(www.vknews.in) ; ಕರ್ನಾಟಕ ಇತಿಹಾಸ ಅಕಾಡೆಮಿಯ ಸಾರಥ್ಯದಲ್ಲಿ ಹಾಗು ಕನ್ನಡಿಗರು ದುಬೈ ಮತ್ತು ಗಲ್ಫ್ ರಾಷ್ಟ್ರಗಳ (ಬಹರೇನ್, ಕತಾರ್, ಕುವೈಟ್, ಓಮನ್) ಸಹಯೋಗದೊಂದಿಗೆ ದಿನಾಂಕ: 05.03.2023 ರಂದು “ಇತಿಹಾಸ ದರ್ಶನ” ಉಪನ್ಯಾಸ ಸರಣಿಯ ಉದ್ಘಾಟನ ಸಮಾರಂಭ ಶಾರ್ಜಾದ ಮಖಾನಿ ಇಂಡಿಯನ್ ರೆಸ್ಟೋರೆಂಟ್ ನಲ್ಲಿ ಅತ್ಯಂತ ಅದ್ದೊರಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಭೆಯಲ್ಲಿ ನೆರೆದಿದ್ದ ಎಲ್ಲ ವನಿತೆಯರಿಂದ ದೀಪ ಬೆಳಗುವುದರ ಮೂಲಕ ಚಾಲನೆ ಕೊಡಲಾಯಿತು. ಮಮತಾ ಮೈಸೂರ್, ನಿರುಪಮಾ ದಿನೇಶ್, ವೀಣಾ, ಶಾಂತಲಾ,ಸುಷ್ಮಾ ಹಾಗು ಮೇಘನಾ, ಸಾದನ್ ದಾಸ್, ಅರುಣ್ ಕುಮಾರ್ ಮತ್ತು ವಿಜಯ್ ಗುಜ್ಜರ್, ದೀಪಕ್ ಸೋಮಶೇಖರ್ ಅವರ ವೇದಿಕೆಯ ಉಪಸ್ಥಿತಿಯಲ್ಲಿ ನಡೆಸಲಾಯತು ಮತ್ತು ಆನ್ಲೈನ್ ನಲ್ಲಿ ಸಂಪರ್ಕದಲ್ಲಿ ಇದ್ದ ಕಾರ್ಯಕ್ರಮದ ಮುಖ್ಯ ಅಥಿತಿಗಳು ಶ್ರೀ. ದೇವರಕೊಂಡ ರೆಡ್ಡಿ, ಅಧ್ಯಕ್ಷರು , ಕರ್ನಾಟಕ ಇತಿಹಾಸ ಅಕಾಡೆಮಿ; ಶ್ರೀ. ಧರ್ಮೇಂದ್ರ ಕುಮಾರ್, ಖ್ಯಾತ ಇತಿಹಾಸ ತಜ್ಞ ಮತ್ತು ನೂರಾರು ಸಂಖ್ಯೆಯಲ್ಲಿ ಆನ್ಲೈನ್ ನಲ್ಲಿ ಸಂಪರ್ಕದಲ್ಲಿ ಸಭಿಕರ ಸಾಕ್ಷಿಯಲ್ಲಿ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ನಿರೂಪಣೆಯನ್ನು ವಿಷುಮೂರ್ತಿ ಮೈಸೂರ್ ಅವರು ನಡೆಸಿದರು. ಸ್ವಾಗತ ಭಾಷಣವನ್ನು ಅರುಣ್ ಕುಮಾರ್ ಅವರು ನಡೆಸಿಕೊಟ್ಟರು ಶ್ರೀ. ದೇವರಕೊಂಡ ರೆಡ್ಡಿ, ಶ್ರೀ. ಧರ್ಮೇಂದ್ರ ಕುಮಾರ್, ಮಹೇಶ್ ಗೌಡ – ಅಧ್ಯಕ್ಷರು ಕತಾರ್ ಕರ್ನಾಟಕ ಸಂಘ, ರಾಮಚಂದ್ರನ್ ಸೀತಾರಾಮನ್ – ಅಧ್ಯಕ್ಷರು ಕುವೈಟ್ ಕನ್ನಡ ಕೂಟ ಮತ್ತು ಪ್ರದೀಪ್ ಶೆಟ್ಟಿ – ಬಹರೇನ್ ಕರ್ನಾಟಕ ಸಂಘ, K.P.C.C ಓಮನ್ ಅಧ್ಯಕ್ಷೆ ಡಾ. ನಿರ್ಮಲ ಅಮರೇಶ್, ಸುಗಂಧರಾಜ ಬೇಕಲ್ – ಮಾಜಿ ಅಧ್ಯಕ್ಷರು ಶಾರ್ಜಾ ಕರ್ನಾಟಕ ಸಂಘ, ದಿನೇಶ್ ದೇವಾಡಿಗ ದಂಪತಿಗಳು – M D Elegant Groups, ಸತೀಶ್ ಹಂಗಳೂರ್- ಅಧ್ಯಕ್ಷರು ರಾಮಕ್ಷೇತ್ರೀಯ ಸಂಘ, ಇವರನ್ನು ಸ್ವಾಗತಿಸಿದರು ಮತ್ತು ಈ ಉಪನ್ಯಾಸ ಸರಣಿಯ ಮಹತ್ವವನ್ನು ಹಾಗು ಮುಂದಿನ ಪೀಳಿಗೆಗೆ ನಮ್ಮ ನಾಡಿನ ಭಾಷೆ, ಇತಿಹಾಸ, ಪರಂಪರೆಯನ್ನು ತಿಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಬರಿ ಗಲ್ಫ್ ರಾಷ್ಟ್ರಗಳಿಂದ ಅಲ್ಲದೆ ಇತರೆ ವಿದೇಶಗಳಿಂದಲೂ (ಇಂಗ್ಲೆಂಡ್, ಇಟಲಿ, ಆಸ್ಟ್ರೇಲಿಯಾ, ನೆಡೆರ್ಲ್ಯಾಂಡ್, ಜರ್ಮನಿ ಹೀಗೆ) ಆಸಕ್ತರು ಬಂದಿದ್ದು ಈ ಉಪಕ್ರಮವು ಗಲ್ಫ್ ರಾಷ್ಟ್ರಕ್ಕೆ ಸೀಮಿತಗೊಳ್ಳದೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ಸೂಚನೆ ಸಿಕ್ಕಿದೆ ಎಂದು ತಿಳಿಸಿದರು.
ಅಧ್ಯಕ್ಷ ಭಾಷಣವನ್ನು ಸಾದನ್ ದಾಸ್ ಅವರು ನಡೆಸಿಕೊಟ್ಟರು. ಅವರು ಮಾತನಾಡುತ್ತ ತಮ್ಮನ್ನು ಇತಿಹಾಸ ಅಕಾಡೆಮಿಯ ನೇತೃತ್ವವಹಿಸಲು ಅವಕಾಶ ಮಾಡಿಕೊಟ್ಟಂತಹ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರು ಮತ್ತು ತಂಡಕ್ಕೆ ಧನ್ಯವಾದವನ್ನು ತಿಳಿಸಿದರು. ತಮ್ಮ ಮೇಲೆ ಇರುವ ಕನ್ನಡ ಪರ ಸೇವೆಯನ್ನು ನಿಸ್ವಾರ್ಥವಾಗಿ ನಡೆಸಿಕೊಡುವ ಭರವಸೆಯನ್ನು ಕೊಡುವುದರ ಮೂಲಕ ಇಂತಹ ಒಂದು ಅತಿ ಮಹತ್ವದ ಉದ್ದೇಶವನ್ನು ಶ್ರೀ. ದೇವರಕೊಂಡ ರೆಡ್ಡಿ ಅವರ ಸಲಹೆ ಹಾಗು ಸಹಾಯದಿಂದ ಸಾಕಾರಗೊಳಿಸುವ ವಿಶ್ವಾಸವನ್ನು ಕೊಟ್ಟರು. ಈ “ಇತಿಹಾಸ ದರ್ಶನ” ಸರಣಿಯ ಬಗ್ಗೆ ವಿವರಿಸುತ್ತಾ ಈ ಸರಣಿಯು ನಮ್ಮ ಕನ್ನಡ ಲಿಪಿ ಮತ್ತು ಕರ್ನಾಟಕದ ಇತಿಹಾಸದ ಬಗ್ಗೆ ನಮ್ಮೆಲ್ಲರಿಗೂ ಗೊತ್ತಿಲ್ಲದ ಹಲವಾರು ವಿಷಯಗಳನ್ನು ತರಗತಿ / ಉಪನ್ಯಾಸವನ್ನು ಕರ್ನಾಟಕದ ಪ್ರಸಿದ್ಧ ಬರಹಗಾರರು, ವಾಗ್ಮಿಗಳು, ಕಲಾಕಾರರು ಆನ್ಲೈನ್ ( Zoom ಲಿಂಕ್) ಮೂಲಕ ಪ್ರತಿ ತಿಂಗಳಿನ 2ನೆ ಶನಿವಾರದಂದು ನಡೆಸಿಕೊಡುತ್ತಾರೆ ಹಾಗು ನಮ್ಮೆಲ್ಲರಿಗೂ ನಮ್ಮ ಮಾತೃ ಭೂಮಿ, ಭಾಷೆ, ಪರಂಪರೆಯ ಬಗ್ಗೆ ಉತ್ತಮ ಜ್ಞಾನ ಪಡೆಯಲು ದೊರೆಕಿರುವ ಒಳ್ಳೆಯ ಅವಕಾಶವಾಗಿರುತ್ತದೆ ಎಂದು ತಿಳಿಸಿದರು. ಇದಕ್ಕೆ ಕೈಜೋಡಿಸಿರುವ ಎಲ್ಲ ಗಲ್ಫ್ ರಾಷ್ಟ್ರದ ಕರ್ನಾಟಕ ಸಂಘದ ಅಧ್ಯಕ್ಷರು, ಇತರೆ ವಿದೇಶದಿಂದ ಆಸಕ್ತಿ ತೋರಿರುವ ಕನ್ನಡ ಪರ ಸಂಘಟನೆಯ ಮುಖ್ಯಸ್ಥರುಗಳಿಗೆ ಹೃದಯಪೂರ್ವ ಅಭಿನಂದನೆಯನ್ನು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಹೇಶ್ ಗೌಡ – ಕತಾರ್ ಕರ್ನಾಟಕ ಸಂಘ ಮತ್ತು ರಾಮಚಂದ್ರನ್ ಸೀತಾರಾಮನ್ – ಕುವೈಟ್ ಕನ್ನಡದ ಕೂಟ, K.P.C.C ಓಮನ್ ಅಧ್ಯಕ್ಷೆ ಡಾ. ನಿರ್ಮಲ ಅಮರೇಶ್ ಅವರು ತಮ್ಮ ಸಂಪೂರ್ಣ ಬೆಂಬಲವನ್ನು ಕೊಡುವ ಆಶ್ವಾಸನೆಯನ್ನು ಕೊಟ್ಟರು. ಹಾಗೆಯೇ ಕತಾರ್, ಕುವೈಟ್ ನಲ್ಲಿ ನಡೆಸಿಕೊಂಡು ಬಂದಿರುವ ಕನ್ನಡ ತರಗತಿಯ ಬಗ್ಗೆ ಮಾಹಿತಿಯನ್ನು ತಿಳಿಸಿದರು.
ಖ್ಯಾತ ಇತಿಹಾಸ ತಜ್ಞ ಶ್ರೀ. ಧರ್ಮೇಂದ್ರ ಕುಮಾರ್ ಅವರು ತಮ್ಮನ್ನು ಇಂತಹ ಸದುದ್ದೇಶ ಒಂದಿರುವ ಕನ್ನಡ ಪರ ಸೇವೆಗೆ ಬರಮಾಡಿಕೊಂಡಿರುವುದಕ್ಕೆ ಕನ್ನಡಿಗರು ದುಬೈ ಗೆ ಧನ್ಯವಾದವನ್ನು ತಿಳಿಸಿದರು. ಅವರು ಮಾತನಾಡುತ್ತ, ಮೈಸೂರಿನ ಬಗ್ಗೆ ಒಂದೆರಡು ತುಣುಕು ವಿಷಯಾವನ್ನು ತಿಳಿಸುವುದರ ಮೂಲಕ ಈ ಉಪನ್ಯಾಸ ಸರಣಿಯ ಮಹತ್ವ, ಕುತೂಹಲತೆಯನ್ನು ನೆರೆದಿದ್ದ ಸಭಿಕರಲ್ಲಿ ಮೂಡಿಸಿದರು.
ಮುಖ್ಯ ಅತಿಥಿ ಭಾಷಣವನ್ನು ಶ್ರೀ. ದೇವರಕೊಂಡ ರೆಡ್ಡಿ ಅವರು ನಡೆಸಿಕೊಟ್ಟರು. ಅವರು, ಸಾದನ್ ದಾಸ್ ಮತ್ತು ತಂಡಕ್ಕೆ ಅಭಿನಂಧನೆಯನ್ನು ತಿಳಿಸಿದರು. ಇಂತಹ ಸರಣಿಗಳು ನಮ್ಮ ನಾಡು, ಭಾಷೆಯನ್ನು ಉಳಿಸಿವ ನಿಟ್ಟಿನಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುತ್ತದೆ ಎಂದು ತಿಳಿಸಿದರು. ಕರ್ನಾಟಕ ಇತಿಹಾಸ ಅಕ್ಯಾಡೆಮಿಯು ಎಲ್ಲ ರೀತಿಯ ಸಹಕಾರವನ್ನು ಕೊಡುವುದಾಗಿ ಹೇಳಿದರು.
ಕನ್ನಡ ಲಿಪಿ, ಸಾಹಿತ್ಯ, ಪರಂಪರೆಯು ಸಾಗರದಷ್ಟು ವಿಸ್ತಾರವಾಗಿದ್ದು, ಇದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಹಲವು ವರ್ಷಗಳ ಪ್ರಯಾಣ ಎಂದು ಹೇಳಿದರು. ಇದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಜವಾಬ್ದಾರಿಯನ್ನು ಸಾದನ್ ದಾಸ್ ಅವರಿಗೆ ನೀಡಿರುವ ಬಗ್ಗೆ ವಿಶ್ವಾಸವನ್ನು ಹೊಂದಿರುವುದಾಗಿ ತಿಳಿಸಿದರು. ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತ ಶ್ರೀ. ದೇವರಕೊಂಡ ರೆಡ್ಡಿ ಅವರು ಕನ್ನಡ ಲಿಪಿಯ ಬಗ್ಗೆಗಿನ ಇತಿಹಾಸವನ್ನು ತೆರೆದಿಡುವುದರ ಮೂಲಕ ನೆರೆದಿದ್ದ ಸಭಿಕರುಗಳಿಗೆ ಕನ್ನಡ ಲಿಪಿ ಯ ಬಗ್ಗೆ ಇರುವ ಆಸಕ್ತಿಯನ್ನು ದುಪ್ಪಟ್ಟು ಮಾಡಿಮುಂದಿನ ಸರಣಿಗೆ ಕಾಯುವ ತವಕವನ್ನು ಹೆಚ್ಚಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ವಿಜಯ್ ಗುಜ್ಜರ್ ಅವರು ನಡೆಸಿಕೊಟ್ಟರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.