ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (DKSC) ವತಿಯಿಂದ ಜನಾಬ್ ಮುಹಮ್ಮದ್ ರಫೀಕ್ ಪಡುಬಿದ್ರೆ ಇವರಿಗೆ ಬೀಳ್ಕೊಡುಗೆ ಸಮಾರಂಭವು 28-01-2023 ರಂದು ಅಲ್ ಫೈಲಾಕ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು.
DKSC ಒಮಾನ್ ರಾಷ್ಟ್ರೀಯಾಧ್ಯಕ್ಷರಾದ ಜನಾಬ್ ಹಾಜಿ ಮೋನಬ್ಪ ಅಬ್ದುರ್ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಬೈದುಲ್ಲಾ ಸಖಾಫಿ ಅವರು ದುಆಗೆ ನೇತೃತ್ವ ನೀಡಿದರು. ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರಬಿಂದು ಪ್ರವಾಸಿ ಜೀವನಕ್ಕೆ ವಿದಾಯ ಹೇಳುತ್ತಿರುವ ಜನಾಬ್ ಮುಹಮ್ಮದ್ ರಫೀಕ್ ಅವರನ್ನು ಅವರು ಮಾಡಿದ ಸೇವೆ ಹಾಗೂ ಕಾರ್ಯಚಟುವಟಿಕೆಗಳನ್ನು ಗುರಿತಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ನಂತರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಸವಿಸ್ಥಾರವಾಗಿ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ 2023 ನೇ ಸಾಲಿನ ಕ್ಯಾಲೆಂಡರನ್ನು ಕೂಡಾ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಇಬ್ರಾಹೀಂ ಹಾಜಿ ಅತ್ರಾಡಿ, ಅಲ್ತಾಫ್ ಬೋಳಾರ್, ಶುಕೂರ್ ಖಾಝಿ, ನೂರುಲ್ಲ ಪಡುಬಿದ್ರಿ, ಆರಿಫ್ ಕೋಡಿ. ಶಬೀರ್ ಕಾಟಿಪಳ್ಳ, ಯೂಸುಫ್ ಮುಕ್ಕ, ಮೊಹಿಯದ್ದೀನ್ ಪಡುಬಿದ್ರಿ ಹಾಗೂ ಡಿಕೆಎಸ್ಸಿ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಲಂದರ್ ಬಾವ ಉಸ್ತಾದರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.