ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಪವಿತ್ರ ಉಮ್ರಾ ಯಾತ್ರೆ ಮುಗಿಸಿ ಊರಿಗೆ ಹಿಂದಿರುಗುವ ವೇಳೆ ಕನ್ಯಾನ ಸಂಕದ ಬಳಿ ಹನೀಫ್ ಅವರ ತಾಯಿ ನೆಬೀಸ ಎಂಬವರು ಮೃತಪಟ್ಟ ಘಟನೆ ಕಳೆದ ಗುರುವಾರ ನಡೆದಿದೆ.
ಮದೀನದಿಂದ ಊರಿಗೆ ಹಿಂತಿರುಗುವ ವೇಳೆ ಮುಂಬೈಗೆ ತೆರಳುವ ವಿಮಾನವು ನಬೀಸ ಅವರ ಅನಾರೋಗ್ಯದ ಕಾರಣ ವಿಮಾನವನ್ನು ಮಸ್ಕತ್ ನಲ್ಲಿ ತುರ್ತಾಗಿ ಲ್ಯಾಂಡ್ ಮಾಡಲಾಯಿತು.
ತದನಂತರ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅವರು ಇಹಲೋಕ ತ್ಯಜಿಸಿದರು – ಇನ್ನಾ ಲಿಲ್ಲಾಃ
ಆಸ್ಪತ್ರೆಯಲ್ಲಿ ಬೇಕಾದ ಎಲ್ಲಾ ಕಾರ್ಯಗಳ ನೇತೃತ್ವವನ್ನು KCF ಒಮಾನಿನ ಸಾಂತ್ವನ ವಿಭಾಗವು ವಹಿಸಲಾಯಿತು. ನಂತರ ಅವರನ್ನು ಊರಿಗೆ ಕಳಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಸರಿಮಾಡಿಸಿ ಕಳೆದ ದಿನ KCF ಒಮಾನಿನ ನಾಯಕರುಗಳು ಅವರ ಮೃತದೇಹವನ್ನು ಊರಿಗೆ ಕಳುಹಿಸಲಾಯಿತು.
ಅವರ ಪಾರತ್ರಿಕ ವಿಜಯಕ್ಕಾಗಿ ಪ್ರತಿಯೊಬ್ಬರೂ ಪ್ರಾರ್ಥಿಸಬೇಕಾಗಿಯೂ, ಅವರ ಹೆಸರಿನಲ್ಲಿ ತಹ್ಲೀಲ್ ಹಾಗೂ ಖುರ್ ಆನ್ ಓದಿ ಹದಿಯ ಮಾಡಬೇಕಾಗಿಯೂ ಆ ತಾಯಿಯ ಮೇಲೆ ಮಯ್ಯತ್ತ್ ನಮಾಝಿ ನಿರ್ವಹಿಸಬೇಕಾಗಿಯೂ KCF ಒಮಾನ್ ತನ್ನ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.