ವಿಟ್ಲ(ವಿಶ್ವಕನ್ನಡಿಗ ನ್ಯೂಸ್): ಜಗತ್ತಿನಲ್ಲಿ ಹಲವಾರು ಸಿದ್ಧಾಂತಗಳಿದ್ದು ಎಲ್ಲವೂ ವೈವಿಧ್ಯಮಯವಾಗಿವೆ. ಇಡೀ ಮನುಕುಲವನ್ನು ಒಂದೇ ಧರ್ಮ, ಪಕ್ಷ,ಸಂಘಟನೆಯಲ್ಲಿ ನೆಲಗೊಳಿಸಲು ಸಾಧ್ಯವಿಲ್ಲ. ಪ್ರಪಂಚದ ಸುಗಮ ಪ್ರಯಾಣಕ್ಕೆ ವಿಭಿನ್ನತೆ ಅಗತ್ಯ. ಸತ್ಯ ಮತ್ತು ಅಗತ್ಯಗಳನ್ನು ವಿವೇಚನೆ ಮಾಡಿ ಸತ್ಯದಲ್ಲಿ ನೆಲೆ ನಿಂತರೆ ಮಾನವ ಜೀವನ ಸಾರ್ಥಕ ಎಂದು ಖ್ಯಾತ ಚಿಂತಕರಾದ ಎಸ್.ಬಿ.ಮುಹಮ್ಮದ್ ದಾರಿಮಿ ಉಪ್ಪಿನಂಗಡಿ ಹೇಳಿದ್ದಾರೆ.
ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ವತಿಯಿಂದ ನಡೆದ ವಿಚಾರಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿ ಅವರು ಮಾತನಾಡುತ್ತಿದ್ದರು.
ಜಾಗತಿಕ ಇತಿಹಾಸದಲ್ಲಿ ಹಲವಾರು ಯುದ್ಧಗಳು ನಡೆದಿವೆ. ಕೆಡುಕುಗಳ ವಿರುದ್ಧ ನಡೆದ ಈ ಯುದ್ಧಗಳು ನಾಗರಿಕತೆ ಬೆಳೆದಂತೆ ಕಡಿಮೆಯಾಗುತ್ತಾ ಬಂದಿದೆ. ಆದರೂ ಅಧಿಕಾರ ವ್ಯಾಪ್ತಿ, ಸ್ವಾರ್ಥ ಹಿತಾಸಕ್ತಿಗಾಗಿ ವರ್ತಮಾನ ಸನ್ನಿವೇಶದಲ್ಲಿ ವಿವಿಧ ರಾಷ್ಟ್ರಗಳ ಮಧ್ಯೆ ಯುದ್ಧ ನಡೆಯುತ್ತಿದ್ದು ಇವುಗಳು ಮಾನವೀಯ ಮೌಲ್ಯಗಳನ್ನು ಧ್ವಂಸ ಮಾಡುತ್ತಿವೆ.
ಧರ್ಮವೆಂದರೆ ಕೆಡುಕಿನ ವಿರುದ್ಧದ ಅಸ್ತ್ರವಾಗಿದ್ದು ಮೂಲತಃ ಎಲ್ಲರೂ ಒಂದೇ ತತ್ವದಿಂದ ಬಂದವರು. ಈ ವೈವಿಧ್ಯತೆ ದ್ವೇಷ ಹರಡುವ ಬದಲು ಪ್ರೀತಿಯನ್ನು ಹರಡಿದರೆ ಶಾಂತಿ, ಭಾವೈಕ್ಯತೆ ಸಾಧ್ಯವಿದೆ. ಒಬ್ಬ ಮನುಷ್ಯ ನಿಂದ ಇನ್ನೊಬ್ಬ ಮನುಷ್ಯನಿಗೆ ಯಾವುದೇ ತೊಂದರೆಯಾಗಬಾರದು. ಮನುಷ್ಯರು ಪರಸ್ಪರ ಅರಿತು ಬಾಳಿದರೆ ಈ ಜಗತ್ತಿನಲ್ಲಿ ಯಾವುದೇ ಸಮಸ್ಯೆ ಉಂಟಾಗದು. ಹಿಂದೂ ಮುಸ್ಲಿಂ ಕ್ರೈಸ್ತ ಒಗ್ಗಟ್ಟು ಮಾತ್ರ ನೆಮ್ಮದಿಯ ಸಮಾಜವನ್ನು ನಿರ್ಮಿಸಬಲ್ಲದು ಎಂದು ಅವರು ಅಭಿಪ್ರಾಯ ಪಟ್ಟರು.
ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಅಧ್ಯಕ್ಷ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಕೆ.ಎ.ಅಬ್ದುಲ್ ಅಝೀಝ್ ಪುಣಚ ಸಮಾರಂಭವನ್ನು ಉದ್ಘಾಟಿಸಿದರು.
ಎ.ಇಬ್ರಾಹಿಂ ಖಲೀಲ್ ಫೈಝಿ ಪುಣಚ,ಡಿ.ಐ.ಅಬೂಬಕರ್ ಕೈರಂಗಳ,ಮಂಜುನಾಥ್ ಮಲೆನಾಡು,ಮುಹಮ್ಮದ್ ಹಾಜಿ ಪರಪ್ಪು,ಡಾ! ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ,ಎ.ಬಿ.ಮೊಹಿದೀನ್ ಕಳಂಜ,ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್ ಅಡ್ಡೂರು,ಜಿ.ಎ.ಶಂಸುದ್ದೀನ್ ಅಜ್ಜಿನಡ್ಕ,ಜಿ.ವೈ.ಮುತ್ತಲಿಬ್ ಮೂಡಬಿದ್ರೆ,ಪ್ರಶಾಂತ್ ಚೌಕದಪಾಲು ಮೊದಲಾದವರು ಮಾತನಾಡಿದರು.
ಕೆ.ಎಂ.ಇಖ್ಬಾಲ್ ಬಾಳಿಲ,ನವೀನ್ ಪಿರೇರ ಸುರತ್ಕಲ್,ಹರೀಶ್ ಸುಲಾಯ ಒಡ್ಡಂಬೆಟ್ಟು,ಪತ್ರಕರ್ತ ಗಣೇಶ್ ಅದ್ಯಪಾಡಿ,ಹಾರಿಸ್ ಕಮಾಲ್ ಪುಣಚ,ಎಂ.ಎ.ಅಬ್ದುರ್ರಹ್ಮಾನ್ ಝುಹ್ರಿ ಮಗಿರೆ,ಅಬ್ದುಲ್ ಖಾದರ್ ಕೊಡುಂಗಾಯಿ,ವಿಟ್ಲ,ಹಾಫಿಳ್ ನಈಮಿ ಬೆಳ್ಮ ಉಪಸ್ಥಿತರಿದ್ದರು. ಲೇಖಕ ಎ.ಅಬೂಬಕ್ಕರ್ ಅನಿಲಕಟ್ಟೆ, ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.