ಕೊಡಗು(ವಿಶ್ವಕನ್ನಡಿಗ ನ್ಯೂಸ್): SSF ಕೊಡಗು ಜಿಲ್ಲಾ ಮಹಾಸಭೆ ಕುಶಾಲನಗರದಲ್ಲಿ ನಡೆಯಿತು. SYS ಜಿಲ್ಲಾ ನಾಯಕರಾದ ಹಮೀದ್ ಮುಸ್ಲಿಯಾರ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು SSF ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು.
SSF ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಉಸ್ತುವಾರಿಯಾದ ಹಕೀಂ ಸರ್ ಬೆಂಗಳೂರು ಹಾಗೂ ರಾಜ್ಯ ದಅವಾ ಕಾರ್ಯದರ್ಶಿ ಮುನೀರ್ ಸಖಾಫಿ ಉಳ್ಳಾಲರವರ ನೇತೃತ್ವದಲ್ಲಿ ಮಹಾಸಭೆ ನಡೆಯಿತು. ನೂತನ ಸಾರಥಿಗಳನ್ನು SYS ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ ಘೋಷಣೆ ಮಾಡಿದರು.
ಅಧ್ಯಕ್ಷರಾಗಿ ಝುಬೈರ್ ಸಅದಿ ಮಾಲ್ದಾರೆ, ಪ್ರಧಾನ ಕಾರ್ಯದರ್ಶಿಯಾಗಿ ಜುನೈದ್ ಅಮ್ಮತ್ತಿ, ಕೋಶಾಧಿಕಾರಿಯಾಗಿ ಸಯ್ಯಿದ್ ಶಿಹಾಬ್ ತಂಙ್ಙಳ್ ಹೊಸತೋಟ ಹಾಗೂ ಕಾರ್ಯದರ್ಶಿಗಳಾಗಿ ರಫೀಕ್ ಲತೀಫಿ, ಕಮರುದ್ದೀನ್ ಅನ್ವಾರಿ ಸಖಾಫಿ,ರಝಾಕ್ ಸಅದಿ,ಇಬ್ರಾಹಿಂ ಮಾಸ್ಟರ್,ಗಫೂರ್ ಮಾಪಿಳತ್ತೋಡು,ರಿಯಾಝ್ ಗುಯ್ಯ,ಸ್ವಾದಿಕ್ ಕರ್ಕಳ್ಳಿ,ಮೂಸಾ ಅಮಾನಿ, ಶಾಫಿ ಕುಂಜಿಲ, ಆಯ್ಕೆಯಾದರು.
SSF ಮಾಜಿ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, SYS ಕೊಡಗು ಪ್ರಧಾನ ಕಾರ್ಯದರ್ಶಿ ಮೊಯ್ದೀನ್ ಪೊನ್ನತ್ ಮೊಟ್ಟೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ SSF ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಹೊಸತೋಟ, ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಅಝೀಝ್ ಸಖಾಫಿ, ಅಬ್ದುಲ್ ಜಲೀಲ್ ಅಮೀನಿ, ಮುಜೀಬ್ ಕೊಂಡಂಗೇರಿ, ಕೊಡಗು ಜಿಲ್ಲಾ ವಖ್ಫ ಸದಸ್ಯರಾದ ಮೊಯ್ದೀನ್ ಕುಂಞಿ ಬಾಳುಗೋಡ್, SYS ನಾಯಕರಾದ ಹಂಝ ಮಾನಿ,ಹುಸೈನ್ ಕುಶಾಲನಗರ, ಹಸೈನಾರ್ ಕುಶಾಲನಗರ ಉಪಸ್ಥಿತರಿದ್ದರು. ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದರ ಸಮಾರೋಪ ದುಆದೊಂದಿಗೆ ಸಭೆ ಮುಕ್ತಾಯಗೊಂಡಿತು. ಕಾರ್ಯದರ್ಶಿ ರಹೀಂ ಸ್ವಾಗತಿಸಿ ನೂತನ ಕಾರ್ಯದರ್ಶಿ ಜುನೈದ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.