಸಾರೆ ಅಂದುಕೊಂಡೆ. ಬಹಳಷ್ಟು ಬದಲಾಗಿದೆ. ಎಂಟ್ರಿ ಆಗುವಾಗಲೇ ಸುಂದರವಾದ ಸ್ವಾಗತ ಕಮಾನು ಆಕರ್ಷಕವಾಗಿದೆ. ಒಳ ಬಂದಾಗ ಚಂದದ ಸುಸಜ್ಜಿತ ಆಡಳಿತ ಕಚೇರಿ ನೋಡಿ ವಿಸ್ಮಯ ಗೊಂಡೆ. ಅದರೊಳಗೆ ಅಚ್ಚುಕಟ್ಟಾದ ಕಚೇರಿಗಳು, ಸಿಬ್ಬಂದಿಗಳ ಕಾರ್ಯಾಚರಣೆ ಕಂಡು ಧನ್ಯನಾದೆ. ಇಲ್ಲಿಗೆ ನಮ್ಮ ಶ್ರಮ ಎಷ್ಟು ಇದ್ದರೂ ಸಾಲದು ಎಂದೇ ಮನಸ್ಸು ಹೇಳುತ್ತಿತ್ತು. ಓರ್ವ ಮಹಿಳೆಯನ್ನು ಸರ್ವತೋಮುಖ ಅಭಿವ್ರದ್ದಿಯ ಸಮಾಜಕ್ಕೆ, ಕುಟುಂಬಕ್ಕೆ ಸಮರ್ಪಿಸಲು ಈ ಸಂಸ್ಥೆ ಅತೀ ಅಗತ್ಯ.
ಅನಿವಾಸಿ ಮಿತ್ರರು ಊರಿಗೆ ಬಂದಾಗ ಕುಟುಂಬ ಸಮೇತ ಬಂದು ಸಂಸ್ಥೆಯನ್ನು ಸಂದರ್ಶಿಸಬೇಕು. ಸಾದ್ಯವಾದಷ್ಟು ಸಹಾಯ ಮಾಡಬೇಕು. ಸಂಸ್ಥೆ ಇಷ್ಟು ಸಂದರವಾಗಿ ಸೆಟಪ್ ಆಗಲು ಆಡಳಿತ ಸಮಿತಿ ಹಾಗೂ ವಿದೇಶ ಗಲ್ಫ್ ನ ಘಟಕಗಳ ಅವಿರತ ಪರಿಶ್ರಮ ಮರೆಯಲು ಅಸಾಧ್ಯ. ಈ ಹಿಂದೆ ಇದ್ದ ಹಾಗೂ ಈಗಿರುವ ಸಮಿತಿಯ ಪರಿಶ್ರಮ ಹಾಗೂ ಅನಿವಾಸಿ ಸನ್ಮಿತ್ರರ ಕೊಡುಗೆ ಕಂಡು ನಾನು ಸಂತುಷ್ಠನಾದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಲ್ಲಾಹನು ಅರ್ಹ ಫ್ರತಿಫಲ ನೀಡಲಿ.. ಇದೇ ರೀತಿಯ ಬೆಳವಣಿಗೆ ಕಂಡಲ್ಲಿ ಸಂಸ್ಥೆ ಮುಂದೆ ಅದ್ಬುತ ಕಾಣಿಕೆಗಳನ್ನು ಸಮಾಜಕ್ಕೆ ನೀಡವುದರಲ್ಲಿ ಸಂಶಯವಿಲ್ಲ…
✍ ಎಆರ್ ಬುಸ್ತಾನಿ ವಾಣಿನಗರ, ಯು.ಎ.ಇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.