(www.vknews.in) ತುಂಬೆಯಲ್ಲಿ ವಾಸವಾಗಿರುವ ಬಡ ಮಹಿಳೆಯೊಬ್ಬರು ತೀವ್ರ ಅಸೌಖ್ಯದ ಕಾರಣ ಶಸ್ತ್ರಕ್ರಿಯೆ ಅಗತ್ಯವಿತ್ತು.
ಈ ಬಗ್ಗೆ ಮಾಹಿತಿ ಪಡೆದ ನಾನು ಆ ಬಡ ಮಹಿಳೆಯನ್ನು ದೇರಳಕಟ್ಟೆ ಯೇನಪೋಯ ಆಸ್ಪತ್ರೆಗೆ ಸೇರಿಸಿದ್ದೇನೆ. ಇದೀಗ ಆ ಮಹಿಳೆ ಪೂರ್ಣ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಶಕ್ತ ಮಹಿಳೆಯೊಬ್ಬರನ್ನು ರೋಗದಿಂದ ಗುಣಮುಖ ರಾಗುವಂತೆ ಮಾಡಿದ ಬಗ್ಗೆ ಮನಸ್ಸಿಗೆ ತುಂಬಾ ಸಂತೃಪ್ತಿಯಿದೆ. ಸಮಾಜದ ಬಡವರ,ಅಶಕ್ತರ ಕಷ್ಟ ಕಾರ್ಪಣ್ಯಗಳಲ್ಲಿ ನಾವು ಭಾಗಿಯಾಗುವಾಗ ಸೃಷ್ಟಿಕರ್ತ ಅಲ್ಲಾಹು ವಿನ ವಿಶೇಷ ಅನುಗ್ರಹ ನಮ್ಮ ಮೇಲಿರುತ್ತದೆ. ಈ ಮಹಿಳೆಯ ವಿಷಯದಲ್ಲಿ ಸಹಕರಿಸಿದ ಸರ್ವ ಉದಾರ ಮನಸ್ಸಿನವರಿಗೂ ಅಲ್ಲಾಹು ದೀರ್ಘಾಯುಷ್ಯ, ಆಯುರಾರೋಗ್ಯ ಕರುಣಿಸಲಿ. ನನಗೆ ಇನ್ನಷ್ಟು ಸಾಮಾಜಿಕ ಕಷ್ಟಸುಖಗಳಲ್ಲಿ ಭಾಗಿಯಾಗುವ ಸೌಭಾಗ್ಯ ಒದಗಿ ಬರಲಿ ಎಂದು ಮನದುಂಬಿ ಪ್ರಾರ್ಥಿಸುತ್ತಿದ್ದೇನೆ.
ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಗೌರವ ಡಾಕ್ಟರೇಟ್ ಪುರಸ್ಕೃತರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.