ಕಣ್ಣೂರು (ವಿಶ್ವ ಕನ್ನಡಿಗ ನ್ಯೂಸ್) : ಕಾರಿಗೆ ಬೆಂಕಿ ತಗುಲಿ ಗರ್ಭಿಣಿ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಕಣ್ಣೂರು ನಲ್ಲಿ ನಡೆದಿದೆ. ಕಣ್ಣೂರು ನಗರದ ಜಿಲ್ಲಾ ಆಸ್ಪತ್ರೆಯ ಬಳಿ ಗುರುವಾರ ಬೆಳಿಗ್ಗೆ ಈ ದುರಂತ ಘಟನೆ ನಡೆದಿದೆ. ಮೃತರನ್ನು ಗರ್ಭಿಣಿ ಮಹಿಳೆ ಮತ್ತು ಕಾರನ್ನು ಚಾಲನೆ ಮಾಡುತ್ತಿದ್ದ ಆಕೆಯ ಪತಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಕಣ್ಣೂರು ಕುಟ್ಯಾತೂರ್ ನಿವಾಸಿಗಳಾದ ರೀಶಾ ಮತ್ತು ಪ್ರಜಿತ್ ಎಂದು ಗುರುತಿಸಲಾಗಿದೆ. ಹಿಂಬದಿ ಸೀಟಿನಲ್ಲಿದ್ದ ಮಗು ಸೇರಿದಂತೆ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುರುವಾರ ಬೆಳಗ್ಗೆ 10:30ಕ್ಕೆ ಅಪಘಾತ ಸಂಭವಿಸಿದೆ. ಕಾರಿನ ಮುಂದಿನ ಸೀಟಿನಲ್ಲಿದ್ದವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಾರಿನ ಬಾಗಿಲು ಜಾಮ್ ಆಗಿದ್ದರಿಂದ ವಾಹನದಲ್ಲಿದ್ದವರು ಹೊರಬರಲು ಸಾಧ್ಯವಾಗಲಿಲ್ಲ. ಚಾಲಕನ ಸೀಟಿನಲ್ಲಿದ್ದ ಪ್ರಜಿತ್ ಹಿಂಬಾಗಿಲು ತೆರೆದ. ಈ ಮೂಲಕ ಹಿಂಬದಿ ಸೀಟಿನಲ್ಲಿದ್ದವರು ಪಾರಾಗಲು ಸಾಧ್ಯವಾಯಿತು.
ರೀಶಾ ಅವರ ಪುತ್ರಿ ಶ್ರೀ ಪಾರ್ವತಿ, ತಂದೆ ವಿಶ್ವನಾಥನ್, ತಾಯಿ ಶೋಭನಾ ಮತ್ತು ಕಿರಿಯ ತಾಯಿ ಸಜ್ನಾ ಅವರು ಅಪಘಾತದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ವ್ಯಾಪಿಸಿದ್ದರಿಂದ ದಾರಿಹೋಕರು ಹಾಗೂ ಅಗ್ನಿಶಾಮಕ ದಳದವರು ಮುಂದಿನ ಸೀಟಿನಲ್ಲಿದ್ದವರನ್ನು ಹೊರತರಲು ಸಾಧ್ಯವಾಗಲಿಲ್ಲ. ಬೆಂಕಿ ನಂದಿಸಿದ ಬಳಿಕವೂ ಕಾರಿನಿಂದ ಹೊಗೆ ಏಳುತ್ತಿದ್ದು, ಅಗ್ನಿಶಾಮಕ ದಳ ಮತ್ತೆ ನೀರು ಹಾಯಿಸಿ ಹೊಗೆಯನ್ನು ನಿಯಂತ್ರಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.