ಕುವೈತ್(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಕುವೈತ್ ಇದರ ಅಧೀನದಲ್ಲಿರುವ ನಾರ್ತ್ ಝೋನ್ ಪ್ರತಿಭೋತ್ಸವ ಕಾರ್ಯಕ್ರಮವು ಜನವರಿ 27 ಶುಕ್ರವಾರರಂದು ಸಂಜೆ 5:30 ಗಂಟೆಗೆ ಸಾಲ್ಮಿಯಾದ ಸೂಪರ್ ಮೆಟ್ರೋ ಆಡಿಟೋರಿಯಂ ನಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ನಾರ್ತ್ ಝೋನ್ ಒಳಪಟ್ಟ ಸಿಟಿ, ಫರ್ವಾನಿಯ,ಸಾಲ್ಮಿಯಾ ಮೂರು ಸೆಕ್ಟರ್ ಗಳ ಪ್ರತಿನಿಧಿಗಳು ಪ್ರತಿಭೋತ್ಸವಕ್ಕೆ ಭಾಗವಹಿಸಿದರು. ಪ್ರತಿಭೋತ್ಸವ ಕಾರ್ಯಕ್ರಮದ ನೇತೃತ್ವವನ್ನು ಬಹು ಭಾದುಷಾ ಸಖಾಫಿ ವಹಿಸಿ ತೀರ್ಪುಗಾರರಾಗಿ ಬಹು ಶಫೀಕ್ ಅಹ್ಸನಿ,ಬಹು ಹಮೀದ್ ಸಹದಿ ಹಾಗೂ ಬಹು ಉಮರ್ ಝುಹರಿ ರವರುಗಳು ವಹಿಸಿದರು. ತದನಂತರ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ನಾರ್ತ್ ಝೋನ್ ಅಧ್ಯಕ್ಷರಾದ ಜನಾಬ್ ಖಲಂದರ್ ಶಾಫಿ ಅಧ್ಯಕ್ಷತೆ ವಹಿಸಿ ಸ್ವಾಗತವನ್ನು ಕಾರ್ಯದರ್ಶಿ ಹೈದರ್ ಉಚ್ಚಿಲ ನಿರ್ವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿಯಾದ ಜನಾಬ್ ಯಾಕುಬ್ ಕಾರ್ಕಳ ರವರು ನೆರವೇರಿಸಿದರು.
ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹು ಹುಸೇನ್ ಎರ್ಮಾಡ್ ಉಸ್ತಾದ್ ರವರು ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಬಹು ಕಾಸಿಂ ಉಸ್ತಾದ್, ಜನಾಬ್ ಅಬ್ಬಾಸ್ ಬಳಂಜೆ,INC ಸದಸ್ಯರು ಆದ ಜನಾಬ್ ಝಕರಿಯಾ ಆನೆಕಲ್,ಜನಾಬ್ ಇಬ್ರಾಹಿಂ ವೇಣೂರು, ಜನಾಬ್ ಇಕ್ಬಾಲ್ ಕಂದಾವರ, ಜನಾಬ್ ಮುಸ್ತಫ ಉಳ್ಳಾಲ, ಜನಾಬ್ ಉಮರಬ್ಬ ಕೊಳಕ್ಕೆ, ಜನಾಬ್ ಮುನೀರ್ ಸೋಮವಾರಪೇಟೆ, ಜನಾಬ್ ಯೂಸುಫ್ ಶಿರ್ವ ಉಪಸ್ಥಿತರಿದ್ದರು.
ನಂತರ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಅಂಕಪಟ್ಟಿಯಲ್ಲಿ ಸಿಟಿ ಸೆಕ್ಟರ್ ಪ್ರಥಮ ಪರ್ವಾನಿಯ ಸೆಕ್ಟರ್ ದ್ವಿತೀಯ ಹಾಗೂ ಸಾಲ್ಮಿಯ ಸೆಕ್ಟರ್ ತೃತೀಯ ಸ್ಥಾನವನ್ನು ತಮ್ಮದಾಗಿಸಿದರು. ಕೊನೆಯದಾಗಿ ದುವಾ ನೇತೃತ್ವವನ್ನು ಬಹು ಅಬ್ದುಲ್ ರಹ್ಮಾನ್ ಸಖಾಫಿ ರವರು ನಿರ್ವಹಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.