ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸವಿಶ್ಕಾರ್ “ಅನ್ವೇಶನ್ 2022” ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 3 ಡಿಸೆಂಬರ್ 2022 ರಂದು ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಮಂಗಳೂರಿನಲ್ಲಿ ನೆರವೇರಿತು.
ಶ್ರೀ ಅಶ್ವತ್ ಹೆಗಡೆ, ಸಿಇಓ ಎನ್ವಿಗ್ರೀನ್ ಬಯೋಟೆಕ್ ಲಿಮಿಟೆಡ್ ಇವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದರು. ಡಾ. ಶಾಂತರಾಮ ರೈ, ಪ್ರಾಂಶುಪಾಲರು, ಹೇಗೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಪ್ರಾಸ್ತಾವಿಕ ನುಡಿಯನ್ನು ಧರಣೀಶ್ ಹೆಗಡೆ, ರಾಷ್ಟ್ರೀಯ ಸಹ ಸಂಚಾಲಕರು ಸವಿಷ್ಕಾರ್ ನುಡಿದರು. ಶ್ರೀಪಾದ ತಂತ್ರಿ ಪೊಳಲಿ ಇವರು ವಂದಿಸಿದರು.
ಎರಡು ದಿನದ ಕಾರ್ಯಕ್ರಮದಲ್ಲಿ ಒಟ್ಟು ಐದು ಅವಧಿಗಳು ನಡೆಸಲಾಯಿತು. ಈ 5 ಅವಧಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಡಾ. ಜಗದೀಶ್ ಶೇಖರ್ ನಾಯಕ್,ಡಾ. ದಶರತ್ರಾಜ್ ಶೆಟ್ಟಿ, ಡಾ. ಅನಂತಪದ್ಮನಾಭ ಆಚಾರ್, ಶ್ರೀ ಮೋಹನ್ ಶಾಂತಿಗ್ರಾಮ ಆಗಮಿಸಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 12 ಇಂಜಿನಿಯರಿಂಗ್ ಕಾಲೇಜಿನ ಒಟ್ಟು 320 ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮದ ಸಮಾರೋಪ ಸಮಾರಂಭವು ಡಿಸೆಂಬರ್ 4 ಕ್ಕೆ ನಡೆಯಿತು. ಧರಣೀಶ್ ಹೆಗಡೆಯವರು ಸ್ವಾಗತ ಭಾಷಣವನ್ನು ಮಾಡಿ ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದ ವರದಿಯನ್ನು ಸಲ್ಲಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೇಶವ ಬಂಗೇರ ಅವರು ಆಗಮಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಆಂತನಿ ಪಿ.ಜೆ, ಉಪ ಪ್ರಾಂಶುಪಾಲರು, ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವಹಿಸಿದರು, ನಿಶಾನ್ ಆಳ್ವಾ ಕಾರ್ಯಕ್ರಮವನ್ನು ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.