ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ತ್ರಿಶೂರ್ ಕೊಡುಂಗಲ್ಲೂರ್ ನಿವಾಸಿ ಅಬುಧಾಬಿಯಲ್ಲಿ ಸುಟ್ಟ ಗಾಯಗಳಿಂದ ನಿಧನರಾದರು. ಮೃತರನ್ನು ದಿವಂಗತ ಪಲ್ಲಿಪುರಂ ಕುಂಜು ಮುಹಮ್ಮದ್ ಅವರ ಪುತ್ರ ಬದ್ರುದ್ದೀನ್ (52) ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಬದ್ರುದ್ದೀನ್ ಅವರು ತಮ್ಮ ರೂಮಿನಲ್ಲಿ ತೀವ್ರ ಸುಟ್ಟ ಗಾಯಗಳೊಂದಿಗೆ ಪತ್ತೆಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬುಧವಾರ ಮುಂಜಾನೆ ನಿಧನರಾದರು.
ಪ್ರಸ್ತುತ ಪಿಕಪ್ ವಾಹನದ ಚಾಲಕನಾಗಿದ್ದ ಬದ್ರುದ್ದೀನ್ ಕಳೆದ 20 ವರ್ಷಗಳಿಂದ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ದಿನಗಳ ಹಿಂದೆ ತಾಯ್ನಾಡಿನಿಂದ ಮರಳಿದ್ದರು. ಘಟನೆಯ ಬಗ್ಗೆ ಅಬುಧಾಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರು ತಾಯಿ, ಪತ್ನಿ, ಮೂವರು ಮಕ್ಕಳು, ಸಹೋದರರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಮೃತದೇಹವನ್ನು ತಾಯ್ನಾಡಿಗೆ ಕೊಂಡೊಯ್ಯೊಲಾಗುವುದು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.