(www.vknews.in) : ಮಂಗಳೂರಿನ ಕಂಕನಾಡಿ ಸುಲ್ತಾನ್ ಗೋಲ್ಡ್ ಗೆ ಇಂದು ಮಂಗಳೂರಿನಲ್ಲಿ ಬಜರಂಗ ದಳ ಪುಂಡರು, ಮುಸ್ಲಿಮ್ ಸೇಲ್ಸ್ ಪ್ರತಿನಿಧಿ ಯುವಕನನ್ನು, ಅದೇ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿರುವ ಯುವತಿ ಯೊಂದಿಗೆ ಸಂಭಂದ ಕಲ್ಪಿಸಿ, ಸುಲ್ತಾನ್ ಗೋಲ್ಡ್ ಸ್ವರ್ಣಾಭರಣ ಮಳಿಗೆಗೆ ನುಗ್ಗಿ ತೀವ್ರ ಹಲ್ಲೆ ನಡೆಸಿದ್ದು ಖಂಡನೀಯ, ಬಜರಂಗ ಪುಂಡರ ಈ ಕೃತ್ಯ ಪೊಲೀಸು ಅಧಿಕಾರಿಗಳ ಸಮಕ್ಷಮವೇ ನಡೆದಿದ್ದು ವಿಪರ್ಯಾಸ. ಕೃತ್ಯದ ಬಗ್ಗೆ ಜ್ಯುವೆಲ್ಲರ್ಸ್ ಅಸೋಸಿಯೇಶನ್ ಮತ್ತು ಕರ್ನಾಟಕ ಗೋಲ್ಡ್ ನಿಯಂತ್ರಣ ಬೋರ್ಡ್ ಮಧ್ಯ ಪ್ರವೇಶಿಸಿ ಕ್ರಮಕ್ಕಾಗಿ ಒತ್ತಾಯಿಸಬೇಕು.
ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿ ಮುಸ್ಲಿಮ್ ಒಡೆತನದ ಸ್ವರ್ಣ ಮಳಿಗೆಗಳನ್ನು ನಿಷೇಧಿಸಿ, ಹಿಂದೂಗಳು ಯಾರೂ ಕೂಡ ವ್ಯಾಪಾರ ನಡೆಸ ಕೂಡದು ಎಂದು ಕರೆ ನೀಡಿರುವುದರ ಘಟನೆಯ ಮುಂದುವರಿಕೆ ಭಾಗ ಮಂಗಳೂರಿನ ಸ್ವರ್ಣ ಮಳಿಗೆಯ ಯುವಕನ ಮೇಲಿನ ಹಲ್ಲೆ ಎಂದು ತಿಳಿಯಬೇಕಾಗುತ್ತದೆ. ಜ್ಯುವೆಲ್ಲರ್ಸ್ ಅಸೋಸಿಯೇಶನ್ ಈ ಬಗ್ಗೆ ಕ್ರಮಕ್ಕೆ ಒತ್ತಾಯ ಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದ.ಕ.ಜಿಲ್ಲೆಯ ಪ್ರತೀ ಸ್ವರ್ಣ ಮಳಿಗೆಗಳನ್ನು ಗ್ರಾಹಕರು ಬಹಿಷ್ಕರಿಸುವ ಬಗ್ಗೆ ಆಂದೋಲನ ಮತ್ತು ಜಾಗೃತಿ ನಡೆಸಲಾಗುವುದು.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.