(www.vknews.in) ; ಸ್ವಾಭಿಮಾನಿ ಸಾರ್ವಜನಿಕ ಶಾಲಾ ಪ್ರಶಸ್ತಿ ಸಂಭ್ರಮ ನಿಂಬಳಗೆರೆ ಕಲ್ಯಾಣ ಕರ್ನಾಟಕದ ಗಡಿ ಭಾಗದಲ್ಲಿರುವ ನಿಂಬಳಗೆರೆಯ ಶ್ರೀ.ಬಿ.ಕೆ.ವಿ.ಸರ್ಕಾರಿ ಪ್ರೌಢಶಾಲೆ ಯಲ್ಲಿ ಸ್ವಾಭಿಮಾನಿ ಸಾರ್ವಜನಿಕ ಶಾಲಾ ಪ್ರಶಸ್ತಿ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಶೈಕ್ಷಣಿಕ ಗುಣಮಟ್ಟ ಮತ್ತು ಶಾಲಾ ನಿರ್ವಹಣೆಗೆ ರಾಜ್ಯ ಸರ್ಕಾರವು ದಿನಾಂಕ.05.09.2022ರ ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿಯವರು ಮತ್ತು ಶಿಕ್ಷಣ ಮಂತ್ರಿಗಳಾದ ಶ್ರೀ ನಾಗೇಶ್ ರವರು ಸದರಿ ಶಾಲೆಯ ಮುಖ್ಯ ಗುರುಗಳು ಮತ್ತು SDMC ಅಧ್ಯಕ್ಷರಿಗೆ ಪ್ರಶಸ್ತಿಯ ಮೊತ್ತ 5 ಲಕ್ಷ ರೂಪಾಯಿಯ ಚೆಕ್ ಮತ್ತು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.
ಜೊತೆಗೆ 2022-23 ನೇ ಸಾಲಿನಲ್ಲಿ ಕಲ್ಬುರ್ಗಿ ವಿಭಾಗದ ಅತ್ಯುತ್ತಮ ಸರ್ಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದರ ಸಂಭ್ರಮಾಚರಣೆಯನ್ನು ದಿನಾಂಕ.06.03.2023 ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಬುಡ್ರಿ ಗಂಗಮ್ಮ ರವರು ಉದ್ಘಾಟಿಸಿದರು.ಶಾಲೆಯಲ್ಲಿ ಪ್ರತಿ ತಿಂಗಳು ಹೊರ ತರುವ ಮೊಳಕೆ ಮಾಸ ಪತ್ರಿಕೆ ಯನ್ನು ಬಿಸಿಯೂಟದ ಅಧಿಕಾರಿಗಳಾದ ಶ್ರೀ.ಕೆ.ಜಿ.ಆಂಜನೇಯ ಬಿಡುಗಡೆಗೊಳಿಸಿದರು.
ಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಭಾಷಾ ಲ್ಯಾಬ್ ಹಾಗೂ ಗಣಿತ ಪ್ರಯೋಗಾಲಯವನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಜಗದೀಶ್ ವೀಕ್ಷಿಸಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಡಾ|| ವಿ.ಗಿರೀಶ್ ರವರ ಪರಿಚಯವನ್ನು ಗಣಿತ ಶಿಕ್ಷಕಿಯಾದ ಶ್ರೀಮತಿ ಮಂಗಳಗೌರಮ್ಮ ರವರು ಮಾಡಿದರು. ಅಖಂಡ ಬಳ್ಳಾರಿ ಜಿಲ್ಲೆಯ ಸರ್ವೋತ್ತಮ ಪ್ರಶಸ್ತಿ ಪಡೆದ ಉಪನಿರ್ದೇಶಕರ ಕಛೇರಿಯ ಅಧೀಕ್ಷಕರಾದ ಶ್ರೀ ಮಹಮ್ಮದ್ ರಫೀಕ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಾಲೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಭೂದಾನಿಗಳಾದ ಶ್ರೀ ಬಿ.ಎಸ್.ಕೊಟ್ರೇಶಪ್ಪನವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿದರು. ಹಿರಿಯ ಶಿಕ್ಷಕರಾದ ಎಂ.ಬಿ.ನಾಗರಾಜ್, ಎಸ್. ವಿದ್ಯಾರಣ್ಯ, ಅಂಜಿನಮ್ಮ, ಶಿವಪುತ್ರ ಗೌಡ್ರು ಸರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಶಿಕ್ಷಕರಾದ ಶ್ರೀ.ಕೆ.ವೀರಭದ್ರಪ್ಪ ಮಾಡಿದರು. ಗಣಿತ ಶಿಕ್ಷಕರಾದ ಶರ್ಮತ್ ಕಣದಮನಿ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರಿಯಾಶೀಲ ಮುಖ್ಯ ಗುರುಗಳಾದ ಶ್ರೀ ಜಿ.ಪಕ್ಕೀರಪ್ಪ ವಹಿಸಿದ್ದರು.
ಪ್ರಾಸ್ತಾವಿಕವಾಗಿ GMC ಟ್ರಸ್ಟ್ ಮತ್ತು ದಾವಣಗೆರೆ ಜಿಲ್ಲೆಯ KRVP ಕಾರ್ಯದರ್ಶಿಗಳಾದ ಶ್ರೀ ಗುರು ಸಿದ್ದಸ್ವಾಮಿಯವರು ಮಾತನಾಡಿದರು. SDMC ಅಧ್ಯಕ್ಷರಾದ ಶ್ರೀ ಎಂ.ಜಿ.ಪ್ರಕಾಶ್ ಗೌಡ ಮತ್ತು ಸರ್ವ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭೋಜನ ವ್ಯವಸ್ಥೆಯನ್ನು ನಿಂಬಳಗೆರೆಯ ಸ್ವಾಮಿ ವಿವೇಕಾನಂದ ಟ್ರಸ್ಟ್ ನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.