(www.vknews.in) ಅಂಗವಿಕಲರ ಮಸೂದೆ 1995ರಿಂದ ಜಾರಿಯಾಗಿದ್ದು ಅದರೆ ಭಡ್ತಿ ಮೀಸಲಾತಿ ಅನುಷ್ಟಾನಕ್ಕೆ ಸುಪ್ರೀಮ್ ಕೋರ್ಟಿನ ಆದೇಶವಿದ್ದರೂ ಕೇಂದ್ರ ಸರಕಾರದ ವಿವಿಧ ಇಲಾಖೆಗಳು ಭಡ್ತಿ ಮೀಸಲಾತಿಯನ್ನು 2017ರಿಂದ ಜಾರಿಗೆ ತರುವ ಹುನ್ನಾರ ನಡೆಸುತ್ತಿದ್ದಾರೆ ಇಂತಹ ನಿರ್ಧಾರವನ್ನು ಖಂಡಿಸಬೇಕು ಎಂಬ ಒಕ್ಕೊರಲ ಕೂಗು ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಶಿವಮೊಗ್ಗ ಇವರು ಅಂತರ್ಜಾಲ ತಾಣದಲ್ಲಿ ಏರ್ಪಡಿಸಿದ ಸಭೆಯಲ್ಲಿ ಮೊಳಗಿತು.
ಸುಮಾರು 60ಕ್ಕೂ ಮೀರಿದ ವಿವಿಧ ರಾಜ್ಯಗಳ ಅಂಗವಿಕಲರು ಭಾಗವಹಿಸಿದ ಸಭೆಯಲ್ಲಿ ಹರ್ಯಾಣ ರಾಜ್ಯದ ಅಂಗವಿಕಲರ ಆಯುಕ್ತರಾದ ಶ್ರೀ ರಾಜಕುಮಾರ ಮಕ್ಕದ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೆರೆದಿದ್ದ ಅಂಗವಿಕಲರ ಸಮಸ್ಯೆಗಳನ್ನು ಅಳಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಸಂಸ್ಥೆ ಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಶಿವಮೊಗ್ಗ ಇವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.