(ವಿಶ್ವ ಕನ್ನಡಿಗ ನ್ಯೂಸ್) : SYS ಮಾಡನ್ನೂರ್ ಬ್ರಾಂಚ್ 2021- 2023 ನೇ ಸಾಲಿನ ವಾರ್ಷಿಕ ಮಹಾಸಭೆ 29.01.2023 ಆದಿತ್ಯವಾರ ಸಾಯಂಕಾಲ 4.30 ಕ್ಕೆ ಮಸ್ಜಿದುನ್ನಈಮ್ ಬದ್ರಿಯಾ ಮಜ್ಲಿಸ್ ಸಭಾಂಗಣದಲ್ಲಿ ನಡೆಯಿತು. ಶೇರೀಫ್ ನೆಕ್ಕರೆ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಹುಮಾನ್ಯರದ ಹಾಜಿ ಸ್ವಲಾಹುದ್ದೀನ್ ಸಖಾಫಿ (ಮುದರ್ರಿಸ್ ಮೂಡಡ್ಕ) ದುಆ ಹಾಗೂ ಉದ್ಘಾಟನೆ ಮಾಡಿದರು. ವೀಕ್ಷಕರಾಗಿ ಬಂದ SYS ಸೆಂಟರ್ ಅಧ್ಯಕ್ಷರು ಜಲೀಲ್ ಸಖಾಫಿ, ಕಾರ್ಯದರ್ಶಿ ಹಮೀದ್ ಕೊಯಿಲ, ಶೇರೀಫ್ ಬಡಗನ್ನೂರ್ ಹಾಗೂ ಮುಹಮ್ಮದ್ ಕರ್ನೂರ್ ಭಾಗವಹಿಸಿದರು.
ಕಾರ್ಯದರ್ಶಿ ತಾಜುದ್ದೀನ್ ನಡುವಡ್ಕ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳನ್ನುಓದಿ ಸಭೆಯ ಮುಂದೆ ಇಡಲಾಯಿತು. ಎಲ್ಲರು ತಕ್ಬೀರ್ ನೊಂದಿಗೆ ಅನುಮೋದಿಸಿದರರು. ಸೆಂಟರ್ ನೇತಾರರು ಬ್ರಾಂಚ್ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೆಂಟರ್ ಕಾರ್ಯದರ್ಶಿ ಹಳೆಯ ಕಮೀಟಿಯನ್ನು ನಿಷ್ಕ್ರಿಯಗೊಳಿಸಿ ನೂತನ ಕಮೀಟಿಯ ಆಯ್ಕೆ ಚುನಾವಣಾ ನೀತಿ ನಿಯಮಗಳನ್ನು ಸಭೆಗೆ ತಿಳಿಸಿದರು. ಈ ಸಂಘಟನಾ ವರ್ಷದಿಂದ ಎಲ್ಲ ಯೂನಿಟ್ ಮಟ್ಟದಲ್ಲಿಯೂ ಕರ್ನಾಟಕ ಮುಸ್ಲಿಮ್ ಜಮಾಅತ್ ಸ್ಥಾಪನೆಗೊಳ್ಳಬೇಕಾಗಿದೆ ಮತ್ತು ಅದರ ಅನಿವಾರ್ಯತೆಯನ್ನು ಸಭೆಗೆ ವಿಸ್ತಾರವಾಗಿ ತಿಳಿಸಿದರು. ನಂತರ ನೂತನ KMJ ಹಾಗೂ SYS ಕಮೀಟಿಯನ್ನು ಆಯ್ಕೆ ಮಾಡಲಾಯಿತು.
KMJ SYS ಮಾಡನ್ನೂರ್ ಯೂನಿಟ್ ಗೆ ನೂತನ ಸಾರಥ್ಯ ;
ಎಸ್ವೈಎಸ್ ; ಅಧ್ಯಕ್ಷ : ಅಬ್ದುಲ್ಲ (ಕಾಂಟ್ರ್ಕ್ಟರ್) ಉಪಾಧ್ಯಕ್ಷ : ಇಸ್ಮಾಇಲ್ ಲತೀಫಿ ಪ್ರಧಾನ ಕಾರ್ಯದರ್ಶಿ : ತಾಜುದ್ದೀನ್ ನಡುವಡ್ಕ ಕೋಶಾಧಿಕಾರಿ : ಅಬ್ದುಲ್ಲ ಅಹ್ಸನಿ ದಅ್ವಾ ಕಾರ್ಯದರ್ಶಿ : ತಾಜುದ್ದೀನ್ ಸಅದಿ ಸಾಂತ್ವನ ಕಾರ್ಯದರ್ಶಿ ಅಬ್ದುಲ್ ಹಕೀಮ್ ಸದಸ್ಯರು ; ಸ್ವಲಾಹುದ್ಧೀನ್ ಸಖಾಫಿ, ಸಿರಾಜ್. ಎಂ.ಎ, ಝುಬೈರ್.ಎನ್, ಬಶೀರ್ ಮದನಿ, ಅಬ್ದುಲ್ ರವೂಫ್, ಅಝೀಝ್ ರಿಕ್ಷಾ, ಶರೀಫ್ ಮದನಿ
ಕರ್ನಾಟಕ ಮುಸ್ಲಿಮ್ ಜಮಾಅತ್ ; ಅಧ್ಯಕ್ಷ : ಹಸೈನಾರ್ ಮದ್ಲ ಉಪಾಧ್ಯಕ್ಷರುಗಳು : ಶರೀಫ್ ನೆಕ್ಕರೆ, ಇಝುದ್ದೀನ್ ಮುಸ್ಲಿಯಾರ್ ಪ್ರಧಾನ ಕಾರ್ಯದರ್ಶಿ : ಅಬೂಬಕ್ಕರ್ ಮುಸ್ಲಿಯಾರ್ ಕೋಶಾಧಿಕಾರಿ : ಯೂಸುಫ್ ನೆಕ್ಕರೆ ಜೊತೆ ಕಾರ್ಯದರ್ಶಿಗಳು ; ಅಬ್ದುಲ್ ಖಾದರ್ ಕೊಲಂಬೆ, ಯೂಸುಫ್ ಕಾವು. ಸದಸ್ಯರು ; ಇಬ್ರಾಹಿಂ ಸಅದಿ, ಹಮೀದ್ ಮಾಣಿಯಡ್ಕ, ಮುಹಮ್ಮದ್ ಪುತ್ತುಚ್ಚ, ಹಂಝ ಕಡಬ, ಯೂಸುಫ್ ಕೆ.ಎ, ಕೆ.ಕೆ. ಮೊಯಿದು ಹಾಜಿ, ರಝಾಕ್ ಮುಸ್ಲಿಯಾರ್, ಅಬ್ದುಲ್ ರಹ್ಮಾನ್ ಎನ್.
ಸಭೆಯ ಪ್ರಾರಂಭದಲ್ಲಿ ಅಬ್ದುಲ್ಲ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ಅಜ್ಮೀರ್ ಮೌಲಿದ್ ಹಾಗೂ ಅಗಲಿದ ನೇತಾರರ ಹೆಸರಿನಲ್ಲಿ ತಹ್ಲೀಲ್ ಹೇಳಿ, ಜಲೀಲ್ ಸಖಾಫಿ ದುಆ ನೆರವೇರಿಸಿದರು. ತಾಜುದ್ದೀನ್ ನಡುವಡ್ಕ ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.